ಆರ್.ಸಿ.ಬಿ. ವಿಜಯೋತ್ಸವದ ಸಂಭ್ರಮದಲ್ಲಿ 11ಜನರ ಬಲಿ ತೆಗೆದುಕೊಂಡ ರಾಜ್ಯ ಸರ್ಕಾರದ ವಿರುದ್ಧ ಕಿಡಿ: ತಾಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ

ಕೃಷ್ಣರಾಜಪೇಟೆ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಂತರ ಮಾತನಾಡಿದ ಅವರು 17ನೇ ವರ್ಷದ ನಂತರ ವಿಜಯ ಸಾಧಿಸಿದ ಆರ್. ಸಿ.ಬಿ. ತಂಡದ ವಿಜಯೋತ್ಸವವನ್ನು. ಸರ್ಕಾರವು ತಾರಾ-ತುರಿಯಲ್ಲಿ ನಡೆಸಿದ್ದಾರೆ ಮತ್ತೆ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು 11ಜನ ಕಾಲ್ತುಳಿದಲ್ಲಿ ಸಾವಿಗೆ ಈಡಾಗಿರುವ ಹಿನ್ನೆಲೆ ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ. ತುರಾ-ತೂರಿಯಲ್ಲಿ ವಿಜಯೋತ್ಸವವನ್ನು ಆಚರಿಸುವ ಅಗತ್ಯವೆನಿತ್ತು ಎಂದು. ಪಟ್ಟಣದ ಟಿ.ಬಿ ಸರ್ಕಲ್ ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಗೃಹ ಮಂತ್ರಿಗಳು ಕೂಡಲೆ ರಾಜೀನಾಮೆಯನ್ನು ನೀಡಬೇಕೆಂದು ಪ್ರತಿಭಟನೆಯನ್ನು ನಡೆಸಿದರು,_

_ಈ ಸಂದರ್ಭದಲ್ಲಿ ಬಿಜೆಪಿ. ತಾಲ್ಲೂಕು ಅಧ್ಯಕ್ಷರಾದ ಸಾರಂಗಿ ನಾಗಣ್ಣ, ತಾಲ್ಲೂಕು ಉಪಾಧ್ಯಕ್ಷ ಭಾರತಿಪುರ ಪುಟ್ಟಣ್ಣ ರೈತ ಮೋರ್ಚಾ ಅಧ್ಯಕ್ಷ ಯೋಗೀಶ್ ಗೌಡ, ಎ.ಸಿ ಮೋರ್ಚಾ ಅಧ್ಯಕ್ಷ ಯಾಲಕಯ್ಯ, ಕೃಷ್ಣರಾಜಪೇಟೆ ತಾಲ್ಲೂಕು ಉಸ್ತುವಾರಿ ಆಶೋಕ್ ಪಾಂಡವಪುರ, ತಾಲೂಕು ಪ್ರದಾನ ಕಾರ್ಯದರ್ಶಿ ರವಿ.ಎಸ್. ಆರ್, ಒಬಿಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ್, ಎಸ್.ಟಿ. ಮೊರ್ಚಾ ಅಧ್ಯಕ್ಷ ರಾಜು. ಜಿ.ಪಿ. ಮಹಿಳಾ ಘಟಕದ ದಿವ್ಯ, ಶಿಲ್ಪ, ಬಿಜೆಪಿ ಪಕ್ಷದ ಎಲ್ಲಾ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು,_

ವರದಿ: ಸಾಯಿಕುಮಾರ್. ಎನ್. ಕೆ