ರಸ್ತೆ ಮಧ್ಯದಲ್ಲಿರುವ ಕಲ್ಲೇ ವಾಹನ ಸವಾರರಿಗೆ ಶ್ರೀರಕ್ಷೆಯೆ?
ಕೊರಟಗೆರೆ:ಅದು ಪ್ರಮುಖ ಹೆದ್ದಾರಿಗಳಿಗೆ ಸಂಪರ್ಕಗಳನ್ನು ಕಲ್ಪಿಸುವ ರಸ್ತೆ. ಆ ರಸ್ತೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಗಲೀಕರಣ ಮತ್ತು ಡಾಂಬರ್ ಕಾಮಗಾರಿಯನ್ನು ಮಾಡುತ್ತಿದ್ದು. ಕಳೆದ ಒಂದೆರಡು ತಿಂಗಳಿಂದ ಕಾಮಗಾರಿಯನ್ನು ಮಾಡುತ್ತಿದ್ದು. ಅವೈಜ್ಞಾನಿಕವಾಗಿ ಯಾವುದೇ ರಸ್ತೆ ಸುರಕ್ಷತೆ ಇಲ್ಲದೆ ರಸ್ತೆ ನಿರ್ಮಾಣದ ವೇಳೆ ಕೈಗೊಳ್ಳಬೇಕಾದ ಸುರಕ್ಷತೆಯನ್ನು ಕೈಗೊಳ್ಳದೆ ಇರುವುದು ಕೊರಟಗೆರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಅಭಯಹಸ್ತದಿಂದ ರಸ್ತೆ ನಿರ್ಮಾಣದ ಜಾಗವನ್ನು ಆಕ್ಸಿಡೆಂಟ್ ಜೋನ್ ಹಾಗಿ ಪರಿಣಮಿಸಿ ಸಾರ್ವಜನಿಕ ಜೀವದ ಜೊತೆ ಚೆಲ್ಲಾಟವನ್ನು ಹಾಡುತಿದ್ದು. ಅಪಘಾತಗಳಿಗೆ ಆಹ್ವಾನ ನೀಡುತ್ತಿದು. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಕೊರಟಗೆರೆ ತಾಲ್ಲೂಕು ಕೋಳಲ ಹೋಬಳಿಯ ಕೋಳಾಲ ಗ್ರಾಮದ ಹೃದಯ ಭಾಗದಲ್ಲಿ ನಡೆಯುತ್ತಿರುವಂತ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿಯು ಅವೈಜ್ಞಾನಿಕತೆಯಿಂದ ಮಾಡಲಾಗುತ್ತಿದ್ದು. ರಸ್ತೆಯ ಮಧ್ಯದಲ್ಲಿ ಬ್ಯಾರಿಕೆಟ್ ಅಥವಾ ಸೂಚನಾ ಫಲಕಗಳನ್ನು ಬಳಸದೆ ದಪ್ಪ ದಪ್ಪ ಸೈಜ್ ಗಳುಗಳನ್ನು ರಸ್ತೆ ಮಧ್ಯದಲ್ಲಿ ಇಟ್ಟು ರಸ್ತೆ ನಿರ್ಮಾಣ ಮಾಡುತ್ತಿರುವುದು ಹಾಗೂ ರಸ್ತೆಯ ಸುರಕ್ಷತೆ ಬಗ್ಗೆ ಗಮನ ಹರಿಸದ ಇಂಜಿನಿಯರ್ ರವರ ಬೇಜವಾಬ್ದಾರಿ, ರಸ್ತೆಯ ಅಪಘಾತಗಳಿಗೆ ಕಾರಣವಾಗಬಹುದು. ಈ ಸ್ಥಳದಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆ ಹಾಗೂ ಚೇತನ ಸ್ಕೂಲ್ ಮಕ್ಕಳು ದಿನನಿತ್ಯ ಸಂಚಾರ ಮಾಡುತ್ತಿದ್ದು ಈಗಾಗಲೇ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿರುವ ಉದಾಹರಣೆಗಳು ಕೂಡ ಇವೆ.
ಈ ಬಗ್ಗೆ ಸಾರ್ವಜನಿಕವಾಗಿ ವಿರೋಧ ಕೇಳಿ ಬಂದಿದ್ದು, ಶಿವು ಎಂಬುವವರು ಮಾತನಾಡಿ ರಸ್ತೆ ಅಗಲೀಕರಣ ಮತ್ತು ಡಾಂಬರು ಜನರಿಗೆ ಒಳ್ಳೆಯದೇ ಆದರೂ ರಸ್ತೆ ನಿರ್ಮಾಣದ ನಿಬಂಧನೆಗಳನ್ನು ಪಾಲಿಸುವುದು ಅಷ್ಟೇ ಮುಖ್ಯ ನಾವು ದಿನನಿತ್ಯ ಕೋಳಾಲದಲ್ಲಿ ಸಂಚಾರವನ್ನು ಮಾಡುತ್ತಿದ್ದು. ರಸ್ತೆ ಮಧ್ಯದಲ್ಲಿ ದಪ್ಪ ದಪ್ಪಗಳನ್ನು ಇಟ್ಟು ರಸ್ತೆ ನಿರ್ಮಾಣ ಮಾಡುತ್ತಿರುವುದು ಒಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು. ಯಾವುದೇ ಸೂಚನಾ ಫಲಕಗಳಿಲ್ಲದೆ ರಸ್ತೆ ಸುರಕ್ಷತೆ ಇಲ್ಲದೆ ರಸ್ತೆ ನಿರ್ಮಾಣ ಮಾಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷತನವನ್ನು ಎತ್ತಿ ತೋರಿಸುತ್ತದೆ. ಈ ರಸ್ತೆಯಲ್ಲಿ ಬಸ್ಸು ಕಾರು ಬೈಕು ಮುಂತಾದ ವಾಹನಗಳು ಸಂಚರಿಸುತ್ತಿದ್ದು ಹೆಚ್ಚಿನ ಧೂಳಿಂದ ಕೂಡಿದ್ದು ಹಾಗೂ ಈ ರೀತಿ ರಸ್ತೆ ಮಧ್ಯದಲ್ಲಿ ಕಲ್ಲುಗಳನ್ನು ಹಾಕಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಸರಿ ಇಲ್ಲ. ಇದರಿಂದ ಅಪಘಾತ ಉಂಟಾಗಿ ಸಾವು ನೋವು ಉಂಟಾದರೆ ಇದಕ್ಕೆ ಯಾರು ಕಾರಣಕರ್ತರು ಎಂದು ಪ್ರಶ್ನಿಸಿದ್ದಾರೆ.ಈ ಬಗ್ಗೆ ಸಂಬಂದ ಪಟ್ಟ ಅಧಿಕಾರಿಗಳು ಗಮನಹರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ:ಭರತ್ ಕೆ