ನಂದಿನಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವ ಮೂಲಕ ರೈತರ ಹಿತ ಕಾಪಾಡಿ–ಡಿ.ಕೆ ಸುರೇಶ್

ದೊಡ್ಡಬಳ್ಳಾಪುರ : ನಂದಿನಿ ಹಾಲು ಪರಿಶುದ್ಧವಾದ ಹಾಲು, ಸಂಜೆ ರೈತರಿಂದ ಸಂಗ್ರಹಿಸುವ ಹಾಲನ್ನು ಬೆಳಗ್ಗೆ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ಹೊಂದಿದ್ದು, ಗ್ರಾಹಕರ ಆರೋಗ್ಯದ ದೃಷ್ಠಿಯಿಂದ ಗುಣಮಟ್ಟದ ಹಾಲನ್ನು ನೀಡುತ್ತಿರುವುದ್ದಾಗಿ ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು

ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಅಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಜಿಲ್ಲೆಯ ನಾಯಕರು ಬಮೂಲ್ ಜವಾಬ್ದಾರಿಯನ್ನ ನನಗೆ ನೀಡಿದ್ದಾರೆ, ಬಮೂಲ್ ಅಧ್ಯಕ್ಷನಾದ ನಂತರ ಸುಧೀರ್ಘವಾದ ಚಿಂತನೆ ಮಾಡಿದ ನಂತರ ರೈತರ ಎದುರಿಸುತ್ತಿರುವ ಸಮಸ್ಯೆ ಗೊತ್ತಾಗಿದೆ.
ಬಮೂಲ್ ಒಕ್ಕೂಟದಲ್ಲಿ ಪ್ರತಿದಿನ 17 ರಿಂದ 18 ಲಕ್ಷ ಹಾಲು ಸಂಗ್ರಹವಾಗುತ್ತದೆ, ಗುಣಮಟ್ಟದ ಹಾಲಿನ ನಿರ್ವಹಣೆ ಮಾಡುವುದು , ರೈತರಿಗೆ ಒಳ್ಳಯೇ ಬೆಲೆ ಕೊಡುವುದು ಮತ್ತು ಗ್ರಾಹಕರ ಹಿತವನ್ನ ಕಾಯುವ ಜವಬ್ದಾರಿ ನಮ್ಮ ಮೇಲಿದೆ. ಸಹಕಾರ ತತ್ವದೊಂದಿಗೆ ಇದನ್ನು ಕಾಪಾಡಿಕೊಂಡು ಹೋಗ ಬೇಕಿದೆ ಎಂದರು.

ನಂದಿನಿ ಹಾಲು ಪರಿಶುದ್ಧವಾದ ಹಾಲು, ಜನರ ಆರೋಗ್ಯದ ದೃಷ್ಠಿಯಿಂದ ಅವತ್ತಿನ ಹಾಲನ್ನ ಅವತ್ತೇ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ಇಟ್ಟುಕೊಂಡಿದ್ದೇವೆ, ಸಂಜೆ ರೈತರಿಂದ ಸಂಗ್ರಹಿಸಿದ ಹಾಲನ್ನು ಬೆಳಗ್ಗೆ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ನಾವು ಇಟ್ಟುಕೊಂಡಿದ್ದೇವೆ, ಇದರ ಜೊತೆಯಲ್ಲಿ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ಪೈಪೋಟಿ ಸಹ ಇದ್ದು, ಅವುಗಳ ಪೈಪೋಟಿ ನಡುವೆಯೂ ಗ್ರಾಹಕರ ಆರೋಗ್ಯದ ದೃಷ್ಠಿ ಇಟ್ಟುಕೊಂಡು ನಂದಿನಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.

160ಕ್ಕೂ ಹೆಚ್ಚು ಹಾಲಿನ ಉತ್ಪನಗಳನ್ನ ಮಾರುಕಟ್ಟೆಯಲ್ಲಿವೆ, ಆದರೆ ಇದುವರೆಗೂ 160 ನಂದಿನಿ ಉತ್ಪನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಇಲ್ಲ, ಅದನ್ನ ಪ್ರಚಾರ ಮಾಡುವ ಮೂಲಕ ರೈತರ ಹಿತವನ್ನ ಕಾಯಬೇಕಿದೆ.
ನಂದಿನಿ ತುಪ್ಪವನ್ನ ತಿರುಪತಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಬಮೂಲ್ ಅಧ್ಯಕ್ಷನಾದ ಒಂದೂವರೆ ತಿಂಗಳ ಅವಧಿಯಲ್ಲಿ ಅಧಿಕಾರಿಗಳು, ಹೊಟೇಲ್ ಮಾಲೀಕರ ಸಂಘಗಳು ಮತ್ತು ಉದ್ಯಮಿಗಳ ಜೊತೆ ಮಾತನಾಡಿದ್ದಾಗ ಕಳಪೆ ಗುಣಮಟ್ಟದ ಪದಾರ್ಥಗಳನ್ನ ಹಾಲಿಗೆ ಬೇರೆಸುತ್ತಿರುವುದು ಕಂಡು ಬಂದಿದೆ. ಗ್ರಾಹಕರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಪನ್ನಿರು ಖರೀದಿ ಮಾಡುತ್ತಾರೆ, ಇತರೆ ಕಂಪನಿಗಳ ಕಡಿಮೆ ಬೆಲೆಯ ಪನ್ನಿರು ಸೇವೆನೆ ಮಾಡಿದ್ದಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು, ಚಿಕಿತ್ಸೆಗಾಗಿ ಮತ್ತಷ್ಟು ಹಣವನ್ನು ನೀವು ಖರ್ಚು ಮಾಡ ಬೇಕಾಗುತ್ತದೆ, ಎಲ್ಲರು ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಮಾಜಿ ಶಾಸಕ ಅಪಕಾರನಹಳ್ಳಿ, ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಡಿ. ಪಿ. ಎ. ಅಧ್ಯಕ್ಷ ಚುಂಚೆಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಕೆ. ಪಿ. ಸಿ. ಸಿ. ಸದಸ್ಯ ಬಿ. ಜಿ. ಹೇಮಂತರಾಜ್, ನಗರಸಭಾ ಸದಸ್ಯರಾದ ಅಲ್ತಾಫ್, ಕಾಂತರಾಜ್, ವಾಣಿ, ಅಖಿಲೇಶ್, ಮುಖಂಡರಾದ ಆದಿತ್ಯ ನಾಗೇಶ್, ಡಿ. ಪಿ. ಎ. ಸದಸ್ಯ ರಾದ ರಾಮಣ್ಣ, ಅಂಜನ್ ಮೂರ್ತಿ, ರೇವತಿ ಅನಂತರಾಮ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.