ಬಾರ್ ಮಾಲಿಕರ ಸಂಘದ ನೂತನ ಅದ್ಯಕ್ಷರಾಗಿ ಎಸ್. ಆರ್. ರವಿಕುಮಾರ್ ಆಯ್ಕೆ

ದೇವನಹಳ್ಳಿ:ಅಬಕಾರಿ ಇಲಾಖೆ ಹಾಗೂ ಬಾರ್ ಮಾಲಿಕರ ಸಂಘದಿಂದ ವರ್ಗವಾದ ಅದಿಕಾರಿಗೆ ಬಿಳ್ಕೂಡಿಗೆ ನೂತನ ಅದಿಕಾರಿ ಚಿರಂಜೀವಿ ಅವರಿಗೆ ಸ್ವಾಗತ ಹಾಗೂ ನೂತನ ಅದ್ಯಕರ ಆಯ್ಕೆ ಸಮಾರಂಭ ನಡೆಯಿತು.

ಸನ್ಮಾನ ಸ್ವಿಕರಿಸಿದ ಬಳಿಕ ಮಾತನಾಡಿದ ದೇವನ
ತಾಲೂಕು ಬಾರ್ ಮಾಲಿಕರ ಸಂಘದ ನೂತನ ಅದ್ಯಕ್ಷ ಎಸ್.ಆರ್. ರವಿಕುಮಾರ್ ಅವರು ಮಾತ ನಾಡಿ, ನಮ್ಮ ತಾಲ್ಲೂಕಿನಲ್ಲಿ ಅಬಕಾರಿ ಇಲಾಖೆ ಅದಿಕಾರಿ ಸುನಿಲ್ ಕುಮಾರ್ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ಸವಿನೆನಪಿಗಾಗಿ ಬಿಳ್ಕೂಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಾರ್ ಮಾಲಿಕರ ಮೇಲೆ ಇತ್ತಿಚೆಗೆ ಗ್ರಾಹಕರ ಅಗತ್ಯಕಿಂತ ಹೆಚ್ಚು ಮದ್ಯ ಮಾರಾಟ ಮಾಡುವ ಟಾರ್ಗೆಟ್ ನೀಡುವುದರಿಂದ ಲಾಭಕ್ಕಿಂತ ನಷ್ಟದ ಸಂಕಷ್ಟ ಎದುರಿಸುತಿದ್ದಾರೆ. ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟಿರುವ ತಾಲ್ಲೂಕಿನ ಎಲ್ಲ ಬಾರು ಮಾಲಿಕರುಗಳಿಗೆ ಅಬಾರಿ. ನಮ್ಮ ಬಾರು ಮಾಲಿಕರ ಮೇಲೆ ಸರ್ಕಾರ ಅನಗತ್ಯವಾಗಿ ಹೆರುವ ಹೊರೆಯನ್ನು ಅಲ್ಪವಾದರು ತಪ್ಪಿಸಿ ತಮ್ಮೆಲ್ಲರ ಹಿತಕಾಯವ ಭರವಸೆ ನೀಡಿದರು.

ಬಾರ್ ಮಾಲಿಕರ ಸಂಘದ ಪದಾದಿಕಾರಿಗಳಾದ
ಜಯರಾಮ್, ಗೊಡ್ಲುಮುದ್ದೇನಹಳ್ಳಿ ಸುರೇಶ್, ಅಣ್ಣೇಶ್ವರ ಜಗದೀಶ್, ಹರೀಶ್,  ಸೇರಿದಂತೆ ನೂರಾರು ಬಾರ್ ಮಾಲಿಕರು ಹಾಜರಿದ್ದರು.