--ಜಾಹೀರಾತು--

ಗೋಮಾಳ ಒತ್ತುವರಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

On: December 16, 2025 7:42 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಗೋಮಾಳ ಒತ್ತುವರಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ

ಹೊಸಕೋಟೆ : ಸುಮಾರು 5 ಎಕರೆ ಸರಕಾರಿ ಜಾಗ ಹಾಗೂ ಒಂದು ಎಕರೆ ಕರಾಬು ಜಾಗವನ್ನು ಸಹ ಒತ್ತುವರಿ ಮಾಡಿ ರಸ್ತೆ ಪಾರ್ಕ್ ನಿರ್ಮಾಣ ಮಾಡಿ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದು ಲಕ್ಷಾಂತರ ರೂಪಾಯಿ ಹಣಕ್ಕೆ ಮಾರಾಟ ಮಾಡುವ ಮುಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದು ಭೂಗಳ್ಳರ ಹಾವಳಿ ತಪ್ಪಿಸ ಬೇಕು ಎಂದು ಕರ್ನಾಟಕ ಮಹಾಜನ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ಮAಜುನಾಥ್ ಒತ್ತಾಯಿಸಿದ್ದಾರೆ

ತಾಲೂಕಿನ ಜಡಿಗೇನಹಳ್ಳಿ ಹೋಬಳಿ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡನಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಹಾಗೂ ರಾಜಕಾಲುವೆಯ 5 ಎಕರೆ ಜಮೀನು ಒತ್ತುವರಿ ಮಾಡಿ ಖಾಸಗಿ ಬಿಲ್ಡರ್ ಗಳು ಲೇಔಟ್ ನಿರ್ಮಾಣ ಮಾಡುವ ಮುಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದು ಭೂಗಳ್ಳರ ಹಾವಳಿ ತಪ್ಪಿಸಿ ಸರ್ಕಾರಿ ಆಸ್ತಿಯನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿ ನೂರಾರು ಮಂದಿ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ತಹಶೀಲ್ದಾರ್ ಬೇಟಿ

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸೋಮಶೇಖರ್ ಅವರು ಕಂದಾಯ ನಿರೀಕ್ಷಕ ,ಗ್ರಾಮ ಲೆಕ್ಕಾಧಿಕಾರಿ ಹಾಗೂ ಸರ್ವೇ ಅಧಿಕಾರಿಗಳಿಂದ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿ ಮೂಲ ದಾಖಲೆಗಳು ಹಾಗೂ ಈಗಿನ ಸರ್ವೇ ವರದಿ ವೀಕ್ಷಣೆ ಮಾಡಿ ಸ್ಥಳ ಪರಿಶೀಲನೆ ನಡೆಸಿದರು. ಒತ್ತುವರಿ ಮಾಡಿರುವ ಜಾಗ ಸರ್ಕಾರಿ ಸ್ಮಶಾನ , ಗೋಮಾಳಕ್ಕೆ ಮೀಸಲಿಟ್ಟಿದ್ದು ಜಮೀನಿನ ಮೂಲ ದಾಖಲೆಗಳನ್ನು ಬದಲಾಯಿಸಿ ಹಣದ ಆಸೆಗೆ ಖಾಸಗಿ ಬಿಲ್ಡರ್ ಗಳಿಗೆ ಮಾರಾಟ ಮಾಡಲಾಗಿದೆ. ಸರ್ಕಾರಿ ಗೋಮಾಳದ ಜಾಗವನ್ನು ಉಳಿಸಿಕೊಡಬೇಕು ಹಾಗೂ ರಾಜಕಾಲುವೆಯನ್ನು ತೆರವುಗೊಳಿಸಿ ಕೊಡಬೇಕು ಎಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.
ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ಮಹಾಜನ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ಮAಜುನಾಥ್ ಮಾತನಾಡಿ, ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಒತ್ತುವರಿ ಜಾಗವನ್ನು ಈಗಾಗಲೆ ಸರ್ವೆ ಮಾಡಲಾಗಿದ್ದು ವರದಿಯಲ್ಲಿ ಲೋಪದೋಷಗಳು ಕಂಡುಬAದರೆ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಅಥವಾ ಆ ವರದಿ ಸರಿಯಾಗಿ ಇದ್ದಲ್ಲಿ ಒತ್ತುವರಿ ಜಾಗವನ್ನು ತರೆವುಗೊಳಿಸುವ ಕಾರ್ಯ ಮಾಡಬೇಕು. ಅದನ್ನು ಬಿಟ್ಟು ಜಂಟಿ ಸರ್ವೆ ಕಾರ್ಯ ಮಾಡಿಸುವುದಾಗಿ ಹೇಳಿ ಅಧಿಕಾರಿಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವುದು ಸರಿಯಲ್ಲ. ಕಾನೂನಿಗೆ ಗೌರವ ನೀಡಿ ನಿಷ್ಪಕ್ಷಪಾತವಾಗಿ ವರದಿ ನೀಡುವವರೆಗೆ ಕಾಯುತ್ತೇವೆ. ವರದಿ ನೀಡುವವರೆಗೆ ಈ ಜಾಗದಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಯಥಾಸ್ಥಿತಿ ಕಾಪಾಡಬೇಕು. ಇಲ್ಲದೇ ಹೋದಲ್ಲಿ ನ್ಯಾಯಾಲಯದ ಮೋರೆ ಹೋಗುತ್ತೇವೆ. ರಾಜಕೀಯ ಒತ್ತಡ ಹಾಗೂ ಪ್ರಭಾವಿಗಳ ಕೈಗೊಂಬೆಯಗಿ ಅಧಿಕಾರಿಗಳು ಕುಣಿದದ್ದೇ ಆದರೆ ಈ ವಿಚಾರವಾಗಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೆಚ್ಚರಿಕೆ ನೀಡಿದರು,

———————————————————————-
ಸ್ಥಳೀಯರ ಗಮನಕ್ಕೆ ತರದೆ ಹಾಗೂ ನೋಟಿಸ್ ನೀಡಿದೆ ಏಕಪಕ್ಷೀಯವಾಗಿ ಭೂ ಪರಿವರ್ತನೆ ಮಾಡಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಈ ಸಂಬAಧ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಗಿದೆ.ಈ ಹಿಂದೆ ಯಾವ ವರದಿ ಆದರದ ಮೇಲೆ ಭೂ ಪರಿವರ್ತನೆ ಮಾಡಲಾಗಿದೆ ಎಂಬ ಮಾಹಿತಿ ಪಡೆಯಲಾಗುವುದು. ಈ ಜಮೀನು ಭೂ ಪರಿವರ್ತನೆಯಾಗಿರುವುದರಿಂದ ಮೂಲ ಸ್ವರೂಪ ಕಳೆದುಕೊಂಡಿದೆ. ಹಳೆ ವರದಿಗಳನ್ನು ಪಡೆದುಕೊಂಡು ಜಂಟಿಯಾಗಿ ಮತ್ತೆ ಸರ್ವೆ ಕಾರ್ಯ ಮಾಡಿಸಿ ಪಾರದರ್ಶಕವಾಗಿ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಯುತವಾಗಿ ವರದಿ ಕೊಡಿಸುವ ಕಾರ್ಯ ಮಾಡುತ್ತೇವೆ.

ಸೋಮಶೇಖರ್ ತಹಶೀಲ್ದಾರ್

 

Read this too

*ಜಯಕರ್ನಾಟಕ ಸಂಘಟನೆಯು ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದೆ* ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್

ಭರವಸೆಯ ನೃತ್ಯಕಲಾವಿದೆ ವಿದಿತಾ ನವೀನ್ ರಂಗಪ್ರವೇಶ

ಪಂಚ ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಕುಂದು ಕೊರತೆ ಸಭೆ ಮಹಿಳಾ ಸಬಲೀಕರಣ ಆರ್ಥಿಕ ಪರಿಸ್ಥಿತಿ ಸುಧಾರಣೆ – ಚಿಕ್ಕ ಹುಲ್ಲೂರು ಬಚ್ಚೇಗೌಡ

ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ರಾಜ್ಯದಲ್ಲೇ ಮಾದರಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

*ಭಾರತ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರಿಂದ ಹಣ್ಣು ಹಂಪಲು ವಿತರಣೆ*

ಎಚ್ ಡಿ ಕೆ, ಹುಟ್ಟುಹಬ್ಬದ ಪುಟ್ಟಸ್ವಾಮಿರವರಿಂದ ವಿಶೇಷ ಪೂಜೆ