ಆಪಲ್ ಕಂಪನಿ ವಿರುದ್ಧ ಕ.ರ ವೇ ಆಕ್ರೋಶ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇತ್ತೀಚೆಗೆ ಆಪಲ್ ಕಂಪನಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಆದರೆ ಇಲ್ಲಿಗೆ ಬರುವ ಕಾರ್ಮಿಕರು ಅತಿ ಹೆಚ್ಚು ಕನ್ನಡಿಗರಾಗಿರಬೇಕು ಹೊರತು ಬೇರೆ ರಾಜ್ಯದವರಿಗೆ ಉದ್ಯೋಗ ನೀಡಿದ್ದೆ ಆದರೆ ಪರಿಣಾಮ ಬೇರೆ ಆಗತ್ತದೆ ಎಂದು ಇಲ್ಲಿನ ಕರವೇ ಬಳಗ ಎಚ್ಚರಿಕೆ ನೀಡಿದೆ, ಇಂದು ಗುರುವಾರ ಆಪಲ್ ಕಂಪನಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ದೊಡ್ಡ ಸದ್ದು ಮಾಡಿದ್ದು ಉಂಟು. ಇವೆಲ್ಲವನ್ನು ಮೌನವಾಗಿ ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರು ಬಣ ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಪತ್ರಿಕೆಗೆ ಪ್ರತಿಕ್ರಯಿಸಿ ಫಾಕ್ಸ್ ಕಾನ್ ಅಂಡ್ ಆಪಲ್ ಕಂಪನಿ ಜೊತೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಬರುವ ಎಲ್ಲಾ ದೊಡ್ಡ ದೊಡ್ಡ ಕಂಪನಿಗಳಲ್ಲಿ ಪ್ರಪ್ರಥಮವಾಗಿ ಕನ್ನಡಿಗರನ್ನು ಬಳಸಿಕೊಂಡು ಕಾರ್ಖಾನೆಗಳು ಅಬಿವೃದ್ದಿ ಹೊಂದಿದ ನಂತರ ಕನ್ನಡಿಗರನ್ನು ಹೊರಹಾಕಿ ಬೇರೆ ರಾಜ್ಯದವರನ್ನು ಕರೆತಂದು ಕೆಲಸ ಮಾಡಿಸಿಕೊಳ್ಳುತ್ತಾರೆ ಇಂತಹ ಕುತಂತ್ರಿ ಕಾರ್ಖಾನೆಗಳಿಗೆ ಮುಂದಿನ ದಿನಗಳಲ್ಲಿ ಕರವೇ ಬಳಗ ದೊಡ್ಡ ಮಟ್ಟದಲ್ಲಿ ಹೋರಾಟಗಳನ್ನು ಮಾಡಿ ಕನ್ನಡಿಗರ ಅಸ್ತಿತ್ವವನ್ನು ಉಳಿಸುತ್ತೇವೆ ಎಂದು ಎಂದು ಕಾರ್ಖಾನೆಗಳಿಗೆ ಪುರುಷೋತ್ತಮ ಗೌಡ ಎಚ್ಚರಿಸಿದ್ದಾರೆ