ನ್ಯಾಯಾಲಯ ಮುಂಭಾಗದ ಕಲ್ಯಾಣಿಯಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಮೀನುಗಳು

ದೊಡ್ಡಬಳ್ಳಾಪುರ : ನಗರದ,ರೋಜಿಪುರ ಬಳಿಯ ನ್ಯಾಯಾಲಯದ ಮುಂಬಾಗದಲ್ಲಿರುವ ಕಲ್ಯಾಣಿಯಲ್ಲಿ. ಅಮ್ಲಜನಕ ಕೊರತೆಯಿಂದ ನೂರಾರು ಮೀನುಗಳು ಮೃತಪಟ್ಟ ಘಟನೆ ನಡೆದಿದೆ.

ಸುಮಾರು ವರ್ಷದ ಹಿಂದೆ ಜಿಲ್ಲಾಧಿಕಾರಿಯಾಗಿದ ಕರೀಗೌಡ ರವರು ನೇತೃತ್ವದಲ್ಲಿ ಪರಿಸರ ಅಭಿಯಾನದ ಅಡಿಯಲ್ಲಿ ಹಲವಾರು ಕೆರೆ ಕುಂಟೆ ಕಲ್ಯಾಣಿ ಗಳು ಸ್ವಚ್ಚತೆ ಮಾಡಲಾಗಿದ್ದು ನಗರದ ರೋಜಿಪುರ ನ್ಯಾಯಾಲಯದ ಮುಂಬಾಗದಲ್ಲಿರುವ ಕಲ್ಯಾಣಿ ಪುನಶ್ಚೇತನ ಮಾಡಲಾಗಿದ್ದು ಅಲ್ಲಿ ಮೀನಿನ ಮರಿಗಳನ್ನು ಬಿಡಲಾಗಿತ್ತು ಆಮ್ಲಜನಕ ಕೊರತೆಯಿಂದ ನೂರಾರು ದೊಡ್ಡ ಮೀನುಗಳು ಮೃತಪಟ್ಟಿವೆ ಸಾವಿರಾರು ಸಣ್ಣ ಮೀನುಗಳು ಮುಳುಗದೆ ಆಮ್ಲಜನಕ ಸೇವನೆ ಮಾಡುತ್ತಿವೆ.

ಮೀನುಗಳ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ನಿವಾಸಿ ಹರಿಕುಮಾರ್ ಅವರು ಯಾರೋ ಕಿಡಿಗೇಡಿಗಳು ನೀರಿಗೆ ವಿಷಕಾರಿ ವಸ್ತು ತಂದು ಹಾಕಿದ್ದಾರೆ. ಹಾಗಾಗಿ ನೂರಾರು ಮೀನುಗಳು ಸಾವನ್ನಪ್ಪಿವೆ ಎಂದು ಸಂಶಯ ವ್ಯಕ್ತಪಡಿಸಿದರು.

ನೀರು ಮಲಿನವಾಗಿರುವ ಕಾರಣಕ್ಕೆ ಸಣ್ಣ ಮರಿಗಳು ನೀರಿನ ಮೇಲೆ ಇದ್ದು ಗಾಳಿ ಸೇವನೆ ಮಾಡುತ್ತಿವೆ. ನಿನ್ನೆ ಬೆಳಿಗ್ಗೆ ಹತ್ತಾರು ಮೀನುಗಳು ಸಾವನ್ನಪ್ಪಿದ್ದವು, ಘಟನೆಯನ್ನು ನಗರಸಭೆಯ ಪೌರಾಯುಕ್ತರ ಗಮನಕ್ಕೆ ತಂದಿದ್ದೆವು, ಇಂದು ನೂರಾರು ಮೀನುಗಳು ಸಾವನ್ನಪ್ಪಿವೆ. ಕಲ್ಯಾಣಿಯ ಒಳಗೆ ಶುದ್ದವಾದ ನೀರನ್ನು ಬಿಡುವ ಮೂಲಕ ಉಳಿದ ಮೀನುಗಳನ್ನು ರಕ್ಷಣೆ ಮಾಡಬಹುದು, ಅಧಿಕಾರಿಗಳು ಶೀಘ್ರವಾಗಿ ಈ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕಲ್ಯಾಣಿಗೆ ಯಾವುದೇ ಜಲ ಮೂಲಗಳಿಲ್ಲದೆ, ಅದರಲ್ಲಿರುವ ನೀರೂ ಸಹ ಮಲಿನಗೊಂಡಿದೆ. ಕಲ್ಯಾಣಿ ಕಿರಿದಾಗಿದ್ದು, ಮೀನುಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಆಮ್ಲಜನಕದ ಕೊರತೆಯುಂಟಾಗಿ ಮೀನುಗಳು ಸಾವನ್ನಪ್ಪಿರಬಹುದು ಎಂದೂ ಸಹ ಶಂಕಿಸಲಾಗಿದೆ. ನೀರಿನ ಪರೀಕ್ಷೆಯಿಂದಷ್ಟೇ ಮೀನುಗಳ ಸಾವಿಗೆ ಕಾರಣ ತಿಳಿದುಬರಲಿದೆ.