1. ಅಪ್ರಯೋಜಕ ತೆರೆದ ಕೊಳವೆ ಬಾವಿಗಳನ್ನು ಈ ಕೂಡಲೇ ಮುಚ್ಚಿ : ಅಪಾಯಕಾರಿ ಕೊಳವೆ ಬಾವಿ ಕಂಡುಬಂದರೆ ಮಾಹಿತಿ ನೀಡಿ

ಬೆಂಗಳೂರು ಗ್ರಾಮಾಂತರ: ವಿಜಯಪುರದ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ 2 ವರ್ಷದ ಬಾಲಕ ಕೊಳೆವೆಬಾವಿಗೆ ಬಿದ್ದ ಘಟನೆ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ವಿಫಲವಾಗಿ ತೆರೆದಿರುವ ಹಾಗೂ ಸುರಕ್ಷಿತವಾಗಿ ಮುಚ್ಚದೇ ಹಾಗೆಯೇ ಬಿಟ್ಟಿರುವ ಕೊಳವೆ ಬಾವಿಗಳನ್ನು ಕೂಡಲೇ ಮುಚ್ಚಬೇಕು. ಅಸುರಕ್ಷಿತವಾದ ಕೊಳವೆಬಾವಿಗಳು ಕಂಡು ಬಂದಲ್ಲಿ ಛಾಯಾಚಿತ್ರ, ವಿಡಿಯೋ ಹಾಗೂ ಮಾಹಿತಿಯನ್ನು ಸಾರ್ವಜನಿಕರು ಹಂಚಿಕೊಳ್ಳಬಹುದು ಎಂದು ಗ್ರಾಮೀಣ ಕುಡಿಯುವ ನೀರು‌ ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ‌ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆರೆದ ಕೊಳವೆ ಬಾವಿಯ ವಿಡಿಯೋ, ಪೋಟೊ ಹಾಗೂ ಮಾಹಿತಿಯನ್ನು ಮೊ: 9448367736 ಸಂಖ್ಯೆಗೆ ಕಳುಹಿಸಿಕೊಡಬಹುದು‌ ಎಂದು ಮನವಿ ಮಾಡಿದ್ದಾರೆ.