ಜನರ ಸಮಸ್ಯೆಗಳಿಗೆ ಬೀಟ್ ಸಭೆ ಸಹಕಾರಿ–ಅಮರೇಶ್ ಗೌಡ
ದೊಡ್ಡಬಳ್ಳಾಪುರ: ನಗರ ಪೋಲಿಸ್ ಠಾಣೆಯಿಂದ ರಾತ್ರಿಯ ಬೀಟ್ ಕಾರ್ಯಕ್ರಮ ಬಸವೇಶ್ವರ ವಾರ್ಡಿನ ಅಶ್ವತ್ಥ ಕಟ್ಟೆ ಬಳಿ ಅಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮ ಕುರಿತು ನಗರ ಠಾಣೆಯ ಇನ್ಸ್ ಸ್ಪೆಕ್ಟರ್ ಅಮರೇಶ್ ಗೌಡ,ಮಾತನಾಡಿ
ಜನರು ಸಮಸ್ಯೆಗಳನ್ನು ವ್ಯಕ್ತಪಡಿಸಲು ಹಾಗೂ ಅವುಗಳಿಗೆ ಪರಿಹಾರ ಒದಗಿಸಲು ಬೀಟ್ ಸಭೆ ಸಹಕಾರಿಯಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಸರಗಳ್ಳತನ, ಮನೆ ಗಳ್ಳತನ, ಸೈಬರ್ ಕ್ರೈಂ, ಸಂಚಾರಿ ನಿಯಮಗಳ ಕುರಿತು ಹೆಚ್ಚಿನ ಗಮನ ನೀಡಬೇಕಿದೆ. ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಅರಿತು ಕೊಳ್ಳಬೇಕಿದೆ ಎಂದರು.
ಇದೇ ವೇಳೆ ಮೀಟರ್.ಬಡ್ಡಿ ಕ್ರಿಕೆಟ್ ಬೆಟ್ಟಿಂಗ್,
ಗಾಂಜಾ ಸೇವನೆ ಮತ್ತು ಮಾರಾಟ ಅಕ್ರಮ ಮಧ್ಯ ಮಾರಾಟ, ದಂದೆ, ಮದ್ಯ ಸೇವನೆ ಮಾಡಿ ಗಲಾಟೆ ವೇಶ್ಯಾವಾಟಿಕೆ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗ ದಂತೆ ಎಚ್ಚರಿಕೆ ನೀಡಿದರು.
ಬೀಟ್ ಸಭೆಯಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು ನಾಗರಿಕರು ವೈಯಕ್ತಿಕ ಸಮಸ್ಯೆಗಳು, ನಗರಸಭೆಯಿಂದ ಆಗಬೇಕಾಗಿರುವ ಮೂಲ ಸೌಲಭ್ಯಗಳ ಕುರಿತು ಪ್ರಸ್ತಾಪಿಸಿದರು.
ಈ ಸಭೆಯಲ್ಲಿ ನಗರಸಭೆ ಸದಸ್ಯ ಪದ್ಮನಾಭ, ವಾರ್ಡಿನ ಹಿರಿಯ ಮುಖಂಡರಾದ ಕೃಷ್ಣಪ್ಪ, ಮಂಜುಳಾ, ಜೈರಾಮ್, ಎಎಸ್ಐ ಕೃಷ್ಣಮೂರ್ತಿ, ಬೀಟ್ ಸಿಬ್ಬಂದಿಗಳಾದ ಶಿವಾನಂದ, ಸಿದ್ದಲಿಂಗ ಪೂಜಾರಿ ಸಾರ್ವಜನಿಕರು ಹಾಜರಿದ್ದರು