ಎಸ್. ಜೆ. ಸಿ. ಆರ್. ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಮೆಳೇಕೋಟೆ ಕ್ರಾಸ್‌ ಬಳಿ ಇರುವ ಎಸ್. ಜೆ. ಸಿ. ಆರ್ ಶಾಲೆಯಲ್ಲಿ ಮಂಗಳವಾರ ಎಸ್. ಎಸ್.ಎಲ್. ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಕಾಯ್ರಕ್ರಮಕ್ಕೆ ಚಾಲನೆ ನೀಡಿದ ದಿವ್ಯ ಸಾನಿದ್ಯ ಚಿಕ್ಕಬಳ್ಳಾಪುರದ ಶಾಖಾಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿ ಮಾತನಾಡಿ, ವಿದ್ಯೆ
ಯಾರೂ ಕದಿಯಲಾಗದ ಸಂಪತ್ತು ಬೇರೆಯವರಿಗೆ ಹೇಳಿಕೊಟ್ಟಷ್ಟು ಅದು ವೃದ್ಧಿಯಾಗುತ್ತದೆ, ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ ಜ್ಞಾನ ಸಂಪಾದಿಸಿ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಿ ಎಸ್. ಎಸ್. ಎಲ್. ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಪಡೆದ ಎ.ರಂಜಿತ ಹಾಗು
ಮೂರನೇ ರ‍್ಯಾಂಕ್ ಪಡೆದ ಪ್ರಶಾಂತ್ ಗೌಡ ವಿದ್ಯಾರ್ಥಿಗಳನ್ನು ಮತ್ತು ಅತಿ ಹೆಚ್ಚು ಅಂಕಗಳನ್ನು ಪಡೆದ ಎಂಟು ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿದರು,

ಮುಖ್ಯ ಆಡಳಿತಾದಿಕಾರಿಗಳಾದ ಡಾ.ಎನ್.ಶಿವರಾಮರೆಡ್ಡಿ ಮಾತನಾಡಿ, ಮೊದಲ ರ‍್ಯಾಂಕ್ ಪಡೆಯುವುದು ಅದೃಷ್ಟದಿಂದಲ್ಲ ಬದಲಿಗೆ ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ ಹೀಗಾಗಿ
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆದು ಪ್ರಸ್ತುತ ವರ್ಷದಲ್ಲಿರುವ ಎಸ್. ಎಸ್. ಎಲ್. ಸಿ ಯ
ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ಬರುವಂತೆ ಅದ್ಯಯನಶೀಲರಾಗಿ ಎಂದು ತಿಳಿಸಿದರು.

ಕಾಯ್ರಕ್ರಮದಲ್ಲಿ ಕರ್ನಾಟಕ ತೆಂಗು ನಾರಿನ ಮಂಡಳಿಯ ಅದ್ಯಕ್ಷ ವೆಂಕಟೇಶ್ ಬಾಬು,
ಮೆಳೇಕೋಟೆ ಗ್ರಾಮಪಂಚಾಯತಿ ಅದ್ಯಕ್ಷ ಶ್ರೀನಿವಾಸ್, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್,
ಹೆಗ್ಗಡಿಹಳ್ಳಿ ಗ್ರಾಮಪಂಚಾಯತಿಯ ಮಾಜಿ ಅದ್ಯಕ್ಷ ಕೃಷ್ಣಪ್ಪ, ಹಾಲಿನ ಡೈರಿಯ ಅದ್ಯಕ್ಷ ದೇವರಾಜು, ರಾಜಶೇಖರ ಶಾಲೆಯ ಮುಖ್ಯೋಪಾದ್ಯಾಯ ವಿಜಯಕುಮಾರ್ ಹಾಗೂ ಪೋಷಕರು ಹಾಜರಿದ್ದರು