ಮತ್ತಿಹಳ್ಳಿ ಗೇಟ್ ಬಳಿ ಕೆ.ಎಸ್.ಆರ್. ಟಿ.ಸಿ ಬಸ್ ಬೈಕ್ ನಡುವೆ ಡಿಕ್ಕಿ ಇಬ್ಬರ ದಾರುಣ ಸಾವು
ತುಮಕೂರು:ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು ಎದುರಿಗೆ ಬರುತ್ತಿದ್ದ ಕೆ.ಎಸ್. ಆರ್.ಟಿ.ಸಿ, ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಘಟನೆ ವಿವರ
ತಿಪಟೂರು ಕಡೆಯಿಂದ ಕುಂದಾಪುರ ಹೋಗುತಿದ್ದ ಬಸ್ ಅದೇ ರಸ್ತೆಯಲ್ಲಿ ಬರುತಿದ್ದ ಬೈಕ್ ಗೆ ಡಿಕ್ಲಿ ಹೊಡೆದಿದ್ದು
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕಾಮಗಾರಿ ನಡೆಯುತ್ತಿದ್ದು ಒಂದು ಭಾಗದಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ತಿಪಟೂರು ಕಡೆಯಿಂದ ವೇಗವಾಗಿ ಬಂದ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ಸವಾರ ಹಾಗು ಹಿಂಬದಿ ಕುಳಿತಿದ್ದ ಯುವಕನು ಸಾವಿಗೀಡಾಗಿದ್ದಾರೆ
ಉಮೇಶ್ (32 ), ಮತ್ತು ರಜನಿಕಾಂತ್ (30) ಮೃತ ದುರ್ದೈವಿಗಳು
ಮನೆಗೆ ಆಧಾರ ಸ್ತಂಭವಾಗಿದ್ದ ಎರಡು ಜೀವಗಳು ಬಲಿಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸಾವನಪ್ಪಿದ ಸಂಬಂಧಿಕರು ಮಾಧ್ಯಮ ವರದಿಗಾರರ ಜೊತೆ ಮಾತನಾಡಿ ಮನೆಗೆ ಆಧಾರವಾಗಿದ್ದ ಎರಡು ಜೀವಗಳು ಕಳೆದುಕೊಂಡಿದ್ದೇವೆ ಮತ್ತೆ ಜೀವಿಗಳನ್ನು ತರಲಾರವು
ಅವರ ಎರಡು ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
KSRTC ಬಸ್ ಚಾಲಕರು ಸಹ ವೇಗದ ಮಿತಿ ಇಲ್ಲದೆ ಬಸ್ಸನ್ನು ಓಡಿಸುತ್ತಾರೆ ಅವರ ಬಗ್ಗೆ ಸಂಭಂದ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಲಿಯಾದ ಎರಡು ಜೀವಗಳನ್ನು ತಿಪಟೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಾಗರದಲ್ಲಿ ಇರಿಸಲಾಗಿದೆ ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು
ಸ್ಥಳಕ್ಕೆ. ಹೆಚ್ಚುವರಿ ಪೊಲೀಸ್ ಅಧಿಕಾರಿ ಗೋಪಾಲ್ ಡಿವೈಎಸ್ಪಿ ವಿನಾಯಕ್ ಶೆಟ್ಟಿಗೇರಿ. ಇನ್ಸ್ಪೆಕ್ಟರ್ ಚಂದ್ರಕಾಂತ್ . ವನವಳ್ಳಿ ಸಬ್ ಇನ್ಸ್ಪೆಕ್ಟರ್ ರಾಜೇಶ್ ಭೇಟಿ ನೀಡಿದ್ದಾರೆ ಹೋನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ ಭರತ್ ಕೆ