ಸೂಲುಕುಂಟೆಯಲ್ಲಿ ನೂತನ ಪಡಿತರ ಅಂಗಡಿಗೆ ಪಾಪಣ್ಣ ಚಾಲನೆ
ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಸೂಲುಕುಂಟೆ ಗ್ರಾಮದಲ್ಲಿ ನೂತನ ಪಡಿತರ ಅಂಗಡಿ ಯನ್ನು ಶುಕ್ರವಾರ ಕುಂದಾಣ ವಿವಿದ್ದೋಶ ಸಹಕಾರ ಸಂಘದ ಅದ್ಯಕ್ಷ ಪಾಪಣ್ಣ ಅಕ್ಕಿ ವಿತರಿಸುವ ಮೂಲಕ ಚಾಲನೆ ನೀಡಿದರು.
ಕುಂದಾಣ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯೆವೀಣಾರಾಣಿ ನವೀನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ರಾಜ್ಯ ಸರ್ಕಾರಗಳು ಬಡ ಕುಟುಂಬಗಳ ಹಸಿವು ನೀಗಿಸಲು ಉಚಿತವಾಗಿ ಪಡಿತರ ವಿತರಿಸುತ್ತಿದೆ. ರಾಜ್ಯ ಸರ್ಕಾರ ಪೋರ್ಟಬಿಲಿಟಿ ವ್ಯವಸ್ಥೆ ಜಾರಿಗೆ ತಂದಿರುವು ದರಿಂದ ಗ್ರಾಹಕರು ಯಾವ ಊರಿನಲ್ಲಿ, ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದು.
ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಪಡೆಯಲು ಯಾವುದೇ ಹಣ ನೀಡಬೇಕಿಲ್ಲ. ಬಯೋಮೆಟ್ರಿಕ್ ಹಾಗೂ ಇತರೆ ಸೇವೆಗಳೂ ಉಚಿತವಾಗಿರುತ್ತದೆ.
ಸೂಲಕುಂಟೆ ಗ್ರಾಮದಿಂದ ಕುಂದಾಣದಲ್ಲಿನ ಪಡಿತರ ಅಂಗಡಿಗೆ ಹೋಗಿ ಬರಲು ಐದಾರು ಕಿಲೋಮೀಟರ್ ಸಮಸ್ಯೆ ಹೇಳತೀರದಾಗಿತ್ತು. ಅನೇಕ ಬಾರಿ ಸಂಬಂಧ ಪಟ್ಟವರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿದರು ಯಾವುದೇ ಪ್ರಯೋಜನ ಆಗಿರಲಿಲ್ಲ ಕ್ಷೇತ್ರದ ಶಾಸಕರು, ಜಿಲ್ಲೆ ಉಸ್ತುವಾರಿ ಹಾಗೂ ಆಹಾರ ಪೂರೈಕೆ ಸಚಿವರಾದ ಕೆಎಚ್. ಮುನಿಯಪ್ಪ ಅವರು ನಮ್ಮ ಬೇಡಿಕೆಗೆ ತಕ್ಷಣವೇ ಸ್ಪಂದಿಸಿ ಗ್ರಾಮದಲ್ಲೇ ಪಡಿತರ ಅಂಗಡಿ ತೆರೆಯಲು ಸಂಬಂಧ ಆದೇಶದ ಫಲವಾಗಿ ಬಚ್ಚಹಳ್ಳಿ, ಲಿಂಗದೀರ ಗೊಲ್ಲಹಳ್ಳಿ, ನಮ್ಮ ಊರಿಗೆ ಗ್ರಾಮದ ಅನೇಕರಿಗೆ ಬಹಳಷ್ಟು ಅನುಕೂಲವಾಗಿದೆ.
ಮೂರು ಗ್ರಾಮಗಳಿಂದ ಸುಮಾರು 1050 ಪಡಿತರ ಚೀಟಿ ಹೊಂದಿದ್ದಾರೆ. ಗ್ರಾಮಸ್ಥರ ಅನಾನುಕೂಲವನ್ನು ತಪ್ಪಿಸಿದ ಗ್ರಾಮದಲ್ಲೇ ಪಡಿತರನ್ನು ಅಂಗಡಿ ಮಾಡಲು ಸಹಕರಿಸಿದ ಘನ ಸರ್ಕಾರಕ್ಕೆ ಊರಿನ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಂದಾಣ ಸೂಸೖಟಿ ಅದ್ಯಕ್ಷ ಪಾಪಣ್ಣ, ನಿರ್ದೇಶಕ ಚನ್ನಕೃಷ್ಣಪ್ಪ, ಕುಂದಾಣ ಗ್ರಾ. ಪಂಚಾಯಿತಿ ಸದಸ್ಯೆವೀಣಾರಾಣಿ ನವೀನ್ ಕುಮಾರ್, ಕೊಂಡ ಮುನಿಯಪ್ಪ, ಡೇರಿ ಅದ್ಯಕ್ಷ ಸುಬ್ರಮಣ್ಯ, ಉಪಾದ್ಯಕ್ಷ ವಿಜಯ್, ಮುಖಂಡರಾದ ಆನಂದ್, ರಾಮಕೃಷ್ಣಪ್ಪ,
ನಾಗೇಶ್, ಪಡಿತರ ವಿತರಕ ರಮೇಶ್, ಸೇರಿದಂತೆ ಪಡಿತರ ಫಲಾನುಭವಿಗಳು ಹಾಜರಿದ್ದರು.