ತಂಬಾಕು ಸೇವನೆಯಿಂದಾಗುವ ದುಶ್ಪರಿಣಾಮಗಳ ಬಗ್ಗೆ ಜಾಗೃತಿ

ದೊಡ್ಡಬಳ್ಳಾಪುರ:ತಂಬಾಕು ಮಾರಣಾಂತಿಕ ಸೇವನೆ ಯಿಂದಾಗುವ ಕಾಯಿಲೆಗಳಿಗೆ ಮುಕ್ತಾಯ ಹಾಡಲು ಜಾಗೃತಿ ಮೂಡ ಬೇಕಾದ ಅಗತ್ಯವಿದ್ದು, ತಂಬಾಕು ಮುಕ್ತ ಸಮಾಜದ ನಿರ್ಮಾಣ ವಾಗಬೇಕಿದೆ ಎಂದು ವೈದ್ಯಾ ಧಿಕಾರಿ ಡಾ.ಪರಮೇಶ್ವರ್ ತಿಳಿಸಿದರು.

ನಗರದ ಶ್ರೀರಾಮ ನರ್ಸಿಂಗ್ ಕಾಲೇಜು, ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ತಂಬಾಕು ನಿಷೇಧ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷದ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವೆಂದು ಘೋಷಿಸಿದೆ. ಮನವಿಯನ್ನು ಬಹಿರಂಗಪಡಿಸುವುದು ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮೇಲಿನ ಉದ್ಯಮ ತಂತ್ರಗಳನ್ನು ಬಹಿರಂಗಪಡಿಸುವುದು ಈ ವರ್ಷದ ಧೈಯವಾಕ್ಯವಾಗಿದೆ ಎಂದು ಹೇಳಿದರು.

ಶ್ರೀರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ. ವಿಜಯ ಕುಮಾರ. ಮಾತನಾಡಿ ತಂಬಾಕಿನಲ್ಲಿ 250 ರೀತಿಯ ರಾಸಾಯನಿಕಗಳಿದ್ದು, ಇವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಕ್ಯಾನ್ಸರ್ ಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ. ಇದಲ್ಲದೇ ಹೃದಯಾಘಾತಕ್ಕೆ ಶೇ.50ರಷ್ಟು ಮೂಲ ಧೂಮಪಾನ ವಾಗಿದೆ ಎಂದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಾಂಕ್ ಅವರು ತಂಬಾಕು ಉತ್ಪನ್ನಗಳಿಗೆ ದಾಸ ರಾಗದಂತೆ ಅದರ ಸೇವನೆ ಮಾಡುವುದಿಲ್ಲ ಎನ್ನುವ ಪ್ರತಿಜ್ಞಾ ವಿಧಿ ಬೋಧಿಸಿದರು. ಸುಜ್ಞಾನ ದೀಪಿಕಾ ಸಂಚಾಲಕರಾದ ಎಂ.ಎಸ್.ಮಂಜುನಾಥ್, ಶ್ರೀರಾಮ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಲಾವಣ್ಯ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಶ್ರೀರಾಮ ವಿದ್ಯಾಸಂಸ್ಥೆಯ ಮಿಥುನ್ ಚಿಕ್ಕೆ ಗೌಡ ಇತರರಿದ್ದರು.