ಕಾಂಟೇನರ್-ಬೈಕ್ ಡಿಕ್ಕಿ ಮೂವರ ದುರ್ಮರಣ
ತುಮಕೂರು: ನಂದಿಹಳ್ಳಿ ಸಮೀಪದಲ್ಲಿ ಪೆಟ್ರೋಲ್ ಬಂಕ್ ನಿಂದ ಕಾಂಟೇನರ್ ರೊಂದು ತಿರುವ ಸಮಯದಲ್ಲಿ ಬೈಕ್ ನಲ್ಲಿ ಬಂದ ಮೂರು ಜನ ಸವಾರರು ಮುಖಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ
ಮೃತರು ತುಮಕೂರಿನ ಉಪ್ಪರಹಳ್ಳಿ ರೂಮ್ ಒಂದರಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ರಾಜೇಶ್ 25ದನಂಜಯ್ 27
ಧನುಷ್ 23 ಮೃತ ಯುವಕರು.
ಎಂ ಇ ಸೋಲಾರ್ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದ ಇವರು,ರಾತ್ರಿ ಕೆಲಸ ಮುಗಿಸಿ ತುಮಕೂರು ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ವಿಚಾರ ತಿಳಿದ ಕೂಡಲೆ ಸ್ಥಳಕ್ಕೆ ಧಾವಿಸಿದ ತುಮಕೂರು ಜಿಲ್ಲೆಯ ಅಡಿಷನಲ್ ಎಸ್ಪಿ ಶ್ರೀ ಗೋಪಾಲ್ ಸರ್ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ರವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ವರದಿ : ಹೇಮಂತ್ ಎಂ