ದಾವಣಗೆರೆಯಲ್ಲಿ ಜೂ 13 ರಿಂದ ಮೂರು ದಿನಗಳ ಯುವ ಸಮುದಾಯಕ್ಕಾಗಿ ಗಾಂಧಿ ಕಾರ್ಯಾಗಾರ

ದಾವಣಗೆರೆ : ಪ್ರಜ್ಞಾವಂತ ಭಾರತ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ದಾವಣಗೆರೆಯ ಹರಿಹರದ ಹನಗವಾಡಿಯ ಮೈತ್ರಿವನ ದಲ್ಲಿ 3 ದಿನಗಳ “ಯುವ ಸಮುದಾಯಕ್ಕಾಗಿ ಗಾಂಧಿ ” ಕಾರ್ಯಾಗಾರವನ್ನು ಅಯೋಜಿಸಲಾಗಿದೆ .
ಕಾರ್ಯಗಾರದಲ್ಲಿ ದಾವಣಗೆರೆಯ ಐಜಿಪಿ (ಪೂರ್ವ ವಲಯ ) ಬಿ ಆರ್ ರವಿಕಾಂತ ಗೌಡ ಕಾರ್ಯಗಾರಕ್ಕೆ ಚಾಲನೆ ನೀಡಿ ಗಾಂಧೀ ಚಲನ ಚಿತ್ರ ಪ್ರದರ್ಶನ ಮತ್ತು ಸಂವಾದ ಮಾಡಲಿದ್ದಾರೆ.

ಎರಡನೇ ಪೂರ್ಣಚಂದ್ರ ತೇಜಸ್ವಿ ಅಧ್ಯಯನ ಕೇಂದ್ರ ಬೆಂಗಳೂರು ಇದರ ನಿರ್ದೇಶಕರಾದ ಡಾ .ಶಿವಾರೆಡ್ಡಿ ಅವರ ಉಪಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಗಾಂಧಿ ತತ್ವಗಳನ್ನು ಪ್ರಸಾರ ಮಾಡುವ ಯೋಜನೆಗಳ ಬಗ್ಗೆ ತರಬೇತಿ ಮತ್ತು ಪೋಸ್ಟರ್, ರೀಲ್ಸ್ ಮಾಡುವ ತಂತ್ರಗಳ ಬಗ್ಗೆ ತರಬೇತಿ ನೀಡಲಿದ್ದಾರೆ.
ಮೂರನೇ ದಿನ ಸಂದರ್ಶನ ಮತ್ತು ಚಿತ್ರೀಕರಣ ಮಾಡುವವಿಧಾನ, ಆಡಿಯೊ, ವೀಡಿಯೋ ಎಡಿಟಿಂಗ್ ಬಗ್ಗೆ ಮಾಹಿತಿ ನೀಡಲಿದ್ದಾರೆ ನೀಡಲಾಗುವುದು
ಕಾರ್ಯಗಾರಕ್ಕೆ ಬರುವವರಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ. ನೋಂದಣಿ ಮಾಡಿಕೊಳ್ಳಲು 9008149149 ಈ ಸಂಖ್ಯೆಗೆ ಕರೆ ಮಾಡಿ ಕೊಳ್ಳಬೇಕೆಂದು ನಿರ್ವಾಹಕರು ತಿಳಿಸಿದ್ದಾರೆ .