ವಿಕಸಿತ ಕೃಷಿ ಸಂಕಲ್ಪ ಅಭಿಯಾನ
ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿ ಹಾಡೋನಹಳ್ಳಿಯ, ಮುಂಗಾರಿಗೆ ಕೃಷಿ ಸಿದ್ಧತೆಯನ್ನು ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಭಾರತ ಸರ್ಕಾರದ ನಿರ್ದೇಶನದ ಮೇರೆಗೆ ಭಾ.ಕೃ.ಸಂ.ಪ.-ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ, ವಲಯ -11 ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಮತ್ತು ಮುಂಗಾರು ತಾಂತ್ರಿಕ ಆಂದೋಲನವನ್ನು ದಿನಾಂಕ. 12,06,20 12.06,2024 ರಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶ್ರೀಮತಿ ಮಂಜುಳ ಪುರುಷೋತ್ತಮ, ಅಧ್ಯಕ್ಷರು, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಡಾ. ಹನುಮಂತರಾಯ ಬಿ.ಜಿ., ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗೊಡೆಗೊಂಡ ನೂತನ ತಳಿಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮತ್ತು ಅಭಿವೃದ್ಧಿ ಇಲಾಖೆಗಳ ವಿಸ್ತರಣಾಧಿಕಾರಿಗಳಿಗೆ ತಾಂತ್ರಿಕ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ನಂತರ 15 ದಿನಗಳ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ವರದಿಯನ್ನು ಮಂಡಿಸುತ್ತಾ, ಕೃಷಿ ಅನುಸಂಧಾನ ಪರಿಷತ್ತಿನ ವಿವಿಧ ಕೇಂದ್ರೀಯ ಸಂಸ್ಥೆಗಳಾದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಎನ್.ಬಿ.ಎಸ್.ಎಸ್., ನಿವೇದಿ, ಎನ್.ಬಿ.ಎ.ಐ.ಆರ್., ಎನ್.ಐ.ಎ.ಎನ್.ಪಿ. ಮತ್ತು ಕೇಂದ್ರದ ವಿಜ್ಞಾನಿಗಳನ್ನೊಳಗೊಂಡ ಮೂರು ತಂಡಗಳು ಪ್ರತ್ಯೇಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಒಟ್ಟು 382 ಗ್ರಾಮಗಳಲ್ಲಿ 131 ಕಾರ್ಯಕ್ರಮಗಳನ್ನು ಆಯೋಜಿಸಿ ಒಟ್ಟು 26088 (ರೈತರು 18363 ಮತ್ತು ರೈತ ಮಹಿಳೆಯರು 7681 ) ತಲುಪಿ, ವಿವಿಧ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, 152 ಪದ್ಧತಿ ಪ್ರಾತ್ಯಕ್ಷಿಕೆಗಳು 260 ಕ್ಷೇತ್ರ ಭೇಟಿ, ೬೫ ಸಮಸ್ಯಾತ್ಮಕ ಕ್ಷೇತ್ರ ಭೇಟಿ ಮಾಡಲಾಗಿದೆ ಎಂದು ತಿಳಿಸಿದರು.
ಡಾ. ಕೆ.ಸಿ. ನಾರಾಯಣಸ್ವಾಮಿ, ಕುಲಸಚಿವರು ಹಾಗೂ ಡೀನ್ (ಸ್ನಾತಕೋತ್ತರ), ಕೃ.ವಿ.ವಿ., ಬೆಂಗಳೂರು ಇವರು ಕೂರಿಗೆಯಲ್ಲಿ ರಾಗಿಯನ್ನು ಬಿತ್ತನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ಉದ್ಘಾಟನಾ ಭಾಷಣದಲ್ಲಿ ಮುಂಗಾರು ಆಂದೋಲನವು ಇದೇ ದಿನ ಕೊನೆಯಾಗಬಾರದು, ಕೃಷಿ ನಿರಂತರವಾಗಿರುವುದರಿಂದ ಈ ಅಂದೋಲನವು ವರ್ಷಪೂರ್ತಿ ನಡೆಯುತ್ತಿರಬೇಕು. ಭಾರತ ದೇಶಾದ್ಯಂತ 713 ಕೇಂದ್ರಗಳ 16000 ವಿಜ್ಞಾನಿಗಳು 15 ದಿನಗಳ ಈ ಅಭಿಯಾನದಲ್ಲಿ ಪಾಲ್ಗೊಂಡು ರೈತರ ಮನೆ ಬಾಗಿಲಿಗೆ ಹೋಗಿ ನೇರವಾಗಿ ಅರಿವು ಮೂಡಿಸಿ, ಅವರ ಸಮಸ್ಯೆಗಳಿಗೆ ಸಲಹೆ ಸೂಚಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಕೃಷಿ ವಿಶ್ವವಿದ್ಯಾನಿಲಯ, ಕೆಂದ್ರ ಸರ್ಕಾರದ ವಿವಿಧ ಸಂಶೋದನಾ ಸಂಸ್ಥೆಗಳು, ವಿವಿಧ ವಿಜ್ಞಾನಿಗಳು ಬೆಂಗಳೂರಿನಲ್ಲಿಯೇ ಇರುವುದರಿಂದ ಬಹಳಷ್ಟು ಬೇಗ ತಂತ್ರಜ್ಞಾನಗಳು ರೈತರು ತಲುಪುತ್ತವೆ. ಇದನ್ನು ಎಲ್ಲಾ ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಸೂಚಿಸಿದರು.
ಶ್ರೀ ಹೆಚ್.ಎ. ನಾಗರಾಜು, ಮಾಜಿ ಅಧ್ಯಕ್ಷರು, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಇವರು ಮಾತನಾಡಿದರು.
ತಾಂತ್ರಿಕ ಅಧಿವೇಶನದಲ್ಲಿ ಡಾ. ಮಂಜುನಾಥ್, ಸಹಾಯಕ ಪ್ರಾಧ್ಯಾಪಕರು, ಅ.ಭಾ.ಸು.ಸಂ.ಪ್ರಾ.-ಕೃಷಿ ಹವಾಮಾನ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಮಾತನಾಡುತ್ತಾ ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಶೇ. ೧೦೫ ರಷ್ಟು ಹೆಚ್ಚು ಮಳೆಯಾಗುವ ಸಾದ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಪೂರ್ವ ಮುಂಗಾರಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ರೈತರು ಈ ನೀರಿನ ಸಂರಕ್ಷಣೆ ಮತ್ತು ಮಣ್ಣು ಆರೋಗ್ಯ ಮತ್ತು ಫಲವತ್ತತೆ ಕಾಪಾಡಿಕೊಳ್ಳಲು ಕೃಷಿ ಹೊಂಡ ಮತ್ತು ಇಂಗು ಗುಂಡಿಗಳ ಮೂಲಕ ಮಳೆ ನೀರನ್ನು ಸಂರಕ್ಷಿಸುವುದು, ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡುವ ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಳ್ಳವುದರ ಜೊತೆಗೆ ತಮ್ಮ ಜಮೀನಿನ ಬದುಗಳಲ್ಲಿ ಹೆಚ್ಚು ಸಸಿಗಳನ್ನು ನೆಡಬೇಕಾಗಿ ತಿಳಿಸಿದರು.
ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆದಾಯವನ್ನು ಹೆಚ್ಚಿಸಿಕೊಂಡು ಇತರೆ ರೈತ ಮಹಿಳೆಯರಿಗೆ ಮಾದರಿಯಾದ ಶ್ರೀಮತಿ ಪದ್ಮನಿಗೌಡ, ಕೃಷಿ ಉದ್ಯಮಿ ಇವರು ಮಾತನಾಡಿ, ರೈತ ಮಹಿಳೆಯರು ಉದ್ಯಮಶೀಲರಾಗಲು ಸರ್ಕಾರದ ಸೌಲಭ್ಯಗಳು, ವಿಜ್ಞಾನಿಗಳು, ವಿವಿಧ ಇಲಾಖೆಗಳ ನೆರವನ್ನು ಪಡೆಯಲು ಕೆಲವು ಸಲಹೆಗಳನ್ನು ನೀಡಿದರು.
ಡಾ. ಕೆ. ಮಧುಸೂದನ್, ವಿಶೇಷ ಅಧಿಕಾರಿಗಳು, ರಾಷ್ಟ್ರೀಯ ಬೀಜ ಪ್ರಾಯೋಜನೆ, ಕೃ.ವಿ.ವಿ., ಬೆಂಗಳೂರು ಇವರು ಬೀಜೋತ್ಪಾದನೆಯ ಮಹತ್ವ, ಗುಣಮಟ್ಟದ ಬೀಜಗಳು ಮತ್ತು ರಾಷ್ಟ್ರೀಯ ಬೀಜ ಪ್ರಾಯೋಜನೆಯ ಪ್ರಯೋಜನಗಳನ್ನು ವಿವರಿಸಿದರು. ಡಾ. ಮಹೇಶ್, ವಿಜ್ಞಾನಿ, ಓಃಂಖಖ ಸಂಸ್ಥೆ, ಬೆಂಗಳೂರು ಇವರು ಜೈವಿಕ ಕೀಟನಾಶಕಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಎಂ.ಜೆ. ಚಂದ್ರೇಗೌಡ, ಪ್ರಧಾನ ವಿಜ್ಞಾನಿಗಳು, ಅಟಾರಿ, ವಲಯ-11, ಬೆಂಗಳೂರು ಇವರು ಕೃಷಿಯಲ್ಲಿ ರೋಗ ಮತ್ತು ಕೀಟಗಳ ಹಾವಳಿ ಇಲ್ಲದೇ, ಇಳುವರಿ ಮತ್ತು ಗುಣಮಟ್ಟ ಕಾಪಾಡಲು ರೈತರು ಏನು ಮಾಡಬೇಕೆಂದು ಅರ್ಥಮಾಡಿಕೊಳ್ಳುವುದೇ ವಿಜ್ಞಾನ ಎಂದು ತಿಳಿಸಿ, ರೈತರಿಗೆ ಯಾವುದೇ ಮಾಹಿತಿ ಬೇಕಿದ್ದರೂ ಹುಡುಕಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಡಾ. ಕೃಶಾಲಿನಿ, ಮೈರಾಡ ಸರ್ಕಾರೇತರ ಸಂಸ್ಥೆ ಇವರು ಮೈರಾಡ ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಅಭಿವೃದ್ಧಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ವಿವಿಧ ಕಂಪನಿಗಳು, ಡೋನ್, ರೈತ ಉತ್ಪಾದಕರ ಕಂಪನಿ, ಪ್ರಗತಿಪರ ರೈತರು ಇನ್ನೂ ಮುಂತಾದವರು ಭಾಗವಹಿಸಿ, ವಸ್ತು ಪ್ರದರ್ಶನ ಏರ್ಪಡಿಸಿ ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ತಿಳಿಸಿದರು. ಮುಂದುವರೆದು ಜಾನುವಾರುಗಳ ದೇಸಿ ತಳಿಗಳಾದ ಹಳ್ಳಿಕಾರ್, ಸಾಹಿವಾಲ್, ಮಲೆನಾಡು ಗಿಡ್ಡ ಮತ್ತು ಬಂಡೂರು ಕುರಿ ಹಾಗೂ ಇತರೆ ತಳಿಗಳನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 550 ಜನ ರೈತ/ರೈತ ಮಹಿಳೆಯರು ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ಮುಂಗಾರಿನ ಚಟುವಟಿಕೆಗಳು ಚುರುಕಾಗಿರುವುದರಿಂದ ನೂತನ ತಳಿಗಳ ಬಿತ್ತನೆ ಬೀಜಗಳು ಮತ್ತು ಕೃಷಿ ಪರಿಕರಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಜೊತೆಗೆ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವ ಕಾರ್ಯಕ್ರಮ ಪ್ರಾರಂಭವಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಪಾವತಿಸಿ ನೊಂದಾಯಿಸಿಕೊಳ್ಳಲು ತಿಳಿಸಿದರು. ರೈತರು ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಹೆಚ್ಚು ಸಾವಯವ ಗೊಬ್ಬರಗಳನ್ನು ಬಳಸಿ ಗುಣಮಟ್ಟದ ಆಹಾರ ಉತ್ಪಾದನೆಗೆ ಒತ್ತು ನೀಡಬೇಕೆಂದು ಮನವಿ ಮಾಡಿದರು. ಮತ್ತು ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಶ್ರೀಮತಿ ಗಾಯಿತ್ರಿ ಎಮ್., ಕೃಷಿ ಉಪ ನಿರ್ದೇಶಕರು, ಬೆಂ.ಗ್ರಾ.ಜಿಲ್ಲೆ