ಶ್ರೀ ಕಾವೇರಮ್ಮ ದೇವಿಯ ಮೂರನೇ ವರ್ಷದ ಬ್ರಹ್ಮ ರಥೋತ್ಸವ
![]()
ಹೊಸಕೋಟೆ: ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದಲ್ಲಿ ಶ್ರೀ ಕಾವೇರಮ್ಮ ದೇವಿಯ ಮೂರನೇ ವರ್ಷದ ಬ್ರಹ್ಮರಥೋತ್ಸವ ಕಾರ್ಯಕ್ರಮವು ಗುರುವಾರ ಮಧ್ಯಾಹ್ನ 12:30ಕ್ಕೆ ಶುಭ ಸಮಯದಲ್ಲಿ ದೇವಾಲಯದ ಅರ್ಚಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ನಂತರ ದೇವಾಲಯದ ಆವರಣದಲ್ಲಿ ಪ್ರಾರಂಭಗೊಂಡು ರಥೋತ್ಸವವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೂರಾರು ಭಕ್ತಾದಿಗಳ ನಡುವೆ ಪೂಜಾ ಕಾರ್ಯಕ್ರಮಗಳು ನೆರವೇರಿತು ಇದೇ ಸಮಯದಲ್ಲಿ ಗ್ರಾಮದ ಮುಖಂಡರುಗಳು ಹಾಗೂ ದೇವಿಯ ಭಕ್ತಾದಿಗಳು ನೆರೆದಿದ್ದ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ ಕೋಸಂಬರಿ ಹಾಗೂ ನಿರಂತರ ಅನ್ನದಾಸೋಹ ವ್ಯವಸ್ಥೆಯೂ ಸಹ ಏರ್ಪಡಿಸಲಾಗಿತ್ತು.
ನಂತರ ಗ್ರಾಮದ ಮುಖಂಡರು ಹಾಗೂ ಪಂಚಾಯಿತಿ ಸದಸ್ಯರಾದ ಹೇಮಂತ್ ಕುಮಾರ್ ಮಾತನಾಡಿ ದೇವಾಲಯಕ್ಕೆ ಸುಮಾರು ವರ್ಷಗಳ ಇತಿಹಾಸ ಇದ್ದು ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷವೂ ದೇವಿಯ ಹೆಸರಲ್ಲಿ ಪೂಜಾ ಕಾರ್ಯಕ್ರಮಗಳು ಮಾತ್ರ ನೆರವೇರಿತಿತ್ತು ಆದರೆ ಗ್ರಾಮದ ಮುಖಂಡರು ಹಾಗೂ ದೇವಿಯ ಅರ್ಚಕರು ಎಲ್ಲರೂ ಒಮ್ಮತದಿಂದ ಮಾತನಾಡಿ ಕಳೆದ ಮೂರು ವರ್ಷಗಳಿಂದ ದೇವಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿಸಿಕೊಂಡು ಬಂದಿದ್ದೇವೆ ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಉಂಟು ಮಾಡಿದೆ ಕಾರ್ಯಕ್ರಮದ ಮುಖ್ಯ ಉದ್ದೇಶ ಕಾಲಕಾಲಕ್ಕೆ ಸರಿಯಾಗಿ ಉತ್ತಮ ಮಳೆ ಬೆಳೆ ಆಗಿ ಹಾಗೂ ಗ್ರಾಮದ ಜನರು ಉತ್ತಮ ಆರೋಗ್ಯವನ್ನು ತಾಯಿ ನೀಡಿ ಎನ್ನುವ ಉದ್ದೇಶದಿಂದ ನಡೆಸಿಕೊಂಡು ಬಂದಿದ್ದೇವೆ ಹಾಗೂ ಮುಂದಿನ ವರ್ಷ ಇನ್ನೂ ಅದ್ದೂರಿಯಾಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜೊತೆಗೂಡಿ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಾಡುವ ಯೋಜನೆಯಲ್ಲಿ ಇದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ ನಾಗರಾಜ್, ರಾಮಚಂದ್ರಪ್ಪ ಸ್ವಾಮಿ, ಹೇಮಂತ್ ಕುಮಾರ್, ಬಸಪ್ಪ, ಚನ್ನಸ್ರಮೇಶ್, ಬಿ ಆರ್ ವೆಂಕಟೇಶ್ ,ರಮೇಶ್, ಪಿ ರವಿ , ಮಣಿಕಂಠ ,ಪ್ರಭು, ಪ್ರದೀಪ್, ರವಿ ಬಿ , ಚಂದ್ರಶೇಖರ್ , ಶ್ರೀನಿವಾಸ್, ಅರುಣ್ ಕುಮಾರ್ ,ಪ್ರವೀಣ್ ಹಾಗೂ ಊರಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.