ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಕ್ರಮ
ಯಳಂದೂರು:ತಾಲ್ಲೂಕಿನ ಮದ್ದೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕರ್ನಾಟಕ ಸರ್ಕಾರದ ಮಹತ್ತರ ಯೋಜನೆಗಳಾದ ಪಂಚ ಗ್ಯಾರೆಂಟಿ ಯೋಜನೆಯ ಕಾರ್ಯಕ್ರಮವನ್ನು ಯಳಂದೂರು ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪ್ರಭುಪ್ರಸಾದ್ ರವರ ಅಧ್ಯಕ್ಷತೆಯಲ್ಲಿ
ಕಾರ್ಯಕ್ರಮ ನಡೆಯಿತು
ನಂತರ ಮಾತನಾಡಿದ ಅಧ್ಯಕ್ಷರು ಸರ್ಕಾರದ
ಪಂಚ ಗ್ಯಾರೆಂಟಿ ಯೋಜನೆಗಳು ರಾಜ್ಯದ ಎಲ್ಲಾ ಕುಟುಂಬದವರಿಗೂ ಸಿಗುತ್ತಿರುವಂತಹ ಯೋಜನೆ ಎಂದರೆ ಈ ಗ್ಯಾರಂಟಿ ಯೋಜನೆ ಎಂದು ಸಾರ್ವಜನಿಕರಿಗೆ ತಿಳಿಸಿದರು
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಕಾರ್ಯದರ್ಶಿ ಆರ್ ಉಮೇಶ್ ಸದಸ್ಯರುಗಳಾದ ನಂಜುಂಡಸ್ವಾಮಿ. ಶಿವಣ್ಣ.ವೀರುಪಾಕ್ಷ.ಭಾಗ್ಯ.ಶಿವು ಮದ್ದೂರು.ವಿಶ್ವ ಗಣಿಗನೂರು.ಮಂಜುನಾಥ.ನಾಗಣ್ಣ.ಪ್ರಭುಶಂಕರ್.ಅಷಂಪಾಷ.ನಾಗರಾಜು.ಯೋಗೇಶ್.ಸಚಿನ್.ಹಾಗೂ
ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಮಹಿಳೆಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ