ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಪತ್ರಕರ್ತರ ಪಾತ್ರ ಅಮೂಲ್ಯವಾದುದು— ಬಿ. ವಿ. ಮಲ್ಲಿಕಾರ್ಜುನಯ್ಯ
ದೊಡ್ಡಬಳ್ಳಾಪುರ:ಪತ್ರಕರ್ತರು ಸಮಾಜದ ಅಂಕು ಡೊಂಕು ಗಳನ್ನು ತಮ್ಮ ಬರವಣಿಗೆ ಯಿಂದ ಯಾವುದೇ ಪಕ್ಷಪಾತವಿಲ್ಲದೆ ತಿದ್ದಬೇಕು, ಸಮಾಜದಲ್ಲಿ ನೆಡೆಯುವ ತಪ್ಪುಗಳನ್ನು ಯಾವುದೇ ಅಂಜಿಕೆ ಇಲ್ಲದೇ ಪ್ರಶ್ನಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾದುದ್ದು ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ ತಿಳಿಸಿದರು.
ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದ ಎ.ಎಸ್.ವಿ.ಎನ್.ವಿ ಸಮುದಾಯ ಭವನದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯರ ಮಹಾಸಭೆ ಮತ್ತು ಜಿಲ್ಲಾ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮನರಂಜನೆಗೆ ಪತ್ರಿಕೋದ್ಯಮ ಹೆಚ್ಚಾಗಿ ಪ್ರಾಮುಖ್ಯತೆ ನೀಡಲು ಮುಂದಾಗುತ್ತಿದೆ. ಅನ್ಯಾಯದ ಪರ ಧ್ವನಿಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ , ಸಮಾಜದಲ್ಲಿ ನಡೆಯುವ ಮೋಸ, ವಂಚನೆ, ಅನ್ಯಾಯವನ್ನು ನಮ್ಮ ಬರವಣಿಗೆ ಮೂಲಕ ಪ್ರಶ್ನಿಸುವುದನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು.
ಇಂದಿನ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ ಮಾತನಾಡಿ ಪತ್ರಕರ್ತರಲ್ಲಿ ದೈನಂದಿಕ,ವಾರ,ಅಥವಾ ಮಾಸಿಕ ವರದಿ ಮಾಡುವ ವಿಧಾನ ಬೇರೆಯಾಗಿರುತ್ತದೆ ಅಷ್ಟೇ ಆದರೇ ಪತ್ರಿಕೋದ್ಯಮದಲ್ಲಿ ಎಲ್ಲರು ಸಮಾನರೇ ಹಾಗಾಗಿ ನಮ್ಮಿಂದ ಬರವಣಿಗೆ ರೂಪದಲ್ಲಿ ಸಮಾಜಕ್ಕೆ ನೀಡುವ ಕೊಡುಗೆ ಸಾಕಷ್ಟಿದೆ ಎಂಬುದನ್ನು ನಾವೆಲ್ಲರೂ ಅರಿಯಬೇಕು, ನ್ಯಾಯ ಪರವಾಗಿ ಸುದ್ದಿ ಮಾಡಿ.ರಾಜ್ಯದ ಯಾವುದೇ ಪತ್ರಕರ್ತರಿಗೆ ಸಮಸ್ಯೆ ಉಂಟಾದಲ್ಲಿ ನಿಮ್ಮೊಟ್ಟಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಂತು ಹೋರಾಟ ನೆಡೆಸುತ್ತದೆ.
ಇತಿಹಾಸ ಹೊಂದಿರುವ ನಮ್ಮ ಸಂಘಟನೆ ಅಧಿಕೃತವಾಗಿದ್ದು ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ತನ್ನದೇ ಆದ ಶಕ್ತಿ, ಘಟಕ, ಹಾಗೂ ಸಕ್ರಿಯ ಪದಾಧಿಕಾರಿಗಳನ್ನು ಹೊಂದಿದೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಹೊಂದಿದ್ದೇವೆ ಎಂಬುದೇ ಒಂದು ರೀತಿಯ ಹೆಮ್ಮೆಯ ಸಂಗತಿಯಾಗಿದೆ ಅದನ್ನು ನಾವೆಲ್ಲ ಅರಿತು ಕೊಳ್ಳಬೇಕು ಎಂದರು.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ರವಿ ಮಾವಿನಕುಂಟೆ ಮಾತನಾಡಿ ಸಮಾಜದ ಓರೆಕೋರೆಗಳನ್ನು ತಿದ್ದುವ ಮಹತ್ವದ ಕಾರ್ಯವನ್ನು ಸಮಾಜ ಸ್ನೇಹಿಯಾಗಿ ನಿರ್ವಯಿಸುವ ಪತ್ರಕರ್ತರ ಜೀವನ ಭದ್ರತೆಯ ಬಗ್ಗೆಯೂ ಚಿಂತನೆ ಅಗತ್ಯ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ದೊಡ್ಡಬಳ್ಳಾಪುರದ ಎನ್.ಎಂ ನಟರಾಜ್, ನೆಲಮಂಗಲದ ಎನ್ ಮೂರ್ತಿ,ದೇವನಹಳ್ಳಿಯ ಎಸ್,ಸಿ,ಎಂ,ಬೈರೇಗೌಡ,ಹಿಸಕೋಟೆಯ ಎನ್,ಎಂ,ನಾಗಲರಾಜು,ವಿಜಯಪುರದ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ ಮಲ್ಲಿಕಾರ್ಜುನಯ್ಯ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ .ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಪಿ.ಕುಸುಮಾ ಪರ್ವತರಾಜ್, ಶ್ರೀ ಕ್ಷೇತ್ರ ಘಾಟಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಶ್ರೀನಿವಾಸ್,ಉಪಾಧ್ಯಕ್ಷ ಮುರುಳಿ ಮೋಹನ,ಜಿ,ಎಸ್, ಮಂಜುನಾಥ, ಎಂ ಜ್ಯೋತೀಶ್ವರಪ್ಪ,ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ಕಾರ್ಯದರ್ಶಿ ಎಂ,ಆರ್ ನಾಗರಾಜು,ಬಿ.ಸಿ ಪರಮಶಿವಯ್ಯ,ಕಾರ್ಯಕಾರಿ ಸಮಿತಿ ಸದಸ್ಯರಾದ,ಆರ್ ಸತೀಶ್,ಮಧು,ಮಹೇಶ್,ವಿನಯ್,ಟಿ.ಎಂ ನಾಗರಾಜು,ಸುರೇಶ್, ನಾಮಿನಿ ಸದಸ್ಯರಾದ ಶ್ರೀನಿವಾಸ್ (ಗಾಂಧಿ)ಬಿ.ರಮೇಶ್, ಚನ್ನಕೃಷ್ಣಪ್ಪ,ರಾಜ್ ಗೋಪಾಲ್, ಹೆಚ್.ಜಿ.ರಾಜು ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ.ಉಪ್ಪಾರ್ , ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ನೆಲಗುದಿಗೆ, ಸೇರಿದಂತೆ ಜಿಲ್ಲಾ ಹಾಗು ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.
Post Views: 36