--ಜಾಹೀರಾತು--

ಕ್ರೀಡಾಪಟುಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಕ್ರಿಕೆಟ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಅಭಿನಂದನೆ : ಯುವ ಮುಖಂಡ ದೇವಲಾಪುರ ಶ್ರೀನಿವಾಸ್ ಹೇಳಿಕೆ

On: December 15, 2025 6:43 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಕ್ರೀಡಾಪಟುಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವಾಗಬೇಕು

ಕ್ರಿಕೆಟ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಅಭಿನಂದನೆ : ಯುವ ಮುಖಂಡ ದೇವಲಾಪುರ ಶ್ರೀನಿವಾಸ್ ಹೇಳಿಕೆ

ಹೊಸಕೋಟೆ:ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಯುವಕರು ಕ್ರೀಡೆಗಳತ್ತ ಗಮನ ಹರಿಸುತ್ತಿರುವ ಪ್ರಮಾಣ ಕುಗ್ಗುತ್ತಿದ್ದು ಇರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದು ಯುವ ಮುಖಂಡ ದೇವಲಾಪುರ ಶ್ರೀನಿವಾಸ್ ತಿಳಿಸಿದರು.

ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಶಾಸಕ ಶರತ್ ಬಚ್ಚೇಗೌಡರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಎಸ್ಬಿಜಿ ಕಪ್ 2025 ಚಾಂಪಿಯನ್ಸ್ ನಲ್ಲಿ ಗೆದ್ದ ದೇವಲಾಪುರದ ಡ್ರೀಮ್ ಡಿಪೆಂಡರ್ ತಂಡವನ್ನು ಅಭಿನಂದಿಸಿ ಮಾತನಾಡಿದರು.

ದೇವಲಾಪುರದ ಡ್ರೀಮ್ ಡಿಪೆಂಡರ್ ತಂಡವು ಮೂರನೇ ಸ್ಥಾನ ಪಡೆದಿದ್ದು 75,000 ನಗದು ಹಾಗೂ ಟ್ರೋಪಿ ಪಡೆದಿದ್ದು ಗ್ರಾಮಕ್ಕೆ ಕೀರ್ತಿ ತಂದಂತಾಗಿದೆ. ಯುವಕರು ಸಾಕಷ್ಟು ಕ್ರೀಡೆಗಳತ್ತ ಒಲವು ತೋರಿಸುತ್ತಿದ್ದು ಅವರಿಗೆ ಮತ್ತಷ್ಟು ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕಾಗಿದೆ. ಈ ರೀತಿಯ ಪಂದ್ಯಾವಳಿಗಳನ್ನು ಸಾಕಷ್ಟು ಬಾರಿ ಆಯೋಜನೆ ಮಾಡುವ ಮೂಲಕ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸುವ ಕೆಲಸ ನಿರಂತರವಾಗಿ ಆಗಬೇಕು. ಡ್ರೀಮ್ ಡಿಪೆಂಡರ್ ತಂಡ ಮೂರನೇ ಸ್ಥಾನ ಪಡೆದು 75,000 ನಗದು ಹಾಗೂ ಟ್ರೋಪಿಯನ್ನು ಗೆದ್ದಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪ್ರಥಮ ಸ್ಥಾನ ಪಡೆಯುವಂತಾಗಲಿ ಎಂದು ಶುಭವನ್ನು ಹಾರೈಸಿದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಾರೇಗೌಡ, ತಂಡದ ನಾಯಕ ಭರತ್ ಕುಮಾರ್ ಡಿಸಿ, ಕ್ರೀಡಾಪಟುಗಳಾದ ಡಿಪಿ ಮಂಜುನಾಥ್, ಮಾರಪ್ಪ, ಪುನೀತ್ ಕುಮಾರ್, ಬಿಟಿ.ಮಣಿ, ಬಿಟಿ ಕಿಶೋರ್, ರಾಹುಲ್, ಭಾಸ್ಕರ್ ಗೌಡ, ಹರ್ಷಿತ್, ಶ್ರೇಯಸ್, ವೆಂಕಟರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.

 

Read this too

*ಜಯಕರ್ನಾಟಕ ಸಂಘಟನೆಯು ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದೆ* ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್

ಭರವಸೆಯ ನೃತ್ಯಕಲಾವಿದೆ ವಿದಿತಾ ನವೀನ್ ರಂಗಪ್ರವೇಶ

ಗೋಮಾಳ ಒತ್ತುವರಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಪಂಚ ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಕುಂದು ಕೊರತೆ ಸಭೆ ಮಹಿಳಾ ಸಬಲೀಕರಣ ಆರ್ಥಿಕ ಪರಿಸ್ಥಿತಿ ಸುಧಾರಣೆ – ಚಿಕ್ಕ ಹುಲ್ಲೂರು ಬಚ್ಚೇಗೌಡ

ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ರಾಜ್ಯದಲ್ಲೇ ಮಾದರಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

*ಭಾರತ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರಿಂದ ಹಣ್ಣು ಹಂಪಲು ವಿತರಣೆ*