ಕಲುಷಿತ ನೀರು ಸೇವನೆಯಿಂದ ಕ್ಯಾನ್ಸರ್ ರೋಗ ಉಲ್ಬಣ… ಡಾ,ಆಂಜಿನಪ್ಪ

ದೊಡ್ಡಬಳ್ಳಾಪುರ : ಕಸಬಾ ಬಾಶೆಟ್ಟಿಹಳ್ಳಿ ಕೈಗಾರಿಕಾ ತ್ಯಾಜ್ಯ ನೀರು ಮತ್ತು ದೊಡ್ಡಬಳ್ಳಾಪುರದ ಒಳಚರಂಡಿಯ ನೀರು ಕೆರೆಗಳಿಗೆ ಸೇರಿ ಅರ್ಕಾವತಿ ಕಲುಷಿತಗೊಂಡಿದೆ, ಕಲುಷಿತ ನೀರು ಸೇವನೆಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ನಾವು ಎಚ್ಚೇತ್ತು ಕೊಳ್ಳದಿದ್ದಾರೆ ನಮ್ಮ ಮುಂದಿನ ಪೀಳಿಗೆ ಜನರು ಸಂಕಷ್ಟಕ್ಕೆ ತುತ್ತಾಗುತ್ತಾರೆಂದು ಖ್ಯಾತ ವೈದ್ಯರಾದ ಡಾ.ಆಂಜಿನಪ್ಪ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹರಿಯುವ ಅರ್ಕಾವತಿ ನದಿ ವಿಷವಾಗಿದೆ, ಅರ್ಕಾವತಿ ನದಿ ಪಾತ್ರದಲ್ಲಿನ ಕೆರೆಗಳನ್ನ ರಕ್ಷಣೆ ಮಾಡಲು ಕಳೆದ 10 ವರ್ಷಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ, ಅರ್ಕಾವತಿ ನದಿ ಹೋರಾಟ ಸಮಿತಿಯಿಂದ ಹೋರಾಟ ಸ್ವರೂಪ ತೀರ್ವತೆಯನ್ನು ಪಡೆದಿದ್ದು, ಸ್ಥಳೀಯರಾದ ಖ್ಯಾತ ವೈದರಾದ ಡಾ.ಆಂಜಿನಪ್ಪ ಹೋರಾಟದ ಮುಂದಾಳತ್ವ ವಹಿಸಿರುವುದು ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ.

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಆಂಜಿನಪ್ಪನವರು ಸಮ್ಮೇಳನದಲ್ಲೂ ನದಿ ಹೋರಾಟದ ಬಗ್ಗೆಯೇ ಮಾತನಾಡುವುದ್ದಾಗಿ ಹೇಳಿದರು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಜರಾಹೊಸಹಳ್ಳಿ ಗ್ರಾಮದಲ್ಲಿ ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಪಂಚಾಯಿತಿಗೆ ಸೇರಿದ ಮುಖಂಡರ ಜೊತೆ ಮಾತುಕಥೆಯನ್ನ ನಡೆಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅರ್ಕಾವತಿ ನದಿ ಪಾತ್ರದಲ್ಲಿನ ಕೆರೆಗಳು
ವಿಷಯುಕ್ತವಾಗಿದೆ, ಇದಕ್ಕೆ ಪ್ರಮುಖ ಕಾರಣ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ತ್ಯಾಜ್ಯ ನೀರು, ಕಲುಷಿತ ನೀರಿನಲ್ಲಿ ಕಣ್ಣಿಗೆ ಕಾಣಿಸದ ಕಾರ್ಸಿನೋ ಜೇನ್ಸ್ ಗಳು ಇದ್ದು, ಇವು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ, ಹೊಟ್ಟೆ ಕ್ಯಾನ್ಸರ್ , ಫ್ರಾಂಕ್ರಿಯಸ್ ಕಾನ್ಸರ್ ಮತ್ತು ಮೂಳೆ ಕ್ಯಾನ್ಸರ್ ಗಳಿಗೆ ಜನರು ಜನರು ತುತ್ತಾಗುತ್ತಿದ್ದಾರೆ. ನಾವು ಎಚ್ಚೇತ್ತುಗೊಳ್ಳದಿದ್ದಾರೆ ನಮ್ಮ ಮುಂದಿನ ಪೀಳಿಗೆಯ ಜನರು ಸಂಕಷ್ಟಕ್ಕೆ ತುತ್ತಾಗುತ್ತಾರೆ,

ಬಾಶೆಟ್ಟಿಹಳ್ಳಿಯಲ್ಲಿ ತಾಲೂಕು ಕನ್ನಡ ಸಮ್ಮೇಳನದಲ್ಲಿ ಇದೇ ವಿಚಾರವನ್ನ ಮಾತನಾಡಲಾಗುವುದು, ನಾನು ಡಾಕ್ಟರ್ ಹೌದು, ಅದರ ಜೊತೆ ಸಾಮಾಜಿಕ ಹೋರಾಟಗಾರ, ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ಚೆನ್ನಾಗಿ ಮಾತನಾಡ ಬಲ್ಲೆ, ನನ್ನ ಮಾತಿಗೆ ಜನರು ಸಹ ಗೌರವ ಕೊಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಅರ್ಕಾವತಿ ನದಿ ನೀರು ಹೋರಾಟ ಸಮಿತಿಯ ಸದಸ್ಯರು ಸಾರ್ವಜನಿಕರು ಹಾಜರಿದ್ದರು.