ವಯೋನಿವೃತ್ತಿ ಹೊಂದಿದ  ಕಾರ್ಯಪಾಲಕ ಅಭಿಯಂತರ ಮಹೇಶ್ ಗೆ ಆತ್ಮೀಯ ಬೀಳ್ಕೊಡುಗೆ

ಚಾಮರಾಜನಗರ: ನಗರದ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಎಸ್.ಪಿ. ಮಹೇಶ್ ಅವರಿಗೆ ಇಲಾಖೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಟ್ಡು ಸನ್ಮಾನಿಸಲಾಯಿತು.
ಕಚೇರಿಯಲ್ಲಿ ನಡೆದ  ಕಾರ್ಯಕ್ರಮದಲ್ಲಿ  ಇಲಾಖೆಯ
ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು
ಸನ್ಮಾನ ಸ್ವೀಕರಿಸಿದ ಎಸ್.ಪಿ.ಮಹೇಶ್ ಮಾತನಾಡಿ,  ಸರ್ಕಾರಿ ಸೇವೆಯಲ್ಲಿ ನಿವೃತ್ತಿ, ವರ್ಗಾವಣೆ ಸರ್ವೇ ಸಾಮಾನ್ಯವಾದದ್ದು,ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಡೆದ ಮುಖ್ಯಮಂತ್ರಿ ವಿಶೇಷ ಸಂಪುಟ ಸಭೆಯಲ್ಲಿ ಇಲಾಖೆ ವತಿಯಿಂದ ಕೈಗೊಂಡ ಕಾಮಗಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಿ ಮೆಚ್ಚುಗೆ ಪಡೆಯಲಾಗಿದೆ ಎಂದರು.
ಇಲಾಖೆ ಇಂಜಿನಿಯರ್ ಗಳು, ಗುತ್ತಿಗೆದಾರರ ಹಾಗೂ ಇಲಾಖೆ ಸಿಬ್ಬಂದಿ ಗಳು ಉತ್ತಮ ಸಹಕಾರ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಪಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತುಂಬಾ ಸಹಕಾರ ನೀಡಿದ್ದಾರೆ.  ತಮ್ಮ ಅಧಿಕಾರ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಈ ಅಭಿನಂದನೆ ಸಲ್ಲಿಸಿದರು.
ನೂತನ ಕಾರ್ಯಪಾಲಕ ಅಭಿಯಂತರಾದ ಕಿರಣ್  ಅವರಿಗೆ  ಎಸ್.ಪಿ.ಮಹೇಶ್ ಅಧಿಕಾರ ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ  ಎಇಇಗಳಾದ ರಮೇಶ್, ಚಿನ್ನಣ್ಣ, ಪುರುಷೋತ್ತಮ್, ರವಿಕುಮಾರ್, ಲೆಕ್ಕ ಪರಿಶೋಧನಾಧಿಕಾರಿ ವಿನೋದ್, ನಿವೃತ್ತ ಅಧೀಕ್ಷಕ ಇಂಜಿನಿಯರ್ ಗಳಾದ ಆರ್.ಕೆ.ರಾಜ್, ರಾಮಚಂದ್ರ, ಶಂಕರ್, ಚನ್ನಕೇಶವ, ಗುತ್ತಿಗೆದಾರರಾದ ಎಂ.ಎಸ್.ಮಾದಯ್ಯ, ಸಿ.ಕೆ.ಮಂಜುನಾಥ್, ಅಬ್ದುಲ್ ಅಜೀಜ್ , ಮಹದೇವಸ್ವಾಮಿ, ಬಂಗಾರು, ಸಾಧಿಕ್ ಪಾಷ ಇತರರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ