ಕಾಂಗ್ರೆಸ್ ತೊರೆದು ಕಮಲ ಪಕ್ಷ ಸೇರಿದ ಅರುಣ್ ಗುಂಡೇನಹಳ್ಳಿ
ನೆಲಮಂಗಲ :ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ದೋರಣೆಯಿಂದ ಬೇಸತ್ತ ಗ್ರಾಮ ಪಂಚಾಯ್ತಿ ಸದಸ್ಯ ಅರುಣ್ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷದ ಸೇರ್ಪಡೆಗೊಂಡಿದ್ದಾರೆ. ತಾಲೂಕಿನ ತ್ಯಾಮಗೊಂಡು ಹೋಬಳಿ ಕಳಲುಘಟ್ಟ ಗ್ರಾಮ ಪಂಚಾಯ್ತಿ ಸದಸ್ಯ ನೆಲಮಂಗಲದಲ್ಲಿ ನಡೆದ ಅಹಲ್ಯಬಾಯಿ ಜಯಂತಿಯಲ್ಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಇನ್ನು ಈ ಕುರಿತು ಮಾತನಾಡಿದ ಅರುಣ್ ನಾನು ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಪಕ್ಷದ ಸರ್ವತೋಮುಖ ಅಭಿವೃದ್ಧಿಗಾಗಿ, ಪಕ್ಷದ ತಳಮಟ್ಟದ ಸಂಘಟನೆಗಾಗಿ ದುಡಿದಿದ್ದೇನೆ, ಆದರೆ ಇತ್ತೀಚೆಗೆ ನೆಲಮಂಗಲ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮಾನಸಿಕವಾಗಿ ತೊಂದರೆ ಮಾಡಿದವು, ಹಾಗೂ ಪಕ್ಷದ ನೈಜ್ಯ ಕಾರ್ಯಕರ್ತರು ಹಾಗೂ ನಾಯಕರನ್ನ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳು ಹಾಗೂ ತಳ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವಕಾಶಗಳನ್ನ ನೀಡುತ್ತಿರುವುದನ್ನು ಮೆಚ್ಚಿ ಬಿಜೆಪಿ ಪಕ್ಷ ಸೇರ್ಪಡೆ ಆಗಿರುವುದಾಗಿ ತಿಳಿಸಿದರು.