“ರೋಟರಿ ಕ್ಲಬ್ ವತಿಯಿಂದ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ”

ಕೊರಟಗೆರೆ: ತಾಲೋಕಿನ ಕಸಬಾ ಹೋಬಳಿಯ ಕೊರಟಗೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಕೊರಟಗೆರೆ ವತಿಯಿಂದ ಶಾಲೆಯ ವಿದ್ಯಾರ್ಥಿಗಳ ಜೊತೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ರೋಟರಿಯನ್ ಡಿ. ಟಿ‌. ಶ್ರೀನಿವಾಸ್ ಮೂರ್ತಿ ಮಾತನಾಡಿ: ಪರಿಸರ ನಾಶ ಮಾನವನ ವಿನಾಶ ಪರಿಸರ ಇದ್ದರೆ ನಾವು ಇಲ್ಲದಿದ್ದರೂ ಪರಿಸರ ಇರುತ್ತದೆ. ಆದರೆ ಮಾನವನ ಇದಕ್ಕೆ ಹೊರತಾಗಿ ಪರಿಸರ ನಾಶಕ್ಕೆ ಕಾರಣವಾಗಿದ್ದಾನೆ. ಆದ್ದರಿಂದ ನಾವು ಸಾಧ್ಯವಾದಷ್ಟು ಪರಿಸರ ಉಳಿಸುವುದಕ್ಕೆ ಪ್ರಯತ್ನ ಮಾಡೋಣ ಹಾಗೂ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರಲ್ಲ ಅದು ಪ್ರತಿನಿತ್ಯ ಸಸಿ ನೆಡುವ ಗಿಡಗಳನ್ನು ಪಾಲಿಸುವ ಪೂಜಿಸುವ ಕಾರ್ಯವಾಗಲ್ಲಿ. ಒಂದೊಂದು ಮಗು ಒಂದೊಂದು ಸಸಿ ನೆಡೆಯುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

2025 ರ ವಿಶ್ವ ಪರಿಸರ ದಿನದ ಥೀಮ್:

ಪ್ಲಾಸ್ಟಿಕ್ ಮಾಲಿನ್ಯವು ತ್ರಿವಳಿ ಗ್ರಹ ಬಿಕ್ಕಟ್ಟಿನ ಮಾರಕ ಪರಿಣಾಮಗಳನ್ನು ಉಲ್ಬಣಗೊಳಿಸುತ್ತದೆ: ಹವಾಮಾನ ಬದಲಾವಣೆಯ ಬಿಕ್ಕಟ್ಟು , ಪ್ರಕೃತಿಯ ಬಿಕ್ಕಟ್ಟು , ಭೂಮಿ ಮತ್ತು ಜೀವವೈವಿಧ್ಯತೆಯ ನಷ್ಟ ಮತ್ತು ಮಾಲಿನ್ಯ ಮತ್ತು ತ್ಯಾಜ್ಯದ ಬಿಕ್ಕಟ್ಟು . ಜಾಗತಿಕವಾಗಿ, ಪ್ರತಿ ವರ್ಷ ಅಂದಾಜು 11 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವು ಜಲ ಪರಿಸರ ವ್ಯವಸ್ಥೆಗಳಿಗೆ ಸೋರಿಕೆಯಾಗುತ್ತದೆ, ಆದರೆ ಕೃಷಿ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಒಳಚರಂಡಿ ಮತ್ತು ಭೂಕುಸಿತಗಳಿಂದ ಮೈಕ್ರೋಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಸಂಗ್ರಹವಾಗುತ್ತವೆ.

ಸಮುದ್ರ ಪರಿಸರ ಸೇರಿದಂತೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಲು ಜಾಗತಿಕ ಒಪ್ಪಂದವನ್ನು ಮಾಡಿಕೊಳ್ಳುವತ್ತ ದೇಶಗಳು ಪ್ರಗತಿ ಸಾಧಿಸುತ್ತಿರುವಾಗ ಈ ವರ್ಷದ ವಿಶ್ವ ಪರಿಸರ ದಿನ ಆಚರಣೆ ನಡೆಯಿತು.

ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಎಸ್. ವಿ. ಮಾತನಾಡಿ:
ಪರಿಸರದಲ್ಲಿನ ಪ್ರತಿಯೊಂದು ಜೀವಿಯು ತನ್ನದೇ ಆದ ಜೀವನ ಗತಿಯನ್ನು ಪ್ರಕೃತಿಯೊಂದಿಗೆ ಕಂಡುಕೊಂಡು ಇನ್ನೊಂದು ಜೀವಿ ಅಥವಾ ವಾಸಿಸುವ ಪರಿಸರ ಭಾಗಕ್ಕೆ ದಕ್ಕೆಯನ್ನುಂಟು ಮಾಡದಂತೆ ಬದುಕುತ್ತವೆ. ಆದರೆ ಮಾನವ ಇದಕ್ಕೆ ಒರತಾಗಿ ಪರಿಸರ ನಾಶಕ್ಕೆ ಕಾರಣವಾಗುತ್ತಾನೆ. ಇನ್ನಾದರೂ ಹಾಗೂ ಶುದ್ಧ ಗಾಳಿಯಿಂದ ಜೀವಸಂಕುಲದ ಅಸ್ತಿತ್ವ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ಅತ್ಯುತ್ತಕ್ಕೆ ಶುದ್ಧ ಗಾಳಿಯೇ ಮೂಲಾಧಾರ ಹಾಗೂ ಸಸಿ ನೆಟ್ಟರೆ ಸಾಲದು ಸಂರಕ್ಷಿಸಬೇಕು ಮಾನವನ ದುರಾಸೆಗೆ ಅರಣ್ಯ ನಾಶ ಮಾಡುತ್ತಿದ್ದು. ಇದರಿಂದ ಜಾಗತಕ ತಾಪಮಾನ ಹೆಚ್ಚುತ್ತದೆ‌. ಇದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚು ಸಸಿ ನೆಡೆಯುವ ಮೂಲಕ ಪರಿಸರ ಸಂರಕ್ಷಿಸಬೇಕು ಇದಕ್ಕಾಗಿ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಸಿ ರೋಟರಿಯನ್ ಗಳಾದ ಮಂಜುನಾಥ್ ಎ. ಜಿ, ಮಲ್ಲೆಸಯ್ಯ ಕೆ. ನರಸಿಂಹಮೂರ್ತಿ ವಿ.ಕೆ. ನರಸಿಂಹಮೂರ್ತಿ ಎನ್. ಆರ್. ಭಾಗವಹಿಸಿದರು ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.

ವರದಿ: ಭರತ್ ಕೆ