ಉಚಿತ ಸಾಮೂಹಿಕ ವಿವಾಹವು ಧರ್ಮದ ಏಳಿಗೆಯ ಮತ್ತೊಂದು ಸಂಕೇತ- ಡಾಕ್ಟರ್ ಜಿ ಪರಮೇಶ್ವರ್

ಕೊರಟಗೆರೆ:ತಾಲೂಕಿನ ಸಿದ್ದರ ತಪೋವನ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರೀ ಬಾಳೆಹೊನ್ನೂರು ಶಾಖ ಮಠದ
19 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಹಾಗೂ ಸಾಮೂಹಿಕ ಜನಜಾಗೃತಿ ಧರ್ಮ ಸಮಾರಂಭವನ್ನು
ಏರ್ಪಡಿಸಲಾಗಿತ್ತು. ಭಾರತವು ಒಂದು ಹಿಂದೂ ರಾಷ್ಟ್ರವಾಗಿದ್ದು. ಸುಮಾರು ವರ್ಷಗಳ ಧಾರ್ಮಿಕ ಇತಿಹಾಸವನ್ನು ಒಳಗೊಂಡಿದ್ದು.ಹಲವಾರು ಧರ್ಮದ ಕಟ್ಟಪಾಡುಗಳನ್ನ ಒಳಗೂಡಿಸಿಕೊಂಡು ಸಾಮಾಜಿಕ ಜೀವನವನ್ನು ನಡೆಸುತ್ತಿರುವಂತ ಒಂದು ದೇಶ. ಧರ್ಮೋ ರಕ್ಷತಿ ರಕ್ಷಿತಃ ಮಹಾಭಾರತ ಮತ್ತು ಮನುಸ್ಮೃತಿಯ ಈ ವಾಕ್ಯ ಧರ್ಮದ ಮಹತ್ವವನ್ನು ತಿಳಿಸುತ್ತಿದ್ದು. ಧರ್ಮವನ್ನ ಯಾರು ಕಾಯ್ತಾರೆ ಆ ಧರ್ಮ ಅವರನ್ನು ಕಾಯುತ್ತದೆ ಎಂಬ ಧ್ಯೇಯ ವಾಕ್ಯವನ್ನು ಸಾರುತ್ತದೆ. ಹಾಗೆ ಉಚಿತ ಸಾಮೂಹಿಕ ವಿವಾಹಗಳು ಧರ್ಮದ ಒಂದು ಪ್ರತಿಬಿಂಬವಾಗಿ ಪ್ರತಿಬಿಂಬುಸುತ್ತ ಬಂದಿದ್ದು. ಧಾರ್ಮಿಕ ಆಚಾರ ವಿಚಾರಗಳನ್ನು ಸಮಾಜಕ್ಕೆ ಸಾರುವ ಒಂದು ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಒಂದು. ಬಡವರಿಗೆ ಮಾತ್ರ ಸೀಮಿತ ವಾಗಿರದೆ ಸರಳ ಜೀವನದ ಮತ್ತೊಂದು ಪಾಠ. ಈ ಕಾರ್ಯಕ್ರಮದ ಮೂಲಕ 15 ನವ ಜೋಡಿಗಳು ಗೃಹಸ್ಥ ಜೀವನಕ್ಕೆ ಕಾಲಿಟ್ಟರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಧರ್ಮ ಎಂಬುದು ಪುರಾತನವಾಗಿದ್ದು ಹಲವಾರು ಆಚಾರ ವಿಚಾರ ಕಟ್ಟುಪಾಡುಗಳನ್ನು ಜೀವನದ ಪಾಠಗಳನ್ನು ಕಲಿಸುವ ಸಿದ್ಧಾಂತ ಸಮಾಜದಲ್ಲಿ ಜೀವನವನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಸುತ್ತದೆ ಧರ್ಮ ಪುರಾತನವಾದರೂ ಆ ಧರ್ಮ ನಮ್ಮೊಂದಿಗೆ ಇಂದಿಗೂ ಕೂಡ ಶಾಶ್ವತವಾಗಿ ಉಳಿದಿರುವುದು ಧರ್ಮದ ಸಾರ್ಥಕತೆಯನ್ನು ಸಾರುವ ಮೂಲಕ ಆಧುನಿಕ ಭಾರತ ಮತ್ತು ಆಧುನಿಕ ಜಗತ್ತಿನಲ್ಲಿ ಬದಲಾವಣೆಯ ಚಾಪು ತಂದಿದೆ. ಬಸವಣ್ಣನವರು 850 ವರ್ಷಗಳ ಹಿಂದೆ ಸಮಾನತೆಯ ಧರ್ಮವನ್ನು ಸಾರಿದರು. ಏಕೆಂದರೆ ಧರ್ಮಗಳು ಹಲವು ಮನುಷ್ಯ ಕುಲವೊಂದೇ ಎಂಬ ಒಂದು ತತ್ವವನ್ನು ತಿಳಿಸಿದರು. ಸಾವಿರಾರು ಧಾರ್ಮಿಕ ಚಿಂತಕರು ಧರ್ಮದ ಜಾಗೃತಿಯನ್ನು ಮೂಡಿಸಲು ಸನ್ಯಾಸತ್ವವನ್ನ ಸ್ವೀಕರಿಸಿರುವುದನ್ನು ನೋಡಬಹುದು. ಧರ್ಮದ ಜಾಗೃತಿಗೆ ಇಂತಹ ಉಚಿತ ಸಾಮೂಹಿಕ ವಿವಾಹಗಳು ಸಾಕ್ಷಿ ಆಗ್ತವೆ. ಸಮಾಜದಲ್ಲಿ ಇಂಥ ಕಾರ್ಯಗಳು ಆದರ್ಶವಾಗಿ ಪರಿಣಾಮ ಬೀರುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿ.ಸಮಯವನ್ನು ಉಳಿತಾಯ ಮಾಡುವುದರ ಜೊತೆಯಲ್ಲಿ ಸರಳ ಜೀವನಕ್ಕೆ ಸಾಕ್ಷಿಯಾಗುತ್ತೆ. ಸಿದ್ದರಬೆಟ್ಟ ವೈದ್ಯಕೀಯ ಲೋಕಕ್ಕೆ ಸವಾಲನ್ನು ಎಸೆದಿರುವುದು ಗೊತ್ತಿರುವ ವಿಚಾರ ಈ ಕ್ಷೇತ್ರದಲ್ಲಿ ವೈದ್ಯಕೀಯ ಲೋಕದಲ್ಲಿ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಈ ಬೆಟ್ಟದ ಗಿಡಮೂಲಿಕೆಗಳಿಂದ ಬಗೆಹರಿದಿರುವುದು ಅಚ್ಚರಿಯ ಸಂಗತಿಗಳು. ನಾನು ಕೊರಟಗೆರೆ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದಲೂ ಮಠದ ಬೆನ್ನೆಲುಬಾಗಿ ಇದ್ದು. ನನ್ನ ರಾಜಕೀಯದ ಜೀವನಕ್ಕೆ ಶ್ರೀಗಳ ಆಶೀರ್ವಾದ ಅಂದಿನಿಂದಲೂ ಕೂಡ ಇದು ಪ್ರತಿ ವರ್ಷವೂ ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನೋದ್ದೇಶ ಯೋಜನೆಗಳಿಂದ ದೇಶದಲ್ಲಿ ಬಡತನದ ಪ್ರಮಾಣ 27% ಯಿಂದ 5.3% ಗೆ ಇಳಿಕೆ ಕಂಡಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮರ್ಪಕ ಆಡಳಿತವನ್ನು ಪ್ರತಿಬಿಂಬಿಸುವುದರ ಜೊತೆಗೆ ಅಭಿವೃದ್ಧಿಯ ಮುನ್ನಡೆಯನ್ನು ಬರೆಯಲಾಗಿದೆ. ನಾ ಕಂಡ ಮಠದ ಸ್ಥಾಪನೆಗೂ ಹಿಂದಿನ ದಿನದ ಮಠದ ಕಾರ್ಯಕ್ರಮಗಳು ಅಭಿವೃದ್ಧಿಯನ್ನ ಗಮನಿಸಿದರೆ ಮುಂದಿನ 15 ವರ್ಷಗಳಲ್ಲಿ ದೇಶದಲ್ಲಿ ಸಿದ್ದರಬೆಟ್ಟ ಹೆಸರುವಾಸಿಯಾಗುತ್ತೆ ಎಂಬ ನಂಬಿಕೆ ನನಗಿದೆ ಮತ್ತು ಶ್ರೀ ಶಿವಕುಮಾರ ಸ್ವಾಮಿಗಳ ತತ್ವ ನುಡಿಗಳಂತೆ ಬದುಕುವುದು ನಮಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಮಾತನಾಡಿ: ವೀರಶೈವ ಮಠಗಳು ಎಲ್ಲಾ ಜಾತಿ-ಪಂತದವರೊಂದಿಗೆ ಕೂಡಿ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿವೆ. ಯಾವುದೇ ಮಠವಾದರೂ ಭಕ್ತರ ಸಂಖ್ಯೆ ಇಲ್ಲದಿದ್ದರೆ. ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಿದ್ದರ ಬೆಟ್ಟದಲ್ಲಿನ ಮಠವನ್ನು ವೀರಶೈವರು ಮಾತ್ರ ಬೆಂಬಲಿಸಿಲ್ಲ ಶೇ 70 ರಷ್ಟು ಇತರ ಜನಾಂಗದ ಸಹಕಾರದಿಂದ ಮಠ ಅಭಿವೃದ್ಧಿ ಗೊಂಡಿದೆ. ಯಾವುದೇ ಕಾರ್ಯಕ್ರಮ ಮಾಡಬೇಕಾದರೆ. ಸಾದಕ-ಬಾಧಕಗಳ ಚರ್ಚೆ ನಂತರ ಆಯೋಜಿಸಬೇಕು ಇದನ್ನು ಮಾಡಿದ್ದೆ ತುರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡರೆ ಏನಾಗುತ್ತದೆ. ಎನ್ನುವುದಕ್ಕೆ ರಾಜ್ಯದಲ್ಲಿ ನಾಲ್ಕು ದಿನಗಳ ಹಿಂದೆ ನಡೆದಂತಹ ಕಹಿ ಘಟನೆ ಸಾಕ್ಷಿಯಾಗಿದೆ. ಸರ್ಕಾರ ಯಾವುದೇ ಇರಲಿ ಸಾಧಕ- ಬಾಧಕಗಳ ಚಿಂತನೆಯೊಂದಿಗೆ ಎಲ್ಲವೂ ನಡೆಯಬೇಕು ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಕುಟಿಕಿದರು. ನಮ್ಮ ಬೆನ್ನೆಲುಬು ರೈತ ಅವನಿಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸುವುದು ಎಲ್ಲಾ ಸಕಾ೯ಗಳು ಬದ್ಧವಾಗಿರಬೇಕು. ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆ ಕಾಮಗಾರಿ ಯಾವುದೇ ಕಾರಣಕ್ಕೂ ನಿಲ್ಲಬಾರದು. ಗೊಂದಲಕ್ಕೆ ಯಾರೊಬ್ಬರೂ ಅವಕಾಶ ಮಾಡಕೊಡದೆ. ರೈತಪರ ಚಿಂತನೆಯೊಂದಿಗೆ ಕಾಮಗಾರಿ ನಡೆಸಬೇಕು. ತುಮಕೂರು ಜಿಲ್ಲೆಯಲ್ಲಿರುವ ದೇವರಾಯನದುರ್ಗಾ ಮತ್ತು ಸಿದ್ದರಾ ಬೆಟ್ಟ ಕ್ಷೇತ್ರಗಳನ್ನು ಪ್ರವಾಸಿಗರ ಕ್ಷೇತ್ರವನ್ನಾಗಿ ಪರಿವರ್ತಿಸಲು ಕೇಂದ್ರದಿಂದ ಎರಡು ಕ್ಷೇತ್ರಕ್ಕೂ 10 ಕೋಟಿ ರೂ ಬಿಡುಗಡೆ ಮಾಡಿಸಿದ್ದು. ಶೀಘ್ರವೇ ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ವಹಿಸಲಿದ್ದಾರೆ‌ ಎಂದು ಹೇಳುತ್ತಾ. ಈಗಾಗಲೇ ರಾಜ್ಯದಲ್ಲಿ ರಾಯದುರ್ಗ ರೈಲ್ವೆ ಹಳ್ಳಿಯ ಕಾಮಗಾರಿ ಪ್ರಗತಿಯಿಂದ ಸಾಗುತ್ತಿದ್ದು. 2027 ಕ್ಕೆ ಡಿಸೆಂಬರ್ ಗೆ ಪ್ರಧಾನ ಮಂತ್ರಿ ಯೊಂದಿಗೆ ರೈಲು ಉದ್ಘಾಟಿಸುವುದು ಪಕ್ಕ ಇದರಲ್ಲಿ ಯಾವುದೇ ಅನುಮಾನ ಬೇಡ ಇದನ್ನು ನಾನು ಮಾಡಿಯೇ ತೀರುತ್ತೇನೆ. ಎಂದು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ
ಯಡಿಯೂರು ಶ್ರೀ ಕ್ಷೇತ್ರದ ರೇಣುಕಾ ಶಿವಾಚಾರ್ಯ. ಶ್ರೀ ತಿಪಟೂರಿನ ಷಡಕ್ಷರಿ ಶ್ರೀ ರುದ್ರಮುನಿ ಸ್ವಾಮೀಜಿ. ಬೆಳ್ಳಾವಿಯ ಕಾದಮಠದ ಕಾರ ವೀರಬಸವ ಸ್ವಾಮೀಜಿ. ಸೌದತ್ತಿಯ ನರಗಲ್ನ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ. ರಾಜಪುರದ ಶ್ರೀ ರಾಜೇಶ್ವರಿ ಶಿವಾಚಾರ್ಯ ಸ್ವಾಮೀಜಿ. ಕಂಬಾಳು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರದ ಜ್ಯೋತಿ ಗಣೇಶ್ . ಆಂಧ್ರಪ್ರದೇಶದ ತಿಪ್ಪೇಸ್ವಾಮಿ. . ಜಿಲ್ಲಾಧಿಕಾರಿ ಶುಭ ಕಲ್ಯಾಣ್.ಜಿಪಂ ಸಿ.ಇ.ಓ ಡಾ.ಪ್ರಭು.ಎಸ್ವಿ ಅಶೋಕ್ ತಹಸೀಲ್ದಾರ್ ಮಂಜುನಾಥ್. ಸಿದ್ದಮಲ್ಲಪ್ಪ. ವಿ.ಲಿ.ಮ.ಸ. ಮಹಿಳಾ ಅಧ್ಯಕ್ಷೆ ಮಮತಾ. ಮಂಜುನಾಥ್. ಪುಟ್ಟರಾಜು.ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್. ಕಾಂಗ್ರೆಸ್ ಮುಖಂಡರು ರಂಗರಾಜು (ಗೊಂದಿಹಳ್ಳಿ ). ಲಿಂಗಾಯತ ಮಹಾಸಭಾ ಸದಸ್ಯರು ಅರವಿಂದ್ ( ಉಪ್ಪಿ). ಕಾಂಗ್ರೆಸ್ ಮುಖಂಡರು ಮಾಲಿಂಗಪ್ಪ.ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಡಾ: ಪರಮೇಶ್. ಫ್ರೆಂಡ್ಸ್ ಗ್ರೂಪ್ ರವಿ.ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಚ್‌.ಪಿ. ನಿಲೇಶ್ ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಟಿ. ಎನ್. ರುದ್ರೇಶ್. ಅ.ಭಾ.ವೀ. ಲಿ. ಮ. ಯುವ ಜಿಲ್ಲಾಧ್ಯಕ್ಷ ದರ್ಶನ್. ತಾಲೂಕು ಅಧ್ಯಕ್ಷ ಭದ್ರಯ್ಯ. ಉಪಾಧ್ಯಕ್ಷ ಕೆ.ಸಿ. ಶಿವಕುಮಾರ್. ಮಠದ ಸದ್ಭಕ್ತರು ಹಾಜರಿದ್ದರು.

ವರದಿ– ಭರತ್ ಕೆ