*ಗ್ರಾಮೀಣ ಕ್ರೀಡೆಗಳು ಮನರಂಜನೆ, ದೇಹದ ಸಾಮರ್ಥ್ಯವನ್ನು ಹೆಚ್ಚಿಸಲಿದೆ* ಆನಂದ್
ದೇವನಹಳ್ಳಿ : ವಾಲಿಬಾಲ್ ಒಂದು ಕ್ರಿಯಾತ್ಮಕ ಮತ್ತು ಕಾರ್ಯತಂತ್ರದ ಕ್ರೀಡೆಯಾಗಿದ್ದು ಇದು ವಿಶ್ವದಾದ್ಯಂತ ಆನಂದಿಸಲ್ಪಡುವ ಪಂದ್ಯಾವಳಿಯಾಗಿದೆ ಎಂದು ಜಾಲಿಗೆ ಗ್ರಾಮ ಪಂಚಾಯಿತಿ ಸಿಂಗರಹಳ್ಳಿ ಅಧ್ಯಕ್ಷ ಆನಂದ್ ತಿಳಿಸಿದರು.
ತಾಲೂಕಿನ ಬೆಟ್ಟೇನಹಳ್ಳಿಯಲ್ಲಿ ಹನುಮಾನ್ ಸೇನೆಯಿಂದ ಪ್ರಥಮ ವರ್ಷದ ರಾಜ್ಯ ಮಟ್ಟದ ಓಪನ್
ವಾಲಿಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಕ್ರೀಡೆಗಳು ವ್ಯಾಯಾಮವನ್ನು ಉತ್ತೇಜಿಸುತ್ತದೆ ದೇಹದ ಸಾಮರ್ಥ್ಯ ವನ್ನು ಹೆಚ್ಚಿಸಲು ಹಾಗೂ ಆರೋಗ್ಯ ಕರ ಜೀವನಶೖಲಿ ಯನ್ನು ಬೆಳೆಸಲು ಸಹಾಯವಾಗಲಿದೆ. ಮೊಟ್ಟ ಮೊದಲ ಬಾರಿಗೆ 26 ತಂಡಗಳು ನಾನಾ ಕಡೆಗಳಿಂದ ಸ್ಪರ್ಧೆ ಮಾಡಲು ಭಾಗವಹಿಸಿದ್ದಾರೆ. ಶಾಂತಿ ಹಾಗೂ ಶಿಸ್ತಿನಿಂದ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸಲಾಗಿದೆ. ಇತ್ತೀಚಿನ ಯುವಪೀಳಿಗೆಯು ದುಶ್ಚಟಗಳಿಂದ ದೂರ ಉಳಿಯುವ ಉದ್ದೇಶದಿಂದ ವಾಲಿಬಾಲ್ ನಂತಹ ಪಂದ್ಯಾವಳಿಗಳನ್ನು ನಡೆಸಲಾಗಿದೆ ಎಂದರು.
ವಿಶ್ವನಾಥಪುರಪೋಲಿಸ್ ಠಾಣೆ ಸರ್ಕಲ್ ಇನ್ಸ್ ಪೇಕ್ಟರ್ ಶ್ರೀನಿವಾಸ್ ಮಾತನಾಡಿ, ಬೆಟ್ಟೆನಹಳ್ಳಿ ಪ್ರಜ್ಞಾವಂತ ಕ್ರೀಡಾಪಟುಗಳು ಒಂದಲ್ಲೊಂದು ಓಪನ್ ಪಂದ್ಯಾವಳಿ ನಡೆಯುತ್ತಾ ಇರುತ್ತವೆ. 18 ವರ್ಷ ಮೇಲ್ಪಟ್ಟವರು ಓಪನ್ ಪಂದ್ಯಾವಳಿ ಯಲ್ಲಿ ಭಾಗವಹಿಸಿರೊಂದು ಸಂತಸ ವನ್ನುಂಟು ಮಾಡಿದೆ. ಗ್ರಾಮೀಣ ಕ್ರೀಡೆ ಗಳಿಗೆ ಇಲ್ಲಿನ ಎಲ್ಲ ಮುಖಂಡರ ಪೋತ್ಸಾಹ ಪ್ರಶಂಸನೀಯ. ಶಿಕ್ಷಣದ ಜತೆಗೆ ಕೌಶಲ್ಯ ಆದಾರಿತ ಚಟುವಟಿಕೆಯಲ್ಲಿ ಕಾಳಜಿವಹಿಸಿ ಪೋಷಕರ ಆರ್ಥಿಕ ಹೊಣೆ ಸುಧಾರಣೆಗೆ ಸಹಕರಿಬೇಕು. ಕ್ರಿಕೆಟ್, ಹಾಕಿ, ಕಬ್ಬಡಿ, ಖೊಖೋ, ಲಾಂಗ್ ಜಂಪ್, ಹೖ ಜಂಪ್, ಶಟಲ್ ಖಾಖ್, ಪುಟ್ ಬಾಲ್ ಮುಂತಾದ ಆಟಗಳಲ್ಲಿ ಸ್ಪರ್ಧೆ ಮಾಡಿದ್ದಲ್ಲಿ ಕ್ರೀಡಾಕೊಟಾದಲ್ಲಿ ಉದ್ಯೋಗಾವಕಾಶಗಳು ಕ್ರೀಡಾ ಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಜಾಲಿಗೆ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಬಾಲ ಸುಬ್ರಮಣ್ಯ ಮಾತನಾಡಿ, ವಾಲಿಬಾಲ್ ಪಂದ್ಯಾವಳಿ ಎರಡು ತಂಡಗಳ ನಡುವೆ ಆಡುವ ಆಟವಾಗಿದ್ದು, ಪ್ರತಿ ತಂಡವು ಆರು ಆಟಗಾರರನ್ನು ಒಳಗೊಂಡಿರುತ್ತದೆಂದರು.
ಪಂಚಾಯಿತಿ ಸದಸ್ಯ ಬೆಟ್ಟನಹಳ್ಳಿ ಮಹೇಶ್ ಬಾಬು ಮಾತನಾಡಿ, ಚೆಂಡನ್ನು ನೆಟ್ನ ಮೇಲೆ ಹೊಡೆ ಯುವ ಮೂಲಕ ಅಂಕಗಳನ್ನು ಗಳಿಸುವ ಉದ್ದೇಶದಿಂದ ಆಟವನ್ನು ಆಡಲಾಗುತ್ತದೆ. ರಾಜ್ಯಾದ್ಯಂತ 26 ವಾಲಿಬಾಲ್ ತಂಡಗಳು ಆಗಮಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಥಮ ಬಹುಮಾನ ಕುಮಟ ತಾಲೂಕಿನವರು 15000 ನಗದು ಟ್ರೋಫಿ ಪಾರಿತೋಷಕ ಪಡೆದು ವಿಜೇತರಾಗಿದ್ದಾರೆ.
ದ್ವೀತಿಯ ಬಹುಮಾನ ಬೆಟ್ಟಹಳ್ಳಿಯ ಯುವ ತಂಡ 7. 5 ಸಾವಿರ ನಗದು ಟ್ರೋಫಿ ಹಾಗೂ ಪಾರಿತೋಷಕ ಪಡೆದು ವಿಜೇತರು, ತೃತೀಯ ತಂಡ 5000 ರೂ ನಗದು ಹಾಗೂ ಪಾರಿತೋಷಕ ಹಾಗೂ ಟ್ರೋಫಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಂಗರಹಳ್ಳಿ ಆನಂದ್ ಸದಸ್ಯರಾದ ಬೆಟ್ಟನಹಳ್ಳಿ ಮಹೇಶ್, ಸೂಸೖಟಿ ಮಾಜಿ ನಿರ್ದೇಶಕ ಜಾಲಿಗೆ ಮುರಳಿ,
ಬೆಟ್ಟೇನಹಳ್ಳಿ ಮುಖಂಡರಾದ ಮುನಿಯಪ್ಪ, ಕೇಶವ ಮೂರ್ತಿ, ಪಾಪಣ್ಣ, ಮನೋಜ್, ರಾಜಣ್ಣ, ಶ್ರೀ ಹನುಮಾನ್ ಸೇನೆ ಪದಾಧಿಕಾರಿಗಳಾದ ಕ್ಯಾಪ್ಟನ್ ಚರಣ್, ಆಟಗಾರರಾದ ನಿತಿನ್, ಕಿಶೋರ್, ಮಧು, ರಂಜಿತ್ ಮುಂತಾದವರು ಇದ್ದರು.