ಅರ್ಕಾವತಿ ನದಿ ಸಂರಕ್ಷಣಾ ವೇದಿಕೆ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

ದೊಡ್ಡಬಳ್ಳಾಪುರ : ಜೀವಜಲ ಉಳಿವಿಗಾಗಿ ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನಮಗೆ 3ನೇ ಹಂತದ ಶುದ್ದೀಕರಣ ಘಟಕ ಬೇಕೆಬೇಕಾಗಿದೆ ಈ ಕಾರಣಕ್ಕಾಗಿ ಜುಲೈ 24 ರಿಂದ ತಾಲ್ಲೂಕು ಕಛೇರಿ ಮುಂದೆ ಅಮರಣಾಂತಿಕ ಉಪವಾಸ ಸತ್ಯಾಗ್ರಹವನ್ನು ಮಾಡುಲು ನಿರ್ಧರಿಸಿದ್ದೇವೆ ಎಂದು ಆರ್ಕವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ತಿಳಿಸಿದೆ.

ದೊಡ್ಡಬಳ್ಳಾಪುರ ನಗರಸಭೆ ತಮ್ಮ ಒಳಚರಂಡಿ ನೀರನ್ನು ನೇರವಾಗಿ ಶುದ್ದಿಕರಿಸದೇ ಚಿಕ್ಕತುಮಕೂರು ಕೆರೆಗೆ ಬಿಡುತ್ತಿರುವುದು,ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ತಮ್ಮಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಚಿಕ್ಕತುಮಕೂರು ಕೆರೆಗೆ ಬಿಡುತ್ತಿರುವುದು ಮತ್ತು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ನೀರನ್ನು ಮಳೆ ನೀರು ಹರಿಯುವ ಕಾಲುವೆಗೆ ಬಿಡುತ್ತಿರುವುದರಿಂದ ದೊಡ್ಡತುಮಕೂರು ಗ್ರಾಮಪಂಚಾಯತಿ ಮತ್ತು ಮಜರಾಹೊಸಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಅಂತರ್ ಜಲವು ಸಂಪೂರ್ಣ ಹಾಳಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಗಳಲ್ಲಿ ಲಭ್ಯವಿರುವ RO ಘಟಕದ ನೀರು ಸಹ ಬಳಸಲು ಯೋಗ್ಯವಾಗಿಲ್ಲ ಎಂಬ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುತ್ತದೆ ಇದಕ್ಕೆ ಸಂಬಂದಿಸಿದಂತೆ ಸಾರ್ವಜನಿಕರು ಅನೇಕ ಹೋರಾಟಗಳು ನಡೆಸಿದ್ದೇವೆ ಹಾಗೂ ಹಸಿರು ನ್ಯಾಯ ಪೀಠವು ಕೆರೆಯಲ್ಲಿರುವ ಎಸ್‌ಟಿಪಿಯನ್ನು ಬದಲಾಯಿಸಿ ಎಂಬ ಆದೇಶವನ್ನು ನೀಡಿದೆ ಇದರ ಪ್ರತಿಫಲವಾಗಿ 2023ನೇ ಇಸವಿಯಲ್ಲಿ ಎರಡನೇಯ ವೈಜ್ಞಾನಿಕ ಶುದ್ದೀಕರಣ ಘಟಕಕ್ಕೆ ಅಧಿಕಾರಿಗಳು ಅನುಮೋದನೆ ನೀಡುತ್ತಾರೆ ಆದರೆ ವಿಧಾನಸಭೆಯಲ್ಲಿ ನಮ್ಮ ತಾಲ್ಲೂಕಿನ ಶಾಸಕರು ಈ ವಿಚಾರವಾಗಿ ವಿಷಯ ಪ್ರಸ್ತಾಪ ಮಾಡಿದ್ದಾರೆ ಅದಕ್ಕೆ ಸಂಬಂದಪಟ್ಟಂತಹ ಮಂತ್ರಿಯವರು ಯಾವುದೇ ರೀತಿಯ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ತಿಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯನ್ನು ಎರಡು ಪಂಚಾಯ್ತಿ ಜನರು ಬಹಿಷ್ಕರಿಸಿದಾಗ ಜಿಲ್ಲಾಧಿಕಾರಿಗಳು ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಮುಂಭಾಗ ಎರಡು ಪಂಚಾಯತಿ ಮುಖಂಡರ ಸಭೆ ನಡೆಸಿ 2ನೇ ಹಂತದ ಶುದ್ದೀಕರಣ ಘಟಕಕ್ಕೆ ಒಪ್ಪಿಗೆ ಸಿಕ್ಕಿದೆ, ಜಮೀನು ಸಹ ನೋಡಿದ್ದೇವೆ ಎಂದು ಮೌಖಿಕವಾಗಿ ಸಭೆಯಲ್ಲಿ ತಿಳಿಸಿರುತ್ತಾರೆ. ಹಾಗೂ ಚುನಾವಣೆ ನಡೆಸಲು ತಿಳಿಸಿರುತ್ತಾರೆ ಅದಕ್ಕೆ ಒಪ್ಪಿದ ಗ್ರಾಮಸ್ಥರು ಚುನಾವಣೆಯನ್ನು ಸಹ ನಡೆಸಿದರು. ಆದರೆ ವಿಧಾನಸಭೆಯಲ್ಲಿ ಶಾಸಕರು ಈ ವಿಷಯ ಪ್ರಸ್ತಾವನೆ ಮಾಡಿದಾಗ ಸಂಬಂದಪಟ್ಟ ಮಂತ್ರಿಯವರು ನಮ್ಮ ಮುಂದೆ ಯಾವುದೇ ಕ್ರಿಯಾಯೋಜನೆ ಇಲ್ಲ ಎಂದು ಹೇಳಿರುತ್ತಾರೆ. ಇದರಿಂದ ನಮ್ಮ ಭಾಗದ ಜನರಿಗೆ ಸರ್ಕಾರದಿಂದ ದ್ರೋಹವಾಗಿರುತ್ತದೆ ಆದ್ದರಿಂದ ಗ್ರಾಮಸ್ಥರು ಆಮರಣಾಂತಿಕ ಉಪವಾಸ ಸತ್ಯಾಗ್ರಹವನ್ನು ಮಾಡುವ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರ್ಕಾವತಿ ಹೊರಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.