ವಿದ್ಯಾಪೋಷಕದಿಂದ ವೃತ್ತಿಪರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು
ಗದಗ : ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿಗಾಗಿ ವೃತ್ತಿಪರ(ಇಂಜನೀಯರಿಂಗ್/ಮೆಡಿಕಲ್) ಪದವಿ ಸೇರಬಯಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.
ವಿದ್ಯಾರ್ಥಿ/ವಿದ್ಯಾರ್ಥಿನಿಯರು ೨೦೨೫ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯನ್ನು ಮೊದಲನೆ ಸಲ ಬರೆದಿರಬೇಕು. ಹಾಗೂ ೮೦% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ದ್ವಿತೀಯ ಪಿ.ಯು.ಸಿ. ನಂತರ ಇಂಜನೀಯರಿಂಗ್, ಮೆಡಿಕಲ್, ವಿಭಾಗಗಳಿಗೆ ಪ್ರವೇಶ ಬಯಸುವವರು ಅರ್ಜಿ ಹಾಕಲು ಅರ್ಹರಾಗಿದ್ದಾರೆ. ಕರ್ನಾಟಕಕ್ಕೆ ಸಂಬಂಧಪಟ್ಟ ಇಂಜನೀಯರಿಂಗ್ ಸೇರಬಯಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಿ.ಇ.ಟಿ. ಪರೀಕ್ಷೆಯಲ್ಲಿ ೨೫೦೦೦ಕ್ಕಿಂತ ಕಡಿಮೆ ರ್ಯಾಂಕ್ನೊಂದಿಗೆ ಹಾಗೂ ಮೆಡಿಕಲ್ ಸೇರಬಯಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ೩೦೦೦ಕ್ಕಿಂತ ಕಡಿಮೆ ರ್ಯಾಂಕ್ನೊಂದಿಗೆ ಹಾಗೂ ಅಖಿಲ ಭಾರತ ರ್ಯಾಂಕಿಂಗ್ ನಲ್ಲಿ ೬೦೦೦೦ಕ್ಕಿಂತ ಕಡಿಮೆ ರ್ಯಾಂಕ್ನೊಂದಿಗೆ ಉತ್ತೀರ್ಣರಾಗಿರಬೇಕು. ಕುಟುಂಬದ ಮಾಸಿಕ ವರಮಾನ ೧೫,೦೦೦/- ರೂಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪಾಲಕರು/ಪೋಷಕರು ಕರ್ನಾಟಕದ ನಿವಾಸಿಯಾಗಿರಬೇಕು.
ಧನ ಸಹಾಯದ ಅರ್ಜಿಯು ವಿದ್ಯಾಪೋಷಕ ಸಂಸ್ಥೆಯ ಅಂತರ್ಜಾಲ www.vidyaposhak.ngo ದಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಅದರಲ್ಲಿ ನಮೂದಿಸಿರುವ ಮಾಹಿತಿಯನ್ನು ತುಂಬಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ ೩೦, ೨೦೨೫ . ಹೆಚ್ಚಿನ ಮಾಹಿತಿಗಾಗಿ ವಿದ್ಯಾಪೋಷಕ, ನಂ. ೩೦೭/೪ಎ೧, ನಗರಕರ ಕಾಲೋನಿ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ದೂರವಾಣಿ ಸಂಖ್ಯೆ : ೦೮೩೬-೨೭೪೭೩೫೭, ೮೮೬೧೨೦೧೮೨೮ನ್ನು ಸಂಪರ್ಕಿಸಬಹುದು.
ಗದಗ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಡಾ.ಸಂಗಮೇಶ ಸಜ್ಜನರ ಮೊ- ೯೯೪೫೫೫೫೦೮೪ , ಡಾ.ಪ್ರಭು ಗಂಜಿಹಾಳ ಮೊ: ೯೪೪೮೭೭೫೩೪೬ ,ಡಾ.ಪಿ.ಎಸ್.ಕಣವಿ ಮೊ: ೯೪೪೯೧೨೧೬೮೮ , ಪ್ರೊ.ಎಚ್.ಎನ್.ಕಾಳೆ ಮೊ: ೯೧೦೮೯೯೨೯೨೧ ಇವರನ್ನು ಸಂಪರ್ಕಿಸಬಹುದಾಗಿದೆ.
**
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬