ಬಿಳಿಗಿರಿ ರಂಗಪ್ಪನ ಹುಂಡಿಯಲ್ಲಿ 26.74 ಲಕ್ಷ ರೂ ಸಂಗ್ರಹ
ಯಳಂದೂರು. ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
ಈ ಬಾರಿ ದೊಡ್ಡ ಜಾತ್ರೆಯ ನಂತರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಹುಂಡಿಯಲ್ಲಿ 26,74,880 ರೂಪಾಯಿಗಳು ಸಂಗ್ರಹವಾಗಿದೆ. ಕಳೆದ ಎರಡು ತಿಂಗಳಿಂದ ದೇಗುಲದ ಹುಂಡಿಯಲ್ಲಿ ಹಣ ಸಂಗ್ರಹವಾಗಿದೆ, ಇದರಲ್ಲಿ 25 ಲಕ್ಷದ 31,145 ನಗದು, 1,43,735 ನಾಣ್ಯವು ಸೇರಿದೆ, ಇದರೊಂದಿಗೆ ನೇಪಾಳ ದೇಶದ ನೂರು ಮೌಲ್ಯದ ಕರೆನ್ಸಿ ಹಾಗೂ 2,000 ಮುಖಬೆಲೆಯ ಅಮಾನ್ಯವಾಗಿರುವ ಮೂರು ನೋಟುಗಳು ದೊರೆತಿವೆ, ವಿದೇಶಿ ಕರೆನ್ಸಿ ಜೊತೆ ಭಕ್ತರು ಕಾಣಿಕೆ ರೂಪದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿಗೆ ಅರ್ಪಿಸಿದ್ದು ಒಟ್ಟು 26.74 ಲಕ್ಷ ರೂ. ಸಂಗ್ರಹವಾಗಿದೆ ಎಂದು ಬಿಳಿಗಿರಿರಂಗನ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು
ಎಣಿಕೆ ಕಾರ್ಯದಲ್ಲಿ ತಹಸೀಲ್ದಾರ್ ಬಸವರಾಜು, ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ವೀರಭದ್ರ ಸ್ವಾಮಿ, ಅರ್ಚಕ ಶ್ರೀನಿವಾಸ್, ನಾಗೇಂದ್ರ ಭಟ್ ,ಪಾರುಪತೇದಾರ್ ರಾಜು, ಶೇಷಾದ್ರಿ, ರಾಜಶ್ವ ನಿರೀಕ್ಷಕರಾದ ಯದುಗಿರಿ, ASI ಗುರುಸಿದ್ದು,ಯಳಂದೂರು ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ