ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರೀ ಬಾಳೇಹೊನ್ನೂರು ಖಾಸಾ ಶಾಖಾ ಮಠದ 19ನೇ ವಾರ್ಷಿಕೋತ್ಸವ ಸಮಾರಂಭ
ಕೊರಟಗೆರೆ: ತಾಲ್ಲೂಕಿನ ಜಗಜ್ಯೋತಿ ಕೊರಟಗೆರೆಯ ಬಸವೇಶ್ವರ ದೇವಸ್ಥಾನದಲ್ಲಿ ಸಮಾರಂಭ ಕಾರ್ಯಕ್ರಮದ ಪತ್ರಿಕೆಯನ್ನು ಮಠದ ಭಕ್ತಾದಿಗಳ ಜೊತೆಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ:
ಶ್ರೀ ಕ್ಷೇತ್ರ ಸಿದ್ದರಬೆಟ್ಟ 19ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಮಾಡುತ್ತಿದ್ದು. ಸಾಮೂಹಿಕ ವಿವಾಹಗಳು. ಜನಜಾಗೃತಿ ಧರ್ಮ ಸಮಾರಂಭ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ.
ಗಂಗಾ ಪೂಜೆಯೊಂದಿಗೆ. ವಿವಿಧ ಧಾರ್ಮಿಕ ಆಚರಣೆ ಬಗ್ಗೆ ಮಾತನಾಡುತ್ತಾ ಇದೇ ಸಂದರ್ಭದಲ್ಲಿ 10,000ಸಾವಿರ ಪುಸ್ತಕ ದಾಸೋಹ ಸಮಾರಂಭ.ಉಚಿತ ಸಾಮೂಹಿಕ ದೀಕ್ಷೆ ಸಮಾರಂಭ. ಬೆಳಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ
ಕ್ಷೇತ್ರನಾಥ ಸಿದ್ದೇಶ್ವರ ಸ್ವಾಮಿಯ ಹಾಗೂ ಬಸವೇಶ್ವರ ಬೆಳ್ಳಿ ಪಲ್ಲಕ್ಕಿ. ನೂತನ ದಾಸೋಹ ಭವನ ಉದ್ಘಾಟನಾ ಸಮಾರಂಭ ಮಾಡಲಾಗುವುದು. ಹಾಗೂ ಶ್ರೀ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ 20 ಜನರಿಗೆ ಸನ್ಮಾನ ಕಾರ್ಯಕ್ರಮ ಮಾಡಲಿದ್ದು. ವಿಶೇಷವಾಗಿ ರೈತರಿಗೆ ಹಾಗೂ ಮಠಕ್ಕೆ ಬಂದ ಭಕ್ತಾದಿಗಳಿಗೆ 5000 ಸಸಿಗಳನ್ನು ನೀಡಲಾಗುವುದು. ಧಾರ್ಮಿಕ ವಾರ್ಷಿಕೋತ್ಸವಗಳು, ಸಾಮಾನ್ಯವಾಗಿ ಧಾರ್ಮಿಕ ಸಮುದಾಯಗಳಲ್ಲಿ, ಒಂದು ನಿರ್ದಿಷ್ಟ ಘಟನೆಯನ್ನು ನೆನಪಿಸಲು ಆಚರಿಸಲಾಗುತ್ತದೆ. ಇವುಗಳು ವ್ಯಕ್ತಿಗಳೊಂದಿಗೆ ದೇವರನ್ನು ಸಮೀಪಿಸಲು, ಆಧ್ಯಾತ್ಮಿಕವಾಗಿ ಪ್ರೋತ್ಸಾಹಿಸಲು, ಮತ್ತು ಸಮಾಜದಲ್ಲಿ ಧಾರ್ಮಿಕ ಆಚರಣೆಗಳನ್ನು ಫಲಪಡಿಸುವುದರ ಜೊತೆಗೆ ಆ ಸ್ಥಳದ ಆಚಾರ ವಿಚಾರ ಹುಟ್ಟು ಬೆಳವಣಿಗೆ ಧಾರ್ಮಿಕ ನಂಬಿಕೆಗಳ ಒಳನೋಟವನ್ನು ಬಲಪಡಿಸುವುದಾಗಿದೆ.
ಶ್ರೀ ಕ್ಷೇತ್ರ ಸಿದ್ದರಬೆಟ್ಟ ಮಠದಲ್ಲಿ 19ನೇ ವರ್ಷದ ವಾರ್ಷಿಕೋತ್ಸವ
ಸಮಾರಂಭವನ್ನು ದಿನಾಂಕ
03/6/2025 ಪ್ರಾರಂಭವಾಗಲಿದ್ದು. ಗಂಗಾ ಪೂಜೆ. ಮಹಾಗಣಪತಿ ಪೂಜೆ. ಪಂಚ ಕಳಸ. ನವಗ್ರಹ ಹಾಗೂ ರುದ್ರ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ವೀರಭದ್ರ ಸ್ವಾಮಿಗೆ ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ, ಪೂಜಾ ಕಾರ್ಯಕ್ರಮ ಜರುಗುವುದು. ಪುಸ್ತಕ ದಾಸೋಹದಲ್ಲಿ ಪಾಲ್ಗೊಳ್ಳುವವರು. ಒಂದು ಪುಸ್ತಕವನ್ನು ತಂದು ಕೊಟ್ಟು ಎರಡು ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದು. ಒಟ್ಟು 10,000 ಸಾವಿರ ಪುಸ್ತಕಗಳು ದಾಸೋಹದಲ್ಲಿ ಲಭ್ಯವಿರುತ್ತದೆ ಎಂದು ಹೇಳುತ್ತಾ.
ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕಾ ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ವದರು ಬಾಳೆಹೊನ್ನೂರು. ದಿವ್ಯ ಸಾನಿಧ್ಯ ವಹಿಸಲಿದ್ದು. ವೇದಿಕೆಯಲ್ಲಿ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಯಡಿಯೂರು ಕ್ಷೇತ್ರ. ಡಾ: ಹನುಮಂತನಾಥ ಸ್ವಾಮೀಜಿಗಳು ಎಲೆರಾಂಪುರ ಮಠ. ರುದ್ರಮುನಿ ಸ್ವಾಮಿಗಳು ತಿಪಟೂರು ಮಠ. ಖಾರದ ವೀರ ಬಸವ ಸ್ವಾಮಿಗಳು ಬೆಳ್ಳಾವಿ ಮಠ. ಬಸವಲಿಂಗ ಸ್ವಾಮಿಗಳು ತಂಗನಹಳ್ಳಿ ಮಠ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಸವದತ್ತಿ ಮಠ.ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ರಾಜಪುರ .ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಕಲ್ಲಬಾಳು. ಮಠದ ನಂಜುಂಡೇಶ್ವರ ಒಡೆಯ ಶಿವಾಚಾರ್ಯ ಸ್ವಾಮೀಜಿ ಹೋಳವನಹಳ್ಳಿ. ಗುರು ನಾಗಭೂಷಣ ಶಿವಚಾರ್ಯ ಸ್ವಾಮಿಗಳು ಮಳಲಿಮಠ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಸಂಗೊಳ್ಳಿ. ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾಗರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನಾಗವಂದ. ಸ್ವಾಮೀಜಿಗಳು ಉಪಸ್ಥಿತಿ ಇದ್ದು.
ಕಾರ್ಯಕ್ರಮವನ್ನು ದಿನಾಂಕ 8:06:2025 ರಂದು ರಾಜ್ಯ ರೈಲ್ವೆ ಖಾತೆ ಮತ್ತು ಜಲಶಕ್ತಿ ಸಚಿವರು ಭಾರತ ಸರ್ಕಾರ ವಿ. ಸೋಮಣ್ಣನವರು ಉದ್ಘಾಟನೆ ಮಾಡುವವರು.
ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಡಾ: ಜಿ. ಪರಮೇಶ್ವರ್ ಅವರು ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ.
ನೂತನ ದಾಸೋಹ ಭವನ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಕೆ. ಎನ್. ರಾಜಣ್ಣನವರು ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ.
ವಸತಿಗೃಹ ಉದ್ಘಾಟನೆಯನ್ನು ಶ್ರೀ ರಘುವೀರ್ ರೆಡ್ಡಿರವರು ಮಾಜಿ ಮಂತ್ರಿಗಳು ಆಂಧ್ರಪ್ರದೇಶ ಮಾಡಲಿದ್ದು. ಈ ಸಂದರ್ಭದಲ್ಲಿ ಶಾಸಕರುಗಳಾದ ಪುಟ್ಟಸ್ವಾಮಿ ಗೌಡ್ರು ಗೌರಿಬಿದನೂರು. ಜಿ.ಎಸ್. ಪಾಟೀಲ್. ಮಾಜಿ ಸಚಿವರು ಜಯಚಂದ್ರ. ಜ್ಯೋತಿ ಗಣೇಶ್. ಬಿ ಸುರೇಶ್ ಗೌಡ. ಎಂ.ಎಲ್.ಸಿ. ರಾಜೇಂದ್ರ. ಚಿದಾನಂದ್ ಗೌಡ. ಪಾವಗಡ ಶಾಸಕ ವೆಂಕಟೇಶ್ ಹಾಗೂ ಮಾಜಿ ಶಾಸಕರುಗಳು ಹಾಗೂ ಹಲವಾರು ಮುಖಂಡರುಗಳು ಈ ಕ್ಷೇತ್ರದ ಮಠದ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು. ಸಂದರ್ಭದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷರಾದ ಭದ್ರಣ್ಣ ಕಾಂಗ್ರೆಸ್ ಮುಖಂಡರಾದ ಎ.ಡಿ. ಬಲರಾಮಯ್ಯ . ಬಿಜೆಪಿ ಮುಖಂಡರಾದ ಪವನ್ ಕುಮಾರ್. ಸದಾಶಿವಯ್ಯ ಕೆ. ಬಿ.ಲೋಕೇಶ್. ಮಂಜುನಾಥ್. ಮಂಜುಳ ಶಂಬುಲಿಂಗ ಆರಾಧ್ಯ. ಕುಸುಮ ಜಗನ್ನಾಥ್. ದ್ರಾಕ್ಷಾಯಿಣಿ ರಾಜಣ್ಣ. ಲಿಂಗಪುರ ನಂದಿಶ್. ವಿನಯ್. ಜಗದೀಶ್. ಉಮಾ ಶಂಕರ್. ಪುಟ್ಟರಾಜು. ಗಿರೀಶ್. ಹಲವಾರು ಮುಖಂಡರು ಹಾಜರಿದ್ದರು.
ವರದಿ : ಭರತ್ ಕೆ