ಪೌರಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ 4ನೇ ದಿನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಬಲ
ಕೃಷ್ಣರಾಜಪೇಟೆ:ಪಟ್ಟಣದ ಪುರಸಭೆ ಕಛೇರಿಯ ಆವರಣದಲ್ಲಿ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು,_
_ತಾಲ್ಲೂಕು ಅಧ್ಯಕ್ಷರಾದ ಲೋಕೇಶ್.ವಿ ಮಾತನಾಡಿ ಚಳಿ -ಮಳೆಯನ್ನು ಲೆಕ್ಕಿಸದೇ ಪಟ್ಟಣವನ್ನು ದಿನನಿತ್ಯ ಶುಚಿ ಮಾಡವ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿ 45 ದಿನಗಳಾದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಮೀನಾಮೇಷ ಮಾಡುತ್ತಿರುವುದು ಬೇಸರದ ಸಂಗತಿ, ಪೌರಕಾರ್ಮಿಕರು ಇದೇ ರೀತಿ ಮುಷ್ಕರ ಮುಂದುವರಿಸಿದರೇ ಡೆಂಗ್ಯೂ ಕೊರೋನಾ ರೀತಿಯ ಖಾಯಿಲೆಗಳಿಗೆ ಸಾರ್ವಜನಿಕರು ತುತ್ತಾಗುವ ಸಾಧ್ಯತೆಯಿದೆ ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದ್ದು ನಿಮಗೆ ನ್ಯಾಯ ಸಿಗುವವರೆಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಬಲ ಸದಾ ಇರುತ್ತದೆಂದು ತಿಳಿಸಿದರು,_
_ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಲೋಕೇಶ್.ವಿ,ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಸಾರಂಗಿ ನಾಗಣ್ಣ,ಹಿರಿಯ ಪತ್ರಕರ್ತರಾದ ಎಚ್.ಬಿ.ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್. ಎನ್. ಕೆ, ಖಜಾಂಚಿ ಎಸ್.ರವಿ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಚಲುವರಾಜು, ಗೌರವಾಧ್ಯಕ್ಷ .ಪಿ.ಚನ್ನಯ್ಯ.ಕೆ.ಎಂ.ಚಂದ್ರು ಉಪಾಧ್ಯಕ್ಷರು,ಪಳನಿ ಸಂಘಟನೆ ಕಾರ್ಯದರ್ಶಿ, ಖಂಜಾಚಿ ಕೆ.ಎಂ.ಮಂಜು,ಕಂದಾಯ ಅಧಿಕಾರಿಗಳಾದ ರವಿ ಕುಮಾರ್, ಹಿರಿಯ ಆರೋಗ್ಯಾಧಿಕಾರಿ ಆಶೋಕ ಕುಮಾರ್, ಫೌರ ಸೇವಾ ನೌಕರರ ಸಂಘ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು._
*_ವರದಿ ಸಾಯಿಕುಮಾರ್. ಎನ್. ಕೆ,_*