*_ಬಡವರಿಗಾಗಿ ಜನ ಔಷಧಿ ಕೇಂದ್ರವನ್ನು ಉಳಿಸಿ: ಬಿ.ಜೆ.ಪಿ. ತಾಲ್ಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ.
ಕೃಷ್ಣರಾಜಪೇಟೆ:ಜನ ಔಷಧಿ ಕೇಂದ್ರವನ್ನು ಬಡವರಿಗಾಗಿ ಉಳಿಸಿ ಇದನ್ನು ರಾಜ್ಯ ಸರ್ಕಾರ ಮುಚ್ಚುವ ಪ್ರಯತ್ನ ಮಾಡುತ್ತಿದೆ, ಆಸ್ಪತ್ರೆಯ ಆವರಣಗಳಲ್ಲಿರುವ ಜನ ಔಷಧಿ ಕೇಂದ್ರ ಮುಚ್ಚಬಾರದೆಂದು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಸಿಗುತ್ತಿದ್ದು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು, ಬಿಜೆಪಿ. ತಾಲ್ಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ ತಿಳಿಸಿದರು._
_ಇಂದು ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಜನ ಔಷಧಿ ಕೇಂದ್ರ ಮುಚ್ಚದಂತೆ ರಾಜ್ಯ ಸರ್ಕಾರದ ವಿರುದ್ಧ ತಾಲೂಕು ಬಿಜೆಪಿ ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಕಪ್ಪು ಬಟ್ಟೆ ಧರಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು._
_ಅತಿ ಕಡಿಮೆ ದರದಲ್ಲಿ ಔಷಧಿಗಳು ಜನರಲ್ ಆಸ್ಪತ್ರೆಯ ಒಳಭಾಗದಲ್ಲಿ ಎಂಎಸ್ಎಲ್ ವತಿಯಿಂದ ನಡೆಸುತ್ತಿದ್ದು, ಇದು ರಾಜ್ಯ ಸರ್ಕಾರಿ ಅಂಗ ಸಂಸ್ಥೆಯಾಗಿದೆ, ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತಿತ್ತು ಮತ್ತು ಇದರ ವ್ಯಾಪಾರದಿಂದ ಸರ್ಕಾರಿ ಸಂಸ್ಥೆಯಾದ ಎಂ.ಎಸ್.ಐ.ಎಲ್. ಗಳಿಗೂ ಸಹ ಲಾಭ ಸಿಗುತ್ತಿತ್ತು ಎಂದು ಹೇಳಿದರು._
_ಮೆಡಿಕಲ್ ಮಾಫಿಯಾ ದೊಂದಿಗೆ ಕೈಜೋಡಿಸುವ ಪ್ರಯತ್ನದಿಂದ ಈ ರೀತಿ ಜನ ಔಷಧಿ ಕೇಂದ್ರಗಳನ್ನು ಆಸ್ಪತ್ರೆಗಳ ಒಳಾಂಗಣದಿಂದ ಎತ್ತಂಗಡಿ ಮಾಡಿಸುತ್ತಿದ್ದಾರೆ. ಅಲ್ಲದೆ ಜನ ಔಷಧಿ ಕೇಂದ್ರಗಳಲ್ಲಿ ನರೇಂದ್ರ ಮೋದಿ ರವರ ಚಿತ್ರವಿರುವುದೇ ಇವರಿಗೆ ದುಶ್ಶಪ್ನವಾಗಿ ಕಂಡಿದೆ. ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಸಿಗಬೇಕಾದ ಸೌಲಭ್ಯಗಳು ಅತಿ ಕಡಿಮೆಯಲ್ಲಿ ಸಿಗುವಾಗ ಅದಕ್ಕೆ ಸಂತಸವನ್ನು ವ್ಯಕ್ತಪಡಿಸಿ,, ಇದರಿಂದ ಜನರಿಗೆ ಹೆಚ್ಚು ಅನುಕೂಲ ಸಿಗುವಂತೆ ಮಾಡಬೇಕಾದ್ದು ಇವರ ಕರ್ತವ್ಯವಾಗಿರುತ್ತದೆ, ಆದರೆ ಜನಸಾಮಾನ್ಯರಿಗೆ ಸೌಲಭ್ಯಗಳನ್ನು ಕಡಿತ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು._
_ಆಸ್ಪತ್ರೆಯ ಒಳಾಂಗಣದಲ್ಲಿ ಇರುವ ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ಪ್ರತಿಭಟನೆಯನ್ನು ನಡೆಸಿದರು._
_ಈ ಸಂದರ್ಭದಲ್ಲಿ. ಪ್ರಧಾನ ಕಾರ್ಯದರ್ಶಿ ಚೌಕನಹಳ್ಳಿ ಪ್ರಕಾಶ್, ಎಸ್.ಟಿ ಮೋರ್ಚಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹೇಶ್ ನಾಯಕ,ಬಿಜೆಪಿ ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ವಾಸು, ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷರಾದ ಹಾದನೂರು ಮಂಜು, ಎಸ್ ಟಿ ಮೋರ್ಚಾದ ತಾಲೂಕ ಅಧ್ಯಕ್ಷರಾದ ರಾಜು ಜಿ ಪಿ, ಪುಷ್ಪ,ಶಿಲ್ಪ ,ದಿವ್ಯ ,ನಾಗಮಣಿ ,ಪುಷ್ಪ ಸರೋಜಾ, ಹೇಮಲತಾ,ನಾಗಮ್ಮ ಕಿರಣ್,ಮಂಜುನಾಥ್ ರಾಜೇಗೌಡರು, ಹಾಗೂ ಬಿಜೆಪಿಯ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಇದ್ದರು,_
*_ವರದಿ: ಸಾಯಿಕುಮಾರ್. ಎನ್. ಕೆ.