*ವಿಜಯಪುರದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಘನತ್ಯಾಜ್ಯ ವಿಲೇವಾರಿ ಜಾಗೃತಿ ಕಾರ್ಯಕ್ರಮ*
ವಿಜಯಪುರ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ವಿಜಯಪುರದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಈ ದಿನ ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಅಂದರೆ ಹಸಿಕಸ ಮತ್ತು ಒಣಕಸ ವಿಂಗಡನೆಯ ಕುರಿತ ಜಾಗೃತಿ ಅಭಿಯಾನವನ್ನು ನಡೆಸಿದರು.
ಪುರಸಭೆಯ ಅಧ್ಯಕ್ಷರಾದ ಭವ್ಯಮಹೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು, ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಬಹಳ ಅರ್ಥಪೂರ್ಣ ಹಾಗೂ ಉಪಯುಕ್ತ ಎಂದು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಪುರಸಭೆಯ ಮಾಜಿಅಧ್ಯಕ್ಷರೂ ಹಾಲಿಸದಸ್ಯರಾದ ಶ್ರೀಯುತ ಎಂ.ಸತೀಶಕುಮಾರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಜಾಗೃತಿ ಅಭಿಯಾನದಲ್ಲಿ ಪ್ರತಿ ಮನೆಯ ಬಳಿ, ಹಸಿಕಸ. ಒಣಕಸ ಹಾಗೂ ಇತರೇ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಬೇಕು, ತಮ್ಮ ಮನೆಯ ಮನೆಯ ಸುತ್ತಲಿನ ಪರಿಸರವನ್ನು ಹೇಗೆ ಸ್ವಲ್ಪವಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಸಾರ್ವಜನಿಕರಿಗೆ ಸಚಿತ್ರ ಸಹಿತ ವಿವರಿಸಬೇಕು ಹಾಗೂ ತಮ್ಮ ಕುಟುಂಬದವರಿಗೆ ಹಾಗೂ ಪೊಷಕರಿಗೂ ಸಹ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಪುರಸಭಾ ಉಪಾಧ್ಯಕ್ಷರಾದ ತಾಜುನ್ನೀಸಾ ಅವರು, ಸದಸ್ಯರಾದ ಶಿಲ್ಪಾಅಜಿತ್ ಅವರು, ಪ್ರಗತಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ವಿ.ಬಸವರಾಜು ಅವರು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಗತಿ ಪ್ರೌಢಶಾಲೆಯ ಸುಮಾರು 120 ಜನ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ವಾರ್ಡುಗಳ 650 ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಘನತ್ಯಾಜ್ಯ ವಿಲೇವಾರಿ ಕುರಿತ ಜಾಗೃತಿ ಮೂಡಿಸಿದರು