ಸಸ್ಯ ಸಂಕುಲ ಉಳಿದರೆ ಮಾತ್ರ…ಮನುಷ್ಯ ಕುಲ ಉಳಿಯುತ್ತದೆ– ಸುರೇಶ್ .ಎಸ್
ದೇವನಹಳ್ಳಿ :ತಾಲ್ಲೂಕಿನ ವಿಜಯಪುರ ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಗಳಲ್ಲಿ ಒಂದಾದ ಪ್ರಗತಿ ಆಂಗ್ಲ ಶಾಲೆಯ ಆವರಣದಲ್ಲಿ ದಿನಾಂಕ :05/06/2025ರ ಗುರುವಾರದಂದು 51ನೇ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸುರೇಶ್. ಎಸ್ ರವರು ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಘನ ಅಧ್ಯಕ್ಷತೆಯನ್ನು ಜೆ. ಎನ್. ಪ್ರಕಾಶ್ ರವರು ಪ್ರಗತಿ ಆಂಗ್ಲ ಶಾಲೆಯ ಮುಖ್ಯೋಪಾಧ್ಯಾಯರು, ಹಿರಿಯ ಶಿಕ್ಷಕರಾದ ಎಚ್, ಶಾಂತಮೂರ್ತಿರವರು ಮತ್ತು ಸಹ ಶಿಕ್ಷಕರಾದ ಲೋಕೇಶ್. ಕೆ .ಎಂ ರವರು ಹಾಗೂ ಹಲವಾರು ವಿದ್ಯಾರ್ಥಿಗಳು ಸೇರಿ ಗಿಡಕ್ಕೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಮುಖ್ಯೋಪಾಧ್ಯಾಯರಾದ
ಜೆ.ಎನ್.ಪ್ರಕಾಶ್ ರವರು ಈ ಕಾರ್ಯಕ್ರಮದ ಕುರಿತು ಮಾತನಾಡಿ “ಮನೆಗೊಂದು ಮರ ಊರಿಗೊಂದು ವನ” ಎಂಬ ಧ್ಯೇಯ ವಾಕ್ಯಕ್ಕೆ ಮಹತ್ವವನ್ನು ನೀಡುತ್ತಾ,
“ಭೂಮಿಯು ನಮ್ಮ ಮನೆಯಂತಿದೆ ಅದನ್ನು ಸ್ವಚ್ಛವಾಗಿ ಕಾಪಾಡುವುದು ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ” ಎಂಬುದನ್ನು ತಿಳಿಸುತ್ತಾ ಮರಗಳು ಬೋಧಿಸುತ್ತವೆ ಸಹನೆ, ನದಿಗಳು ತೋರಿಸುತ್ತದೆ ದಾನ ಧರ್ಮದ ಮಹತ್ವ, ನಿಸರ್ಗವೇ ನಮ್ಮ ಪಾಠಶಾಲೆ ಅದನ್ನು ಉಳಿಸೋಣ ಅದನ್ನ ಬೆಳೆಸೋಣ ಎಂದು ತಿಳಿ ಹೇಳಿದರು. ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡುವುದಾಗಿ ನಾವೆಲ್ಲರೂ ಇವತ್ತಿನಿಂದಲೇ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡುವುದರಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಶಾಲೆಯು ಪ್ಲಾಸ್ಟಿಕ್ ಮುಕ್ತ ಶಾಲೆ ಎಂದು ಹೆಸರು ತರಬೇಕು ಎಂದು ನಾವೆಲ್ಲರೂ ಪಣತೊಡುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್.ಎಸ್ ರವರು ಆಗಮಿಸಿ ಕಾರ್ಯಕ್ರಮದ ಕುರಿತು ಮಾತನಾಡಿ “ಸಸ್ಯ ಸಂಕುಲ ಉಳಿದರೆ ಮಾತ್ರ…ಮನುಷ್ಯ ಕುಲ ಉಳಿಯುತ್ತದೆ…. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗವಷ್ಟೇ…ಮನುಷ್ಯನಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧ”
ಪೂರ್ಣಚಂದ್ರ ತೇಜಸ್ವಿಯವರ ಸಾಲುಗಳನ್ನು ಮೆಲುಕು ಹಾಕುತ್ತಾ ಎಲ್ಲಾ ವಿದ್ಯಾರ್ಥಿಗಳಲ್ಲೂ ಪರಿಸರದ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಶಾಂತಮೂರ್ತಿ . ಹೆಚ್ ರವರು ಮಾತನಾಡಿ ಇವತ್ತಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಇದೆ ಆದ್ದರಿಂದ ಮಕ್ಕಳಾದ ನೀವು ನಿಮ್ಮ ಜನ್ಮ ದಿನದಂದು ಒಂದೊಂದು ಗಿಡವನ್ನು ನೆಟ್ಟರೆ ಅದು ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಆಮ್ಲಜನಕ ಕೊರತೆ ನೀಗಿಸುತ್ತದೆ “ಮರವಿದ್ದರೆ ಮಳೆ – ಮರ ಕಡಿದರೆ ಉರಿಯುವುದು ದರೆ” ಒಂದು ಹೊಂಗೆ ಮರ 1600 ಜನರಿಗೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಎಂಬುದನ್ನು ಮಕ್ಕಳಿಗೆ ಸವಿವರವಾಗಿ ವಿವರಿಸಿ ಹೇಳಿದರು. ಪರಿಸರದ ಮಹತ್ವವನ್ನು ಪರಿಸರವನ್ನು ಯಾವ ರೀತಿಯಲ್ಲಿ ಕಾಪಾಡಬೇಕು ಎಂಬುದನ್ನು ಮಕ್ಕಳಿಗೆ ಅರಿವಾಗುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೇಷ್ಠ .ಎಸ್ , ಸುಶ್ಮಿತ. ವಿ. ಎಸ್ , ಭೂಮಿಕ ನಾಯ್ಡು, ಪಂಚಮಿ, ಉನ್ನತಿ, ಕಾರ್ತಿಕ್ ಎನ್.ವಿ. ಲಿಖಿತ, , ನಿಶಾ, ಅಕ್ಷಜ್, ಈ ಎಲ್ಲಾವಿದ್ಯಾರ್ಥಿಗಳು ಪರಿಸರದ ಮಹತ್ವವನ್ನು ತಾವು ಅರಿತು ತಮ್ಮ ಸ್ನೇಹಿತರಿಗೂ ಕೂಡ ತಮ್ಮ ಭಾಷಣದ ಮುಖಾಂತರ ಪರಿಸರದ ಮಹತ್ವವನ್ನು ತಿಳಿಸಲು ಮುಂದಾದರು ಈ ಕಾರ್ಯಕ್ರಮದ ಕುರಿತು ಮಾತನಾಡಿ ಪರಿಸರವನ್ನು ಕಾಪಾಡದೆ ಹೋದರೆ ಆಗುವಂತಹ ತೊಂದರೆಗಳ ಬಗ್ಗೆ ಮತ್ತು ಅವುಗಳನ್ನು ಯಾವ ರೀತಿ ಪೋಷಿಸಬೇಕು ಎಂಬುದರ ಬಗ್ಗೆ ಸವಿವರವಾಗಿ ತಮ್ಮ ಸ್ನೇಹಿತರಿಗೆ ತಿಳಿಸಿಕೊಟ್ಟರು. ಮರಗಳನ್ನು ಕಡಿಯುವುದರಿಂದ ಆಗುವ ತೊಂದರೆಗಳ ಬಗ್ಗೆ ಮತ್ತು ಪರಿಸರದ ಮಾಲಿನ್ಯದ ಬಗ್ಗೆ ತಿಳಿಸಿದರು. ಪ್ರಣಿತ ಮತ್ತು ತಂಡ, ಮೋನಿಕಾ ಮತ್ತು ತಂಡ, ಚೇತನ ಮತ್ತು ತಂಡ ಈ ಎಲ್ಲ ವಿದ್ಯಾರ್ಥಿಗಳು ಪರಿಸರದ ಗೀತೆಗಳನ್ನು ಹಾಡಿದರು.
5ನೇ ತರಗತಿ ಪರಿಸರ ಅಧ್ಯಯನ ಶಿಕ್ಷಕಿ. ವನಜಾಕ್ಷಿ ರವರು ಮಾತನಾಡಿ 2025ರ ವಿಶ್ವ ಪರಿಸರ ದಿನಾಚರಣೆಯ ಥೀಮ್ -“ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವುದು” ಇದರ ಅನ್ವಯ 2025ರ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪರಿಸರದಲ್ಲಿ ಆಗುತ್ತಿರತಕ್ಕಂತಹ ಮಾಲಿನ್ಯಗಳಾದ ವಾಯುಮಾಲಿನ್ಯ, ಜಲ ಮಾಲಿನ್ಯ, ಭೂ ಮಾಲಿನ್ಯ ಬಗ್ಗೆ ವಿವರಿಸಿ ಹೇಳಿದರು.
ಕಾರ್ಯಕ್ರಮದ ಕುರಿತು ಎಲ್ಲಾ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರ ದಿನದ ಮಹತ್ವವನ್ನ ತಿಳಿಸುವುದಕ್ಕೆ ಪ್ರತಿಜ್ಞಾವಿಧಿಯನ್ನು ವಿಜ್ಞಾನ ಶಿಕ್ಷಕಿಯಾದಂತಹ ಉಷಾ.ಜಿ ರವರು ಭೋದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸುರೇಶ್. ಎಸ್, ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದಂತಹ ಜೆ.ಎನ್. ಪ್ರಕಾಶ್ ಮತ್ತು ಹಿರಿಯ ಶಿಕ್ಷಕರಾದಂತಹ ಶಾಂತಮೂರ್ತಿ.ಎಚ್ ರವರು ಮತ್ತು ಎಲ್ಲಾ ವಿದ್ಯಾರ್ಥಿಗಳು ಸೇರಿ ಹಲವಾರು ನೇರಳೆ , ಹೊಂಗೆ, ಬೆಟ್ಟದ ನೆಲ್ಲಿಕಾಯಿ ,ನಿಂಬೆ , ಕಾಡು ಬಾದಾಮಿ, ಮಹಾ ಗಣಿ, ಸರ್ವೇ,ಹೊನ್ನೆ, ನುಗ್ಗೆ …ಇತ್ಯಾದಿ ಗಿಡಗಳನ್ನು ಶಾಲಾ ಉದ್ಯಾನವನದಲ್ಲಿ ನೆಟ್ಟಿದರು.
ಈ ಕಾರ್ಯಕ್ರಮದ ಸ್ವಾಗತ ಕಾರ್ಯಕ್ರಮವನ್ನು 6ನೇ ತರಗತಿ ಭಾವನ.ಎಂ ಎಂಬ ವಿದ್ಯಾರ್ಥಿ ನಡೆಸಿಕೊಟ್ಟರು. ಪ್ರಾರ್ಥನೆಯನ್ನು ಖುಷಿ . ಪಿ .ಎನ್ ಮತ್ತು ತಂಡ ನೆರವೇರಿಸಿದರು. ವಂದನಾರ್ಪಣೆ ಕಾರ್ಯಕ್ರಮವನ್ನು 5ನೇ ತರಗತಿ ವಿದ್ಯಾರ್ಥಿನಿ ಹೇಮಿತ. ಪಿ ನಡೆಸಿಕೊಟ್ಟರು. ನಿರೂಪಣೆಯನ್ನು 7ನೇ ತರಗತಿ ಖುಷಿ .ಎಸ್ ಎಂಬ ವಿದ್ಯಾರ್ಥಿನಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಗತಿ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಶಿಕ್ಷಕ ವೃಂದದವರು , ವಿದ್ಯಾರ್ಥಿಗಳು , ಮಾದ್ಯಮ ಸ್ನೇಹಿತರು,ಪೋಷಕರು ಹಾಜರಿದ್ದರು.