ಜೂ.9 ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನದ ಸವಿ ನೆನಪಿನಲ್ಲಿ ನಾಗರಿಕ ರಕ್ಷಣಾ ದಿನ ಆಚರಣೆಗೆ ಸಜ್ಜಾಗಿ : ಕಾರಹಳ್ಳಿ ಶ್ರೀನಿವಾಸ್

ದೇವನಹಳ್ಳಿ:ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಡೆಸಿದ ತಾಲೂಕು ಮಟ್ಟದ ಪ್ರೊಫೆಸರ್ ಬಿ ಕೃಷ್ಣಪ್ಪ 88ನೇ ಜನ್ಮದಿನದ ನೆನಪಿನಲ್ಲಿ ನಾಗರಿಕ ಹಕ್ಕು ರಕ್ಷಣಾ ದಿನವನ್ನು ಆಚರಿಸುವ ಸಂಬಂಧ ಕಾರ್ಯಕರ್ತರ ಪೂರ್ವಬಾವಿ ಸಭೆ ನಡೆಯಿತು.

ಸೌದತ್ತಿ ಎಲ್ಲಮ್ಮನ ಪ್ರದೇಶಗಳಲ್ಲಿ ಸವಣೀಯ ಸಮುದಾಯಗಳು ತಳ ಸಮುದಾಯದ ಹೆಣ್ಣು ಮಕ್ಕಳಿಗೆ ಬಟ್ಟೆ ನೀಡದೆ ಬೆತ್ತಲೆಯಾಗಿದೆ ನಡೆಸಿಕೊಳ್ಳುತ್ತಿದ್ದ ದುಸ್ಥಿತಿಯನ್ನು ಕಂಡು ಪ್ರೋ. ಬಿ.ಕೃಷ್ಣಪ್ಪ ಅವರು ಅನಿಷ್ಠ ವ್ಯವಸ್ಥೆಯ ವಿರುದ್ಧ ಹೋರಾಡಿ ಮಹಿಳೆಯರಿಗೆ ಬಟ್ಟೆ ಕೊಡಿಸುವ ದಿಟ್ಟ ಹೋರಾಟಗಾರರು ಅವರ ಸ್ಮರಣೆಯನ್ನು ಮರೆಯುವಂತದ್ದಲ್ಲ ಹಾಗಾಗಿ ಜೂನ್ 9ರ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ 88ನೇಜಯಂತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಅವರು ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿ ಆರಂಭದಿಂದಲೂ ಬಹುತೇಕ ಘೋಷಣೆಗಳನ್ನು ಇಂದು ಶಾಸನಗಳು ಮತ್ತು ಕಾಯ್ದೆ ಗಳಾಗಿವೆ ಹೆಂಡ ಹೆಂಡತಿ ಬದಲಿಗೆ ವಸತಿ ಶಾಲೆ ಬೇಕು. ದಲಿತ ಚಳುವಳಿಯ ಹಲವು ವರ್ಷಗಳ ಬೇಡಿಕೆಯಾದ ಪಿಟಿಸಿಎಲ್ ಕಾಯ್ದೆ ಮಲವರುವ ಪದ್ಧತಿ ನಿಷೇಧ ಬಡತಿ ಮೀಸಲಾತಿ ಜಾರಿ ದಲಿತರಿಗೆ ವಿಶೇಷ ಪೊಲೀಸ್ ಠಾಣೆ, ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಇನ್ನು ಅನೇಕ ಬೇಡಿಕೆಗಳು ಯಶಸ್ವಿಯಾಗಲು ದಲಿತ ಸಂಘರ್ಷ ಸಮಿತಿ ಅಪಾರ ಹೋರಾಟಗಳಿಂದ ಮಾತ್ರ ಸಾಧ್ಯ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ದೇವನಹಳ್ಳಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ ಸಮಿತಿಯ ಪದಾಧಿಕಾರಿಗಳು ಹೋಬಳಿ ಪಂಚಾಯಿತಿ ಗ್ರಾಮೀಣಮಟ್ಟದಲ್ಲಿ ಸಭೆಗಳನ್ನು ಆಯೋಜನೆ ಮಾಡಿ ಸಮಾರಂಭ ಯಶಸ್ವಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ತಿಳಿಸಿರುತ್ತಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ನರಸಪ್ಪ, ಜಿಲ್ಲಾ ಮುಖಂಡ ಅವತಿ ತಿಮ್ಮರಾಯಪ್ಪ, ತಾಲೂಕು ಪದಾಧಿಕಾರಿಗಳಾದ ರಮೇಶ್ ದಾಸ್,ಮೋಹನ್, ಶಿವ ಮೂರ್ತಿ, ಚನ್ನಕೃಷ್ಣ, ಗುರುಪ್ರಸಾದ್, ವೆಂಕಟೇಶ್, ರಾಮು ಹಾಜರಿದ್ದರು.