*ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ರ‍್ಯಾಂಕ್ ಪಡೆದ ತನ್ಮಯ್.*

ಚಾಮರಾಜನಗರಕೆ ಎಸ್ ತನ್ಮಯ್ ರವರು ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಕೋಡಿ ಉಗ್ಗನೆ ಗ್ರಾಮದ ಸರ್ವೆ ಸಿದ್ದಯ್ಯ ಅವರ ಮಗ ಎಸ್. ಶ್ರೀಧರ್ ಮತ್ತು ಮಂಜುಳಾ ದಂಪತಿಗಳ ಪುತ್ರ ಕೆ ಎಸ್. ತನ್ಮಯ್ ರವರು ಇತ್ತೀಚಿಗೆ ನಡೆದ ಜೆ ಇ ಇ ಅಡ್ವಾನ್ಸ್ 2025ರ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131ನೇ ರ‍್ಯಾಂಕ್ ಪಡೆಯುವ ಮೂಲಕ
ಕೇರಳದ ಕೊಟ್ಟಾಯಮ್ ನ ಪಿ.ಎಂ. ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಐ ಐ ಟಿ ಸಿ ಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದು ಇವರ ಸಾಧನೆಯನ್ನು ಮೆಚ್ಚಿ ನಾಗರಿಕರು ಹಾಗೂ ಕುಟುಂಬವರ್ಗದ ಬಂದು ಬಳಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತನ್ಮಯ್ ಅವರು ಜೆ ಇ ಇ ಅಥವಾ ಜಂಟಿ ಪ್ರವೇಶ ಪರೀಕ್ಷೆ ಭಾರತದಲ್ಲಿ ಪದವಿಪೂರ್ವ ಎಂಜಿನಿಯರಿಂಗ್ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಉತ್ತೀರ್ಣ ರಾಗಿದ್ದಾರೆ. ಇದು ಪ್ರಾಥಮಿಕವಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿಗಳು), ಮತ್ತು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಪ್ರವೇಶ ಪಡೆಯುವ ಎರಡು ಹಂತದ ಪರೀಕ್ಷೆಯಾಗಿದೆ: ಒಂದು ಸ್ಕ್ರೀನಿಂಗ್ ಪರೀಕ್ಷೆ ಮತ್ತೂಂದು ಜೆಇಇ ಅಡ್ವಾನ್ಸ್ಡ್, ಇದು ಐಐಟಿ ಪ್ರವೇಶಕ್ಕಾಗಿ ಅಂತಿಮ ಪರೀಕ್ಷೆ. ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಮಗ ಇತರರಿಗೆ ಮಾದರಿಯಾಗಲಿ
ಎಂದು ಪೋಷಕರು ಸಂತೋಷ ವ್ಯಕ್ತ ಪಡಿಸಿದ್ದಾರೆ.

ವರದಿ ಆರ್ ಉಮೇಶ್ ಮಲಾರಪಾಳ್ಯ