ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯ ಭವಿಷ್ಯವನ್ನು ನುಡಿದ ಕುಂಚಿಟಿಗ ಮಠದ ಶ್ರೀಗಳು
ಕೊರಟಗೆರೆ:ತಾಲೂಕಿನ ಕೋಳಾಲ ಹೋಬಳಿಯ ನರಸಿಂಹ ಗಿರಿ ಸುಕ್ಷೇತ್ರ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದಲ್ಲಿ ಶ್ರೀ ಹನುಮಂತನಾಥ ಸ್ವಾಮಿಗಳ 43ನೇ ಜನ್ಮ ವರ್ಧಂತಿಯಲ್ಲಿ ಅಂಗವಾಗಿ ಮಠದಲೆಲ್ಲ ವಸಂತಕಾಲದ ಸೊಬಗು ತುಂಬಿ ತುಳುಕಿತ್ತಿತ್ತು. ಮಠದ ಸ್ಥಾಪನೆಯಾಗಿ 14 ವರ್ಷ ಕಳೆದರೂ ಅಂದಿನಿಂದಲೂ ಮಠದಲ್ಲಿ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೆ ಕೃಷಿ ಚಟುವಟಿಕೆಗಳು ಸಂಸ್ಕಾರ ಶಿಬಿರಗಳು ರಕ್ತದಾನ ಶಿಬಿರಗಳಂತ ಕಾರ್ಯಕ್ರಮಗಳನ್ನ ಆಯೋಜಿಸಿಕೊಂಡು ಬಂದಿರುವ ಈ ಮಠ ಒಂದು ಮಾದರಿ ಮಠವಾಗಿದೆ.
ಶ್ರೀ ನರಸಿಂಹಗಿರಿ ಕುಂಚಿಟಿಗರ ಮಹಾಸಂಸ್ಥಾನದ ಮಠದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಕಾರ್ಯ ಪ್ರವೃತ್ತಿಯಾಗಿದ್ದು. ಇದಕ್ಕೆ ಕಾರಣ ಸ್ಥಳೀಯ ಗ್ರಾಮಸ್ಥರ ಸಹಾಯ ಹಸ್ತ ಮುಖಂಡರುಗಳ ಬಾಗಿತ್ವ ತುಂಬ ಸಹಕಾರಿಯಾಗಿದೆ ಎಂದು ಜನ್ಮ ವರ್ಧಂತಿಯಲ್ಲಿ ಮಾತನಾಡಿದ ಶ್ರೀ ಹನುಮಂತನಾಥ ಸ್ವಾಮಿಗಳು ನೆನೆಯುತ್ತಾ ಸಾಮಾಜಿಕ ಜೀವನವನ್ನು ನಡೆಸಲು ಪ್ರಾಮಾಣಿಕತೆ ಬಹಳ ಮುಖ್ಯವಾಗುತ್ತದೆ. ಪ್ರಾಮಾಣಿಕತೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಪ್ರಸ್ತುತವಾಗಿ ಮಠದಲ್ಲಿ 100 ಮಕ್ಕಳಿಗೆ ಉಚಿತ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದು. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವಂತ ಗುರಿಯನ್ನು ಹೊಂದಿದ್ದೇನೆ. ಈ ಮೂಲಕ ಮಠಮಾನ್ಯಗಳು ಸಾಮಾಜಿಕವಾಗಿ ವ್ಯಕ್ತಿಗಳಲ್ಲಿ ಮನಸುಗಳನ್ನು ಕಟ್ಟುವ ಕೆಲಸವನ್ನು ಮಾಡುವಂತ ಕಾರ್ಯಗಳಾಗ್ಬೇಕು . ಎಂದು ಹೇಳಿ ಡಾಕ್ಟರ್ ಜಿ ಪರಮೇಶ್ವರ್ ಅವರು ಒಬ್ಬ ಸಜ್ಜನ ಪ್ರಾಮಾಣಿಕ ರಾಜಕಾರಣಿ ಹಾಗೂ ತುಮಕೂರಿಗೆ ಮೆಟ್ರೋನ ದೂರ ದೃಷ್ಟಿಯನ್ನು ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನಗಳನ್ನು ತಂದು ಅಭಿವೃದ್ಧಿಯ ಪಥದಲ್ಲಿ ಕೊರಟಗೆರೆಯನ್ನು ಸಾಗಿಸುತ್ತಿದ್ದು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯ ಸ್ಥಾನದ ಚುಕಾಣಿಯನ್ನು ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು .
ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ : ಧರ್ಮ ಅಧರ್ಮದ ನಡುವಿನ ಸಾಮರಸ್ಯದಿಂದ ಕಲಿಯುಗದ ಅಂತ್ಯವನ್ನು ಕಾಣುವ ಸಂಭವ ಇಡೀ ಮನಕುಲವನ್ನ ಹಾಳು ಮಾಡುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿಕೊಂಡಿದ್ದೇವೆ ಇದಕ್ಕೆ ಕಾರಣ ಅಧರ್ಮದ ದಾರಿಗಳು ಈ ಅಧರ್ಮ ದಾರಿಗಳನ್ನು ಮುಚ್ಚುವಂತ ಕೆಲಸ ಇಂತಹ ಧರ್ಮ ಯಾತ್ರೆಗಳಿಂದ ಮಾತ್ರ ಸಾಧ್ಯ. ಹಾಗೂ ಮಠದಲ್ಲಿ ಈ ಹಿಂದೆ ಕೈಗೊಂಡ ಸಂಸ್ಕಾರ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮಕ್ಕಳು ವಿವಿಧ ಜಿಲ್ಲೆಗಳಿಂದ ಭಾಗಿಯಾಗಿದ್ದರು. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಸತ್ಪ್ರಜೆಗಳನ್ನು ಸೃಷ್ಟಿ ಮಾಡಲು ಸಹಾಯಕಾರಿ ಮತ್ತು ಈಗಿನ ಜೀವನ ಶೈಲಿಯಲ್ಲಿ ತಾಳ್ಮೆ ಸಹನೆಯನ್ನು ಒಳಗೂಡಿಸಿಕೊಂಡರೆ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.
ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹಿಂದೆ ಅನಕ್ಷರಸ್ಥರಿದ್ದರು. ಆದರೆ ಧರ್ಮ ಜಾಗೃತವಾಗಿತ್ತು ಇಂದು ಅಕ್ಷರಸ್ಥರು ಸಂಖ್ಯೆ ಹಚ್ಚಿದೆ ಆದರೆ ಅಧರ್ಮದಲ್ಲಿ ನಡೆಯುವವರ ಸಂಖ್ಯೆ ಹೆಚ್ಚಾಗಿದೆ ಇದೊಂದು ವಿಷಾದವಾದ ಸಂಗತಿ ಮಠಗಳು ಮತ್ತು ಮಠಾಧೀಶರು ಧರ್ಮ ಉಳಿಯಬೇಕೆಂದು ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ತುಮಕೂರಿನ ಸಂಜೀವಿನಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರ. ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ. ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಜಿಲ್ಲಾ ಪಂಚಾಯತಿ ಸಿಇಓ ಪ್ರಭು ಜಿ ತಹಸಿಲ್ದಾರ್ ಮಂಜುನಾಥ್ ಕೆ. ಗೃಹ ಸಚಿವರ ವಿಶೇಷ ಅಧಿಕಾರಿ ಡಾಕ್ಟರ್ ಕೆ ನಾಗಣ್ಣ. ಕೆಪಿಸಿಸಿ ಉಪಾಧ್ಯಕ್ಷ ಮುಳಿದ ರಾಮಪ್ಪ ಪಟ್ಟಣ ಪಂಚಾಯಿತಿ ಸದಸ್ಯ ಐಡಿಬಿ ಬಲರಾಮಯ್ಯ ಜಿಲ್ಲಾ ಪಂಚಾಯತಿ ಸದಸ್ಯರು ಶಿವರಾಮಯ್ಯ ಕೆಪಿಸಿಸಿ ಕಾರ್ಯದರ್ಶಿ ದಿನೇಶ್( ನೇರಳೆಕೆರೆ ) ತಾಲೂಕು ಕಾಂಗ್ರೆಸ್ ಮುಖಂಡ ಹನುಮಂತರಾಜು ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಜಯಮ್ಮ ಮುಂತಾದವರು ಉಪಸ್ಥಿತರಿದ್ದರು
ವರದಿ: ಭರತ್ ಕೆ