ಪ್ರಕೃತಿ ಸಂಪತ್ತಿನ ಅಳಿವು ಉಳಿವಿಗೆ ಪರಿಸರ ಜಾಗೃತಿ ಅನಿವಾರ್ಯ ಕಮಲೇಶ್
ದೇವನಹಳ್ಳಿ :- ತಾಲೂಕಿನ ಗಂಗವಾರದಲ್ಲಿ ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪಂಚಾಯತಿ ಮಾಜಿ ಅಧ್ಯಕ್ಷರಾದ ಆರ್ ಕಮಲೇಶ್ ರವರಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬಳಿಕ ಮಾತನಾಡಿ,
ಮುಂದಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರ ಸ್ನೇಹಿ ವಾತಾವರಣ ಜೊತೆಗೆ ಪೋಷಣೆಯ ಫಲವಾಗಿ ಹಣ್ಣು ಸೇವನೆಗೆ ಅನುಕೂಲ ವಾಗಲಿದ್ದು ಸುಮಾರು 120ಕ್ಕೂ ಹೆಚ್ಚು ಹಣ್ಣಿನ ಗಿಡಗಳಾದ ಸೇಬು, ಮಾವು, ದಾಳಿಂಬೆ, ಸಪೋಟ, ನಿಂಬೆ, ತೆಂಗು, ಬೆಟ್ಟದನಲ್ಲಿ, ಹಲಸು, ಸೀತಾಫಲ, ರಾಮ ಫಲ ಇನ್ನಿತರೆ ನಾನಾ ವಿಧವಾದ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು.
ಪರಿಸರ ಜಾಗೃತಿಗಾಗಿ ಅಗತ್ಯ ಉತ್ತೇಜನ ಯುವಕರಿಗೆ ಮೂಡಲು ಸರ್ಕಾರಿ ತರ ಸಂಸ್ಥೆಗಳು ಸರ್ಕಾರಿ ಘಟಕಗಳಿಂದ ಬೆಂಬಲಿತವಾಗಿವೆ ಪರಿಸರವನ್ನು ಬೆಂಬಲಿಸುವ ಪ್ರಾಥಮಿಕ ವಿಶ್ವ ಸಂಸ್ಥೆಯ ಎಲ್ಲರಿಗೂ ತಲುಪುವ ಜಾಗೃತಿಯನ್ನು ನಿರಂತರವಾಗಿ ಮಾಡಿಕೊಟ್ಟಿರುವುದು ಹೆಮ್ಮೆಯ ವಿಚಾರವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಎಲ್ಲಾ ಸಿಬ್ಬಂದಿ ಮತ್ತು ನೀರು ಸರಬರಾಜು ದಾರರು, ಸ್ವಚ್ಛತಗಾರರು, ಗ್ರಾಮಸ್ಥರು ಹಾಜರಿದ್ದರು.
ವರದಿ:ಜಗದೀಶ್ ದೇವನಹಳ್ಳಿ