ಪ್ರಗತಿ ಜ್ಞಾನ ದೇಗುಲದಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ.
ಮುದ್ದಾದ ಪುಟ್ಟ ಪುಟ್ಟ ಕೈಯಲ್ಲಿ ಅಕ್ಷರದ ಮೊದಲ ಸ್ಪರ್ಶ
ದೇವನಹಳ್ಳಿ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಪ್ರಗತಿ ಆಂಗ್ಲ ಶಾಲೆಯ ವತಿಯಿಂದ ದಿನಾಂಕ:-11 /6/2025 ರಂದು ಪ್ರೀ ನರ್ಸರಿ ಮತ್ತು ಎಲ್ ಕೆ ಜಿ ವಿದ್ಯಾರ್ಥಿಗಳಿಗೆ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀನಗರಶ್ವರ ಸ್ವಾಮಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಎಂ ಸತೀಶ್ ಕುಮಾರ್ ರವರ ವಹಿಸಿ ಈ ಕಾರ್ಯಕ್ರಮದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಈ ಸಮಾಜದಲ್ಲಿ ಉತ್ತಮವಾದಂತಹ ಶಿಕ್ಷಣ, ಉತ್ತಮ ವಾದಂತಹ ಮಾನವೀಯ ಮೌಲ್ಯಗಳು, ನಾಗರಿಕ ಮೌಲ್ಯಗಳು, ಮಗುವಿನಲ್ಲಿ ಅಳವಡಿಸಬೇಕಾದರೆ ಉತ್ತಮವಾದಂತಹ ಶಿಕ್ಷಣದ ವ್ಯವಸ್ಥೆ ಇರಬೇಕು ಎಂದು ತಿಳಿಸಿದರು. ಹಾಗೆ ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ.. ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ದಂತ ಪ್ರಗತಿ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ವಿ ಬಸವರಾಜು ರವರು ಮಾತನಾಡಿ ಇವತ್ತಿನ ದಿನ ನಿಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಒಂದು ಶುಭದಿನ.. ಕೆಲವು ಪೋಷಕರು ಈ ಒಂದು ಅಕ್ಷರಾಭ್ಯಾಸಕ್ಕೆ ಶೃಂಗೇರಿ ಅಥವಾ ವರನಾಡುಗೆ ಹೋಗಿ ಅಕ್ಷರಭ್ಯಾಸವನ್ನು ಮಾಡಿಸಿಕೊಂಡು ಬರುವರು ಆದರೆ ಇವತ್ತು ನಮ್ಮ ಪ್ರಗತಿ ಆಂಗ್ಲ ಶಾಲೆಯ ವತಿಯಿಂದ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನ ಆಹ್ವಾನಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮವಾದಂತಹ ಬುನಾದಿಯನ್ನ ಹಾಕುವ ನಿಟ್ಟಿನಲ್ಲಿ ಮುನ್ನುಗುತ್ತಿದ್ದಾರೆ. ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಒಂದು ಪುಸ್ತಕವನ್ನು ಕೊಟ್ಟು ಅವರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುವುದಾಗಿ ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪೋಷಕರಿಗೆ ಕಿವಿ ಮಾತನ್ನು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವಕಲ್ಯಾಣ ಮಠದ ಅಧ್ಯಕ್ಷರು ನಿ//ಪ್ರ//ಸ್ವ//ಶ್ರೀ ಶ್ರೀ ಶ್ರೀ ಮಹದೇವಸ್ವಾಮಿಗಳು ವಹಿಸಿ ನೆರೆದಿರುವಂತಹ ಎಲ್ಲಾ ಪೋಷಕರಿಗೂ ಆಶೀರ್ವಚನ ನೀಡಿ ಬಸವಣ್ಣನವರ ವಚನಗಳನ್ನು ಬಿಡಿಸಿ ಹೇಳುವುದರ ಮುಖಾಂತರ ಪೋಷಕರಲ್ಲಿ ವಿದ್ಯಾರ್ಥಿಗಳಿಗೆ ಬೇಕಾದಂತಹ ಮೌಲ್ಯಗಳನ್ನು ಹೇಗೆ ಬೆಳೆಸಬಹುದು ಎಂಬುದನ್ನು ತಿಳಿಸಿದರು. ಜೀವನದಲ್ಲಿ ವಿದ್ಯಾರ್ಥಿಗಳಿಗೆ ಸಂಪತ್ತು ಗಿಂತ ಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿ ಏಕೆಂದರೆ ಸಂಪತ್ತು ಕ್ಷಣಿಕವಾಗಿರುತ್ತೆ ಜ್ಞಾನ ಶಾಶ್ವತವಾಗಿರುತ್ತದೆ. ಎಂದು ಹೇಳಿದರು ಹಾಗೆಯೇ ಸರಿಸುಮಾರು 150 ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅಕ್ಷರಭ್ಯಾಸವನ್ನು ಮಾಡಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಜೆ.ಎನ್ .ಪ್ರಕಾಶ್ ರವರು ನುಡಿದು ಶಿಕ್ಷಣದ ಬೇರುಗಳು ಕಹಿ ಇರಬಹುದು. ಆದರೆ ಅದರ ಫಲ ಸಿಹಿಯಾಗಿ ರುತ್ತದೆ..ಇವತ್ತಿನ ದಿನ ನಡೆಯುವ ಸುಂದರವಾದ ಕಾರ್ಯಕ್ರಮದಲ್ಲಿ ನಡೆದಂತಹ ಅಕ್ಷರಭ್ಯಾಸ ನೆನಪಿನ ಪುಟಗಳಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ ಎಂಬುದನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಶಾಲೆಯ ಹಿರಿಯ ಶಿಕ್ಷಕರಾದ ಹೆಚ್ ಶಾಂತ ಮೂರ್ತಿಯವರು ನಡೆಸಿಕೊಟ್ಟರು. ವಂದನಾರ್ಪಣೆ ಕಾರ್ಯಕ್ರಮವನ್ನು ಆಶಾಲತಾ ಮೇಡಂ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕ ಆನಂದ್ ರವರು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 350 ಅಧಿಕ ಪೋಷಕರು , ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವರ್ಗದ ಶಿಕ್ಷಕ ಮತ್ತು ಶಿಕ್ಷಕಿಯರು,, ಮಾಧ್ಯಮ ಮಿತ್ರರವರು, ಛಾಯಾಗ್ರಹಕರು, ವಾಹನ ಸಿಬ್ಬಂದಿ ವರ್ಗದವರು, ಹಾಜರಿದ್ದರು.