RTI ಹೆಸರಿನಲ್ಲಿ ಸರ್ಕಾರಿ ನೌಕರರ ಮೇಲೆ ಗೂಂಡಾಗಿರಿ

ಹೊಸಕೋಟೆ : ಸರ್ಕಾರಿ ನೌಕರರನ್ನು ಬೆದರಿಸಿ RTI ಅರ್ಜಿಗಳ ಮುಖಾಂತರ ತಾಲೂಕಿನ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಹೊಸಕೋಟೆ ತಾಲೂಕು ಸರ್ಕಾರಿ ನೌಕರರು ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ನೀಡಿದರು.

ಕೋಲಾರ ಮೂಲದ ಎಸ್ ನಾರಾಯಣಸ್ವಾಮಿ ಎಂಬಥ ಹೊಸಕೋಟೆ ತಾಲೂಕಿನಲ್ಲಿ ಇರುವಂತಹ ಸರ್ಕಾರಿ ನೌಕರರಿಗೆ ಬೆದರಿಕೆ ಮುಖಾಂತರ ಆರ್‌ಟಿಐ ಅರ್ಜಿಗಳನ್ನು ಹಣ ವಸಿಲಿಗೆ ಮುಂದಾಗಿದ್ದ ಅದರಲ್ಲೂ ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಹೊಂದಿರದ ಮತ್ತು ವಯಕ್ತಿಕ ಹಣ ವಸೂಲಿಯ ಲಾಭಕ್ಕಾಗಿ ಎಸ್ ನಾರಾಯಣಸ್ವಾಮಿ ಅವರಿಗೆ ಸಂಬಂಧಿಸಿದ ದಾಖಲೆಗಳ ಮಾಹಿತಿಗಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಗಳನ್ನು ಸಲ್ಲಿಸಿರುವುದು ತದನಂತರ ಸರ್ಕಾರಿ ನೌಕರರಿಗೆ ಹಣ ವಸೂಲಿಗೆ ಬೇಡಿಕೆ ಇಡುವುದು ಕೊಡದೈತ ಪಕ್ಷದಲ್ಲಿ ನಾನು ಇಂದಿನ ಮುಖ್ಯ ಕಾರ್ಯದರ್ಶಿಯವರ ಮೇಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅನೇಕ ಉನ್ನತ ಹುದ್ದೆಯ ಅಧಿಕಾರಿಗಳಿಗೆ ಮೇಲೆ ಕೇಸುಗಳನ್ನು ಹಾಕಿ ಶಿಕ್ಷೆ ಒಳಪಡಿಸುತ್ತೇನೆ ಎಂದು ಬೆದರಿಸಿ ಹಣ ವಸೂಲಿಗೆ ಮುಂದಾಗುತ್ತಿದ್ದರು ಇವುಗಳನ್ನು ಮನಗಂಡು ತಾಲೂಕು ಸರ್ಕಾರಿ ನೌಕರ ಸಂಘದ ಎಲ್ಲಾ ಸದಸ್ಯರು ಹಾಗೂ ಅಧ್ಯಕ್ಷರು ವತಿಯಿಂದ ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ನೀಡಲಾಯಿತು.

ಇದೇ ಸಂದರ್ಭದಲ್ಲಿ ಇ ಓ ನಾರಾಯಣಸ್ವಾಮಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಸಿದ್ದರಾಜು, ಹೊಸಕೋಟೆ ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಇನ್ನಿತರ ಸರ್ಕಾರಿ ಅಧಿಕಾರಿಗಳು ಮನವಿಪತ್ರ ನೀಡಿರುವ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದರು.