ಬ್ಲಾಕ್ ಕಾಂಗ್ರೆಸ್ ನೂತನ ಅದ್ಯಕ್ಷರಾಗಿ ಕೆಸಿ. ಮಂಜುನಾಥ್ ನೇಮಕ ಮುಖಂಡರಿಂದ ಸನ್ಮಾನ
ದೇವನಹಳ್ಳಿ :ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ
ಬಲವರ್ದನೆ, ಸ್ಥಳಿಯ ಗ್ರಾಮ ಪಂಚಾಯಿತಿಗಳು, ಸಹಕಾರ ಸಂಘಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವು, ಅದಿಕಾರಕ್ಕೆ ಬರುವಲ್ಲಿ ಹತ್ತು ಹಲವು ವರ್ಷಗಳಕಾಲ ನಿರಂತರ ಪರಿಶ್ರಮ ಗುರ್ತಿಸಿ ರಾಜ್ಯ ಉಪ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೆ.ಸಿ.ಮಂಜುನಾಥ್ ಅವರನ್ನು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರನ್ನು ಆಯ್ಕೆ ಮಾಡಿದ ವರಿಷ್ಠರಿಗೆ ಜಾಲಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಲ ಸುಬ್ರಮಣ್ಯ ಶ್ಲಾಂಘನೀಯವೆಂದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸನ್ಮಾನಿಸಿದ ಬಳಿಕ ಮಾತನಾಡಿದರು.
ಪಂಚಾಯಿತಿ ಸದಸ್ಯ ಬೆಟ್ಟೇನಹಳ್ಳಿ ಮಹೇಶ್ ಬಾಬು ಅವರು ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವುದಲ್ಲದೆ ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕುಂದಾಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರತಿಸ್ಪರ್ದಿಯನ್ನು ಭೇದಿಸಿ ಅಧಿಕಾರಕ್ಕೆ ಬರುವಲ್ಲಿ ಯಶಸ್ಸು ಕಂಡವರು ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳು ವಸತಿ ನಿಲಯಗಳು ಅಂಗನವಾಡಿ ಕೇಂದ್ರಗಳು ಒಳಗೊಂಡಂತೆ ಗ್ರಾಮಸ್ಥರ ಕುಂದು ಕೊರತೆಗಳಿಗೆ ಹೆಚ್ಚಿನ ಸಹಕಾರ ನೀಡುವುದ ಲ್ಲದೆ ಆರೋಗ್ಯ ಕ್ಷೇತ್ರದಲ್ಲೂ ಕೂಡ ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಿದ್ದು ಇತ್ತೀಚೆಗೆ ನಡೆದ ಬಮೂಲ್ ಚುನಾವಣೆಯಲ್ಲೂ ಕೂಡ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಇಂತಹ ಯುವ ನಾಯಕತ್ವವನ್ನು ಗುರುತಿಸಿ , ಪಕ್ಷದ ಜವಾಬ್ದಾರಿ ನೀಡಿರುವುದು ಮುಂದಿನ ಯಾವುದೇ ಕ್ಷೇತ್ರಗಳಲ್ಲೂ ಸಮರ್ಥವಾಗಿ ಪಕ್ಷದ ಬಲವರ್ತನೆ ಹಾಗೂ ಅಧಿಕಾರಕ್ಕೆ ತರಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಸ್ತಾಪಿಸಿದರು.
ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಂಗರಹಳ್ಳಿ ಆನಂದ್ ಕುಮಾರ್, ಪಕ್ಷದ ಯುವ ಮುಖಂಡ ನಾಗಮಂಗಲ ಕಿರಣ್, ನಾಗೇಂದ್ರ, ನಾರಾಯಣ ಸ್ವಾಮಿ, ರಾಮಲಿಂಗಪ್ಪ ಮುಂತಾದವರು ಹಾಜರಿದ್ದರು.