*ದೊಡ್ಡಬಳ್ಳಾಪುರ l ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ ಕಾರ್ಯ ಮುಕ್ತಾಯ l ಒಟ್ಟು 66,83,320 ರೂ ಸಂಗ್ರಹ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕು
ತೂಬಗರೆ ಹೋಬಳಿ  ಶ್ರೀ ಕ್ಷೇತ್ರ  ಘಾಟಿ  ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಭಕ್ತರು ನೀಡಿದ ಹುಂಡಿ ಎಣಿಕೆ ಕಾರ್ಯ ನೆಡೆಯಿತು
 ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು 66,83,320 ರೂ ನಗದು   280ಗ್ರಾಂ,  ಬೆಳ್ಳಿ. 2 ಗ್ರಾಂ 700ಮಿಲಿ ಬಂಗಾರ ಭಕ್ತರು ಕಾಣಿಕೆ ರೂಪದಲ್ಲಿ   ನೀಡಲಾಗಿದೆ.
ಹುಂಡಿ ಎಣಿಕೆ  ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ ನಾರಾಯಣಸ್ವಾಮಿ ಮುಜರಾಯಿ ಇಲಾಖೆ ತಹಸಿಲ್ದಾರ್ ಜೆಜೆ ಹೇಮಾವತಿ ರವರು ಪ್ರಧಾನ ಅರ್ಚಕರು ಆರ್ ಸುಬ್ರಹ್ಮಣ್ಯ ಸಿಬ್ಬಂದಿ ನಂಜಪ್ಪ  ದೇವಾಲಯದ ಸಿಬ್ಬಂದಿ ಕೆನರಾ ಬ್ಯಾಂಕ್ ಸಿಬ್ಬಂದಿ ಪೊಲೀಸ್ ಇಲಾಖೆ ಹಾಗು ದೇವಾಲಯಕ್ಕೆ ಬಂದ ಭಕ್ತಾದಿಗಳ ಹಾಜರಿದ್ದರು.