ಅನ್ನದಾಸೋಹ ಮಾಡುವ ಮೂಲಕ ಹುಟ್ಟು ಹಬ್ಬದ ಆಚರಣೆ : ವಿಶೇಷ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ನಿರ್ಮಾಪಕ ಲಕ್ಷ್ಮಿಪತಿ
ದೊಡ್ಡಬಳ್ಳಾಪುರ : ತಮ್ಮ ಹುಟ್ಟುಹಬ್ಬದ ಅಂಗವಾಗಿ ವೃದ್ಧರಿಗೆ ವಸ್ತ್ರ ವಿತರಣೆ, ಶಾಲಾ ಮಕ್ಕಳಿಗೆ ಸಿಹಿ ಮತ್ತು ಪೆನ್ ವಿತರಣೆ ಜೊತೆಗೆ ನಿರಾಶ್ರಿತರಿಗೆ ಆಹಾರ ವಿತರಣೆ ಮಾಡುವ ಮೂಲಕ ನಿರಂತರ ಅನ್ನದಾಸೋಹ ಸಮಿತಿಯ ಸಹಕಾರದೊಂದಿಗೆ ನಟ ನಿರ್ಮಾಪಕ ಲಕ್ಷ್ಮಿಪತಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತರ ಅನ್ನದಾಸೋಹ ಕಾರ್ಯಕ್ರಮವು ಸತತ 1580ದಿನಗಳಿಂದ ನೆಡೆಯುತ್ತಿದ್ದು ಕಾರ್ಯಕ್ರಮದ ದಾನಿಗಳಾಗಿ ನಟ, ನಿರ್ಮಾಪಕ ಲಕ್ಷ್ಮೀಪತಿ ಭಾಗವಹಿಸಿ ಹಸಿದವರಿಗೆ ಆಹಾರ ವಿತರಣೆ ನೆಡೆಸಿದರು.
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಹಾಗೂ ಸ್ಥಳೀಯ ಪತ್ರಕರ್ತರಾದ ನೆಲ್ಲುಗುದ್ದಿಗೆ ಚಂದ್ರಣ್ಣ ಮಾತನಾಡಿ ಕೊರೋನ ಸಂದರ್ಭದಲ್ಲಿ ಪ್ರಾರಂಭವಾದ ಈ ಅನ್ನದಾಸೋಹ ಇಂದಿಗೆ 1580ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ನೂರಾರು ಜನರ ಹಸಿವನ್ನು ನಿಗಿಸುವ ಕಾಯಕವನ್ನು ಮಲ್ಲೇಶ್ ಮತ್ತು ತಂಡ ಮಾಡುತ್ತಿದ್ದು ಇಂದು ವಿಶೇಷವಾಗಿ ಗೆಳೆಯರು ಆತ್ಮೀಯರು ಆದ ನಿರ್ಮಾಪಕ ಲಕ್ಷ್ಮೀಪತೀಯವರು ತಮ್ಮ ಹುಟ್ಟುಹಬ್ಬದವನ್ನು ಅನ್ನದಾಸೋಹ ಸಮಿತಿಯೋಟ್ಟಿಗೆ ಆಚರಿಸಿಕೊಳ್ಳುತ್ತಿರುವುದು ಶ್ಲಾಘನಿಯ ಸಂಗತಿಯಾಗಿದೆ ಎಂದರು.
ನಗರಸಭಾ ಸದಸ್ಯ ಶಿವಶಂಕರ್ (ಶಂಕ್ರಿ) ಮಾತನಾಡಿ ನಿರಂತರ ಅನ್ನದಾಸೋಹ ಸಾಮಾನ್ಯದ ವಿಷಯವಲ್ಲ. ಇಂತಹ ಕಷ್ಟಕರ ಕೆಲಸವನ್ನು ಮಲ್ಲೇಶ್ ಮತ್ತು ತಂಡ ಇಷ್ಟಪಟ್ಟು ಮಾಡುತ್ತಿದೆ ಅವರಿಗೆ ಶುಭವಾಗಲಿ.ನಿರಾಶ್ರಿತರಿಗೆ ಆಹಾರ ವಿತರಣೆ ಶಾಲಾ ಮಕ್ಕಳಿಗೆ ಪೆನ್ ವಿತರಣೆ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ತಮ್ಮ ವಿಶೇಷ ದಿನವನ್ನು ಆಚರಿಸಿಕೊಂಡ ಲಕ್ಷ್ಮೀಪತಿಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ನಟ, ನಿರ್ಮಾಪಕ, ಲಕ್ಷ್ಮೀಪತಿ ಮಾತನಾಡಿ ಮಲ್ಲೇಶ್ ರವರ ನೇತೃತ್ವದಲ್ಲಿ ಇಂದು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ. ವೃದ್ಧರಿಗೆ ವಸ್ತ್ರ ವಿತರಣೆ ಮಾಡಬೇಕೆಂಬ ಹಂಬಲದಿಂದಾಗಿ ಇದು ಶಕ್ತಿಯನುಸಾರ ವಸ್ತ್ರ ವಿತರಣೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಸಿಹಿ ನೀಡಿ ಪೆನ್ ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಗಿದೆ. ಹೊರಗಡೆ ದುಂದುವೆಚ್ಚದ ಆಚರಣೆ ಮಾಡುವ ಬದಲು ಈ ರೀತಿಯ ಆಚರಣೆ ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಇಂದಿನ ಕಾರ್ಯಕ್ರಮ ವಿಶೇಷವಾಗಿದ್ದು ವೃದ್ಧರಿಗೆ ವಸ್ತ್ರ ವಿತರಣೆ ಮಕ್ಕಳಿಗೆ ಪೆನ್ ಸಿಹಿ ವಿತರಣೆ ಮಾಡುವ ಮೂಲಕ ನಟ ನಿರ್ಮಾಪಕ ಲಕ್ಷ್ಮಿಪತಿಯವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟು ಹಬ್ಬವನ್ನು ದುಂದುವೆಚ್ಚ ಮಾಡುವ ಮೂಲಕ ಆಚರಿಸುವ ಹಲವು ಜನರಿಗೆ ಲಕ್ಷ್ಮಿಪತಿಯವರು ಮಾದರಿಯಾಗಿದ್ದಾರೆ. ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡುವುದು ವಿಶೇಷವಾಗಿದೆ. ದಾನಿಗಳು ತಮ್ಮ ವಿಶೇಷ ದಿನವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುನಿರಾಜು, ಚಂದ್ರಣ್ಣ, ಸೇರಿದಂತೆ ಹಲವು ಮುಖಂಡರು , ನಿರಂತರ ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.