150ಕೋಟಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲಿಂಗ್ ಶೀಘ್ರದಲ್ಲಿ ಸಿದ್ಧತೆ–ಧೀರಜ್ ಮುನಿರಾಜು
ದೊಡ್ಡಬಳ್ಳಾಪುರ :ದೊಡ್ಡಬಳ್ಳಾಪುರದಲ್ಲಿ 150 ಕೋಟಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲಿಂಗ್ ಮಾಡುವುದಕ್ಕೆ ಇಲಾಖಾ ಮಟ್ಟದಲ್ಲಿ ಮಾತುಕಥೆ ನಡೆದಿದ್ದು, ಬಾಶೆಟ್ಟಿಹಳ್ಳಿ ವಿಭಾಗದಲ್ಲಿ ಮೊದಲಿಗೆ ಅಂಡರ್ ಗ್ರೌಂಡ್ ಕೇಬಲಿಂಗ್ ಕಾರ್ಯ ನಡೆಯಲಿದೆ, ಇದರಿಂದ ಬಿಲ್ಲಿಂಗ್ ಹೆಚ್ಚಾಗಿ ಇದರಿಂದ ಬರುವ ಆದಾಯದಲ್ಲಿ ನಗರದಲ್ಲಿಯೂ ಸಹ ಅಂಡರ್ ಗ್ರೌಂಡ್ ಕೇಬಲಿಂಗ್ ಕಾರ್ಯ ಮಾಡಬಹುದೆಂದು ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು.
ನಗರ ಭಾಗದ ಬೆಸ್ಕಾಂ ಕಚೇರಿ ಮುಂಭಾಗ ಆಯೋಜನೆ ಮಾಡಲಾಗಿದ್ದ ಬೆಸ್ಕಾಂ ಗ್ರಾಹಕರ ಕುಂದುಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ಪಂಪ್ ಸೆಟ್ ಗಳಿಗಾಗಿ ಯಾವ ರೀತಿಯ ವಿದ್ಯುತ್ ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೋ ಹಾಗೆಯೇ ನಗರದಲ್ಲಿ ವಿದ್ಯುತ್ ಚಾಲಿತ ನೇಕಾರರು ಸಹ ವಿದ್ಯುತ್ ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ, ತಾಲೂಕಿನ ರೈತರು ಪುಷ್ಪೋದ್ಯಮ ಮತ್ತು ಅಡಿಕೆ ಬೆಳೆಯುತ್ತಿದ್ದು ಪಂಪ್ ಸೆಟ್ ಗಳ ಮೇಲೆ ಅವಲಂಬಿತರಾಗಿದ್ದಾರೆ, ತಾಲೂಕಿನಲ್ಲಿ 10140 ಡಿಸಿ ಗಳಿದ್ದು 32 ಡಿಸಿಗಳನ್ನ ಅಪ್ ಗ್ರೇಡ್ ಮಾಡಲಾಗಿದೆ ಎಂದರು
ನಗರದಲ್ಲಿ ನೇಕಾರಿಕೆ ಉದ್ಯಮ ಪ್ರಮುಖವಾಗಿದ್ದು. ವಿದ್ಯುತ್ ವ್ಯತ್ಯಯ ಮತ್ತು ವೋಲ್ಟೇಜ್ ಸಮಸ್ಯೆಯಿಂದ ನೇಕಾರರು ತೊಂದರೆ ಅನುಭವಿಸುತ್ತಿದ್ದಾರೆ . ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಶೀಘ್ರಗತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅವಶ್ಯಕ ಸಹಕಾರ ಕಲ್ಪಿಸುವ ಮೂಲಕ ತಾಲೂಕಿನ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳು ಎಫ್ 15 ಲೈನ್ ನಿಂದ ಎಫ್ 10ಗೆ ಬದಲಿಸುವಂತೆ ಮನವಿ ಮಾಡಿದರು. ಶ್ರೀ ರಾಮನಹಳ್ಳಿ ಗ್ರಾಮದಲ್ಲಿ 13 ಬೋರ್ ವೇಲ್ ಗೆ ಒಂದೇ ಟ್ರಾನ್ಸ್ಫಾರ್ಮರ್ ಇದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ರವಿಕುಮಾರ್ ಮನವಿ ಮಾಡಿದರು . ನಗರದ ಶಾಂತಿನಗರದಲ್ಲಿ ಸದಾ ಸಿಂಗಲ್ ಫೇಸ್ ಸಮಸ್ಯೆ ಎದುರಾಗುತ್ತಿದ್ದು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ನಿವಾಸಿಗಳು ಮನವಿ ಮಾಡಿದರು.
ಟ್ರಾನ್ಸ್ಫಾರ್ಮರ್ ಗಳಿಂದ ಅಗತ್ಯಕ್ಕಿಂತ ಹೆಚ್ಚು ಕನೆಕ್ಷನ್ ನೀಡುತ್ತಿರುವ ಕಾರಣ ವೋಲ್ಟೇಜ್ ಸಮಸ್ಯೆಯಾಗುತ್ತಿದ್ದು. ಈ ಸಮಸ್ಯೆಯಿಂದಾಗಿ ನೇಕಾರಿಗೆ ಉದ್ಯಮ ಸಂಪೂರ್ಣ ನೆಲಕಚ್ಚುತ್ತಿದೆ ನೂತನ ಟ್ರಾನ್ಸ್ಫಾರ್ಮರ್ ಗಳ ಅಳವಡಿಕೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ನಗರದಲ್ಲಿ 15 ಅಡಿ ಅಥವಾ ಅದಕ್ಕಿಂತಲೂ ಚಿಕ್ಕ ರಸ್ತೆಗಳಿರುವ ಕಾರಣ ಟ್ರಾನ್ಸ್ಫಾರ್ಮರ್ ಗಳನ್ನು ಅಳವಡಿಸಲು ಸೂಕ್ತ ಸ್ಥಳದ ಕೊರತೆ ಎದುರಾಗಿದ್ದು . ಸಾರ್ವಜನಿಕರು ತಮ್ಮ ಮನೆಗಳ ಮುಂಭಾಗ ಟ್ರಾನ್ಸ್ಫಾರ್ಮರ್ ಅಳವಡಿಕೆ ಮಾಡಲು ಒಪ್ಪುವುದಿಲ್ಲ. ಸಾರ್ವಜನಿಕರು ಸೂಕ್ತ ಸ್ಥಳವನ್ನು ಗುರುತಿಸಿ ನೀಡುವ ಮೂಲಕ ಬೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಬೇಕಾಗಿ ಬೆಸ್ಕಾಂ ಸಿಬ್ಬಂದಿ ಮನವಿ ಮಾಡಿದರು
ಸಭೆಯಲ್ಲಿ ನಗರಸಭಾ ಸದಸ್ಯರಾದ ಪದ್ಮನಾಬ್ , ಹಂಸಪ್ರಿಯ, ಬಂತಿ ವೆಂಕಟೇಶ್ , ನಾಗರತ್ನಮ್ಮ ಕೃಷ್ಣಮೂರ್ತಿ ಸೇರಿದಂತೆ ಬೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು