ಆಸ್ಪತ್ರೆಯ ವಿವಿದ ಕಾಮಗಾರಿ ಶಂಕುಸ್ಥಾಪನೆ ಮುಂದೂಡಿಕೆ– ಬಿ. ಜೆ. ಪಿ. ನಗರಸಭಾ ಸದಸ್ಯರ ಆಕ್ರೋಶ
ದೊಡ್ಡಬಳ್ಳಾಪುರ : ತಾಯಿ-ಮಗು ಆಸ್ಪತ್ರೆಯ ವಿವಿಧ ಕಾಮಗಾರಿಗಳ ಶಂಕು ಸ್ಥಾಪನಗೆ ಕರೆದ ಅಧಿಕಾರಿಗಳ ಕಾರ್ಯಕ್ರಮವನ್ನು ಏಕಾಏಕಿ ರದ್ದು ಮಾಡಿದ್ದಾರೆ, ಅಧಿಕಾರಿಗಳಿಂದ ಜನಪ್ರತಿನಿಧಿಗಳ ತೋಜೋವಧೆ ಮಾಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಗರಸಭಾ ಸದಸ್ಯರು ತಾವೇ ಗುದ್ದಲಿ ಪೂಜೆ ನೆರವೇರಿಸಿ ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ನಗರದ ತಾಯಿ-ಮಗು ಆಸ್ಪತ್ರೆಯ ಅವರಣದಲ್ಲಿ ಸುಮಾರು 5 ಕೋಟಿ ವೆಚ್ಚದ ಕಾಂಪೌಂಡ್, ಸ್ವಾಗತ ಕಮಾನು ಮತ್ತು ಶಿಫ್ಟ್ ಕಾಮಗಾರಿಗಳ ಶಂಕು ಸ್ಥಾಪನಯ ಕಾರ್ಯಕ್ರಮವನ್ನು ಇಂದು ಬೆಳಗ್ಗೆ ಅಯೋಜನೆ ಮಾಡಲಾಗಿದ್ದು, ಆರೋಗ್ಯಾಧಿಕಾರಿಗಳು ಕಾರ್ಯಕ್ರಮಕ್ಕೆ ಬರುವಂತೆ ಜನಪ್ರತಿನಿಧಿಗಳಿಗೆ ಆಹ್ವಾನವನ್ನು ನೀಡಿದ್ರು, ಬೆಳಗ್ಗೆ 8 ಗಂಟೆಗೆ ದೊಡ್ಡಬಳ್ಳಾಪುರ ನಗರಸಭಾ ಸದಸ್ಯರು ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದಾರೆ, ಈ ವೇಳೆ ಕಾರ್ಯಕ್ರಮ ರದ್ದಾಗಿರುವ ವಿಚಾರ ತಿಳಿದಿದೆ, ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಅಕ್ರೋಶಗೊಂಡ ಬಿಜೆಪಿ ನಗರಸಭಾ ಸದಸ್ಯರು ಆರೋಗ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.
ಪ್ರತಿಭಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಸಣ್ಣದೊಂದು ಮಾಹಿತಿ ನೀಡಿದೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ತೋಜೋವಧೆಯ ಕೆಲಸವನ್ನ ಅಧಿಕಾರಿಗಳು ಮಾಡಿದ್ದಾರೆ, ಕಾರ್ಯಕ್ರಮ ರದ್ದಾಗಲು ಕಾರಣ ಕೇಳಿದ್ರೆ ಜಿಲ್ಲಾ ಉಸ್ತುವಾರಿಗಳ ನೆಪವನ್ನ ಹೇಳುತ್ತಿದ್ದಾರೆ, ಪದೇ ಪದೇ ಕಾರ್ಯಕ್ರಮವನ್ನು ಮುಂದೂಡಿ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ, ಮತ್ತೊಂದು ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನ ರದ್ದು ಮಾಡಿದ್ದು, ಅಧಿಕಾರಿಗಳ ವರ್ತನೆಗೆ ಬೇಸತ್ತು ನಾವೇ ಗುದ್ದುಲಿ ಪೂಜೆ ಮಾಡುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಸುಧಾಲಕ್ಷ್ಮೀನಾರಾಯಣ್, ನಗರಸಭಾ ಸದಸ್ಯರಾದ ಪದ್ಮನಾಬ್, ಸುಮಿತ್ರ ಆನಂದ್,ಹಂಸಪ್ರಿಯ,ವತ್ಸಲ,ಬಾಸ್ಕರ್,ಶಿವರಾಜ್,ಲಕ್ಷೀಪತಿ, ಮುಖಂಡರಾದ ಗೋಪಿ, ಮುದ್ದಪ್ಪ,ಕೆ.ಎಚ್.ವೆಂಕಟರಾಜು ಸೇರಿದಂತೆ ಹಲವಾರು ಬಿ.ಜೆ.ಪಿ ಮುಖಂಡರು ಬಾಗವಹಿಸಿದ್ದರು.