ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದ CEO ಪ್ರಭು ಜಿ
ಡಾಕ್ಟರ್ ಜಿ ಪರಮೇಶ್ವರ್ ರವರ ಆದೇಶದ ಮೇರೆಗೆ ತೋವಿನಕೆರೆ ಹಿರಿಯ ಪ್ರೌಢ ಶಾಲೆಗೆ ಭೇಟಿ
ತುಮಕೂರು:ಜಿಲ್ಲೆಯ,ಕೊರಟಗೆರೆ ತಾಲೂಕು.ಸಿ ಎನ್ ದುರ್ಗ ಹೋಬಳಿ,ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋವಿನಕೆರೆ ಗ್ರಾಮದಲ್ಲಿ.ಪಿಎಂ ಶ್ರೀ ಸರ್ಕಾರಿ ಪ್ರಾಥಮಿಕ ಪಾಠಶಾಲೆ ತೋವಿನಕೆರೆ ಇದರ ಆವರಣದಲ್ಲಿ,,
ಇಂದು ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೋವಿನಕೆರೆ ಶಾಲೆಯಲ್ಲಿ ಒಂಬತ್ತನೇ ತರಗತಿ
ಪ್ರಾರಂಭಿಸುವ ಸಲುವಾಗಿ ಮಾನ್ಯ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಪ್ರಭು ಜಿ ರವರು ಮಾತನಾಡಿ
ತೋವಿನಕೆರೆಯ ಪ್ರಾಥಮಿಕ ಶಾಲೆಯು ಒಂದು ಮಾದರಿ ಶಾಲೆಯಾಗಿದ್ದು. 250 ರಿಂದ 300 ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿರುವ ಒಂದು ಪ್ರಭುದ್ಧ ಶಾಲೆ ಅನೇಕ ವರ್ಷಗಳಿಂದ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬರುತ್ತಿದ್ದು. ಇಲ್ಲಿನ ಮೂಲಭೂತ ಕೊರತೆ ಎಂದರೇ ಆಂಗ್ಲ ಮಾಧ್ಯಮದ ಪ್ರೌಢಶಾಲೆ ಇಲ್ಲ ಎಂಬುದು ಈ ಹಿಂದೆ ಮಾನ್ಯ ಉಸ್ತುವಾರಿ ಸಚಿವರು ಗೃಹ ಸಚಿವರು ಡಾಕ್ಟರ್ ಜಿ ಪರಮೇಶ್ವರ್ ಅವರು ಭೇಟಿ ನೀಡಿದ್ದು. ಈ ಶಾಲೆಯ ಮೂಲಭೂತ ಸೌಕರ್ಯಗಳ ಬಗ್ಗೆ ಗುರುತಿಸಿದ್ದು. ಅವರ ಆದೇಶದ ಮೇರೆಗೆ ಶಾಲೆಗೆ ಭೇಟಿ ನೀಡಿದ್ದು. ಉದ್ಘಾಟನೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಗುರುತಿಸಿದ್ದು. 2025 26 ನೇ ಸಾಲಿನಲ್ಲಿ 9ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭದ ಬಗ್ಗೆ ಹೇಳಿದ್ದು. ಆ ಎಲ್ಲಾ ಪ್ರಸ್ತಾವನೆ ಸರ್ಕಾರದ ಅಂತಿಮ ಹಂತದಲ್ಲಿದೆ. ಶಾಲೆಗೆ ಅಗತ್ಯ ಸಂಪನ್ಮೂಲಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದು ಈ ವರ್ಷದಿಂದ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ.
ಒಂದು ಮಾದರಿ ಶಾಲೆಯ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವ ಮುಖ್ಯವಾಗಿ ಬೇಕಾಗಿದ್ದು. ಅಸ್ಮೆಂಟ್ ಎಂಬುವರು ತೋವಿನಕೆರೆ ಶಾಲೆಗೆ ಕಟ್ಟಡಗಳನ್ನು ಕಟ್ಟಿಸಿ ಕೊಟ್ಟು ಮಾದರಿ ಶಾಲೆಗೆ ಒಂದು ಮೆಟ್ಟಿಲು ಹಾಕಿರುತ್ತಾರೆ.
ಮಾನ್ಯ ಗೃಹ ಸಚಿವರು ಡಾಕ್ಟರ್ ಜಿ ಪರಮೇಶ್ವರ್ ರವರು ಹೋಬಳಿಗಳಲ್ಲಿ ಒಂದೊಂದು ಮಾದರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನ ಹೊಂದಿದ್ದು. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಬದಲಾಯಿಸುವ ಮುನ್ನುಡಿಯನ್ನು ಬರೆಯಲಾಗಿದೆ. ಇದಕ್ಕೆ
ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರಿಜಮ್ಮ ಪಿಡಿಒ ಲಕ್ಷ್ಮಿ ನಾರಾಯಣ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಸನ್ ಕುಮಾರ್ ಟಿಡಿ. ರವರ ಕಾರ್ಯಕ್ಷಮತೆ ಇದೆ ಎಂದು ಹೇಳಿ
ಸ್ಥಳ ಪರಿಶೀಲಿಸಿ 9ನೇ ತರಗತಿ ಪ್ರಾರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಶ್ರೀಮತಿ ಗಿರಿಜಾ ಬಿಹೆಚ್.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಟರಾಜು ಸಿ ವಿ.
ಮಾನ್ಯ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಡಾಕ್ಟರ್ ನಾಗಣ್ಣ.ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಧಿಕಾರಿಗಳಾದ ಅಪೂರ್ವ ಅನಂತರಾಮು.
ತೋವಿನಕೆರೆ ಶಾಲೆಯ. ಎಸ್ ಟಿ ಎಂ ಸಿ ಅಧ್ಯಕ್ಷರಾದ ಮಂಜುನಾಥ್ ಟಿ ಎ..ಎಲ್ಲಾ ಗ್ರಾಮ ಪಂಚಾಯಿತಿ. ಸದಸ್ಯರುಗಳು, ನಾಗರಾಜು ಟಿ ಆರ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ , ಮಾಜಿ ತಾಲೂಕು ಪಂಚಾಯತಿ ಸದಸ್ಯರು ಜ್ಯೋತಿ ಎಸ್ ಎಲ್ ಎನ್ ಸ್ವಾಮಿ..
ಹಾಗೂ, ಮುಖ್ಯ ಶಿಕ್ಷಕರಾದ ಸಿದ್ದಪ್ಪನವರು, ಶಿಕ್ಷಕರುಗಳು, ಉಪಸ್ಥಿತರಿದ್ದರು.
ವರದಿ ಭರತ್ ಕೆ