ತಾವರೆಕೆರೆಯ 2002 2003 ನೇ ಸಾಲಿನ ಎಸ್ ಎಸ್ ಎಲ್ ಸಿ ಯ ಹಳೆ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕಮ

ತಾವರೆಕೆರೆ:ತಾವರೆಕೆರೆಯ 2002 2003 ನೇ ಸಾಲಿನ ಎಸ್ ಎಸ್ ಎಲ್ ಸಿ ಯ ಹಳೆ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ

ತಾವರೆಕೆರೆ: ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2002-2003 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ .

ಕಾರ್ಯಕ್ರಮ ಆರಂಭಕ್ಕೂ ಮುನ್ನ ತಾವರೆಕೆರೆ ಹೆಬ್ಬಾಗಿಲಿನಿಂದ ಶಿಕ್ಷಕರನ್ನು ವಿದ್ಯಾರ್ಥಿಗಳು ಡೊಳ್ಳು ಕುಣಿತ , ವೀರಗಾಸೆ , ದಾರಿ ಉದ್ದಕ್ಕೂ ಹೂವಿನ ಮಳೆಯೇ ಸುರಿಸಿ ಕಾರ್ಯಕ್ರಮದ ಸ್ಥಳಕ್ಕೆ ಕರೆತಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕರ್ನಾಟಕ ಮಾತೆಗೆ ಪೂಜೆ ಸಲ್ಲಿಸಿ ಹಾಗೂ ಮರಣ ಹೊಂದಿದ ಹಳೆ ವಿದ್ಯಾರ್ಥಿ ಹಾಗೂ ಹಳೇ ಶಿಕ್ಷಕರು ನೆನೆದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಚರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಹಾಗೂ ತಾವರೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ರವರು ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ವಾಕ್ಯಕ್ಕೆ ಇಂದು ಉತ್ತಮ ಅರ್ಥ ದೊರೆತಂತೆ ಆಗಿದೆ ಕಾರಣ ನಮ್ಮ ಶಿಕ್ಷಕರು ನೀಡಿರುವ ಶಿಕ್ಷಣದಿಂದ ಉನ್ನತ ಸ್ಥಾನಗಳಲ್ಲಿ ನಮ್ಮ ಸ್ನೇಹಿತರು ಇದ್ದಾರೆ ಪ್ರಸ್ತುತ ತಾಶಿಲ್ದಾರ್ ಹಾಗೂ ಪೊಲೀಸ್ ,ರಾಜಕೀಯ, ಶಾಲಾ ಶಿಕ್ಷಕರು, ಪ್ರಾಂಶುಪಾಲರು, ರೈತರು ತಮ್ಮದೇ ಆದ ಖಾಸಗಿ ಕಂಪನಿಗಳನ್ನು ನಡೆಸುತ್ತಾ ಹಾಗೂ ಉನ್ನತ ಶ್ರೇಣಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇವುಗಳಿಗೆ ಕಾರಣಕರ್ತರಾದ ನಮ್ಮ ಶಿಕ್ಷಕರಿಗೆ ನಮ್ಮ ಸ್ನೇಹಿತರ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.

ಶಾಲಾ ಶಿಕ್ಷಕರಾದ ಶಿವಕುಮಾರ್ ಮಾತನಾಡಿ ಸುಮಾರು 23 ವರ್ಷಗಳ ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಉತ್ತಮ ಕಾರ್ಯಕ್ರಮವನ್ನು ಮಾಡಿದ್ದಾರೆ ನಾವು ಹೇಳಿಕೊಟ್ಟ ವಿದ್ಯೆಯಿಂದ ಇಂದು ನಮ್ಮ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಇರುವುದನ್ನು ಕಂಡು ನಮ್ಮ ಜೀವನ ಸಾರ್ಥಕ ಎಂಬ ಭಾವನೆ ಮೂಡುತ್ತಿದೆ ಇನ್ನೊಂದು ಬೇಸರದ ವಿಚಾರ ಏನೆಂದರೆ ಅಂದಿನ ವಿದ್ಯಾರ್ಥಿಗಳಲ್ಲಿ ಇದ್ದ ಪರಿಶ್ರಮ ಶ್ರದ್ಧೆ ಇಂದಿನ ಸರ್ಕಾರಿ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಸಹ ಅತಿ ಕಡಿಮೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಳೆ ಶಿಕ್ಷಕರಾದ ಹನುಮಂತಪ್ಪ , ರಾಜಣ್ಣ , ನಾಗೇಂದ್ರಪ್ಪ , ರೇವತಿ , ಚಲಪತಿ , ರಂಗಪ್ಪ , ಲೀಲಾವತಿ ,ಚಂದ್ರಶಣೈ , ವತ್ಸಲಾ , ಪತ್ತರ್ , ಲಕ್ಷಣ , ಶಿವಕುಮಾರ್ , ಸುರೇಶ್ , ಪ್ರತಿಭಾ , ವೆಂಕಟರಮಣಪ್ಪ , ಶಾಂತಮ್ಮ , ಮಾರುತೇಶ್ , ಲಕ್ಷ್ಮಿ , ಮಂಜುನಾಥ್ ಹಾಗೂ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮದಲ್ಲಿ ಹಾಜರಿದ್ದರು.