ಕೃಷಿಯೊಂದಿಗೆ ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು. ಶಾಸಕ.ಕೆ.ಷಡಕ್ಷರಿ
ತಿಪಟೂರು :ನಗರದ ಕಲ್ಪತರು ತಾಂತ್ರಿಕಾ ಮಹಾವಿದ್ಯಾಲಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಿಪಟೂರು ತಾಲ್ಲೋಕು , ರಾಜ್ಯ ರೈತ ಸಂಘ, ಹಸಿರು ಸೇನೆ, ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶಿಷ್ಟ ಹಾಗೂ ವಿನೂತನವಾಗಿ ಕೃಷಿ ಸಾಹಿತ್ಯ ಸಮ್ಮೇಳನ ನಡೆಸಲಾಯಿತು.
ಶಾಸಕ ಕೆ.ಷಡಕ್ಷರಿ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ,ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು,ಕೃಷಿ ಲಾಭದಾಯಕವಾಗಿಲ್ಲ ಎಂದು ಆಸಕ್ತಿ ಕಡಿಮೆ ಮಾಡಿಕೊಳ್ಳುವ ಬದಲಾಗಿ ಕೃಷಿಯಲ್ಲಿ ನಡೆಯುವ ಹೊಸಹೊಸ ಆವಿಷ್ಕಾರಗಳನ್ನ ಅಳವಡಿಸಿಕೊಂಡು ಲಾಭದಾಯಕ ಕ್ಷೇತ್ರವಾಗುವತ್ತ ಹೆಜ್ಜೆಇಟ್ಟಾಗ,ಸ್ವಾವಲಂಭನೆ ಬದುಕು ರೂಪಿಸಿಕೊಳ್ಳ ಬಹುದು.ರೈತರು ಕೃಷಿ ಕ್ಷೇತ್ರ ಲಾಭದಾಯವಲ್ಲ ಎಂದು ಕೃಷಿ ಚಟುವಟಿಕೆಯಿಂದ ವಿಮುಖವಾಗುತ್ತಿದ್ದಾರೆ ಇದನ್ನು
ಮನಗಂಡು ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ
ತರಲಾಗಿದೆ ಹೊಸ ಹೊಸ ತಂತ್ರಜ್ಞಾನ ಪರಿಚಯಿಸಿ ಅವುಗಳನ್ನ ಅಳವಡಿಸಿಕೊಳ್ಳಲು ಅಗತ್ಯ ಆರ್ಥಿಕ ನೆರವು ನೀಡಲಾಗುತ್ತಿದೆ. ಸಹಕಾರಿ ಬ್ಯಾಂಕ್ನಿಂದ 15 ಲಕ್ಷದವರೆಗೆ ಶೂನ್ಯ
ಬಡ್ಡಿದರ ಹಾಗೂ 15 ಲಕ್ಷದವರೆಗೆ ಶೇ 3 ಬಡ್ಡಿದರದಲ್ಲಿ ಸಾಲ
ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ರೈತರ ಸಮಸ್ಯೆ
ಬಗೆಹರಿಸಲು, ಸರ್ಕಾರದ ಸವಲತ್ತು ತಲುಪಿಸಲು ರೈತರು ಯಾರು
ಎಂಬುದನ್ನು ಮೊದಲು ಗುರುತಿಸಬೇಕಿದೆ. ಕೃಷಿ ಸಾಹಿತ್ಯವು ದೊಡ್ಡ
ಸಂಶೋಧನೆ ಪಾಠವಾಗಿದ್ದು, ಭೂಮಿ ಮೇಲೆ ಬರೆದ ಅನ್ನದ
ಅಕ್ಷರಗಳು ಚಳವಳಿಯ ಆಲೋಚನೆಯಾಗಿದೆ. ಕೃಷಿ ಪಠ್ಯಗಳಲ್ಲಿ ರೈತನ
ಚಿಂತನೆ, ತತ್ವ, ಕಾರ್ಮಿಕನ ಬದುಕು, ನೀರು, ಮಣ್ಣು, ದೂಳು
ಸೇರಬೇಕಾಗಿದೆ ಪ್ರಾಥಮಿಕ ಹಂತದಿಂದ ಎಲ್ಲಾ ಹಂತದಲ್ಲಿ ಶಾಲಕಾಲೇಜುಗಳಲ್ಲಿ ಕೃಷಿ ಒಂದು ವಿಷಯವಾಗಿ ಬೋದಿಸಬೇಕುಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಕೆ.ಟಿ.ಗಂಗಾಧರ್
ಮಾತನಾಡಿ, ದೇಶದಲ್ಲಿ ರೈತರ ಸಾವು, ಹೆಣ್ಣು ಮಕ್ಕಳ ಅನಾರೋಗ್ಯ,
ಮಕ್ಕಳಲ್ಲಿ ಪೌಷ್ಠಿಕಾಂಶದ ಆಹಾರ ಕೊರತೆ ಏಕೆ ಆಗುತ್ತದೆ ಎಂಬುದನ್ನು
ನೋಡಬೇಕಿದೆ. ರೈತನ ಬದುಕು, ಜೀವನ ಮಟ್ಟ, ಪ್ರಮಾಣ,
ಗುಣಮಟ್ಟ ಹೇಗಿದೆ ಎಂಬುದರ ಮೇಲೆ ಜಿಡಿಪಿ
ನಿರ್ಧಾರವಾಗಬೇಕಿದೆ. ವ್ಯಕ್ತಿ ಖರೀದಿ ಸಾಮರ್ಥ್ಯದ ಮೇಲೆ
ನಿರ್ಧರಿಸಬೇಕಿದೆ. ರೈತರ ಭೂಮಿಯನ್ನು ಮೌಲ್ಯಾಧಾರಿತವಾಗಿ
ಬದಲಾವಣೆ ಮಾಡಬೇಕಿದೆ, ಮಾರುಕಟ್ಟೆ ಕೌಶಲ ಕಲಿಸಬೇಕಿದೆ
ಎಂದು ಹೇಳಿದರು.
ಗೋಷ್ಠಿಯಲ್ಲಿ ಹೊಸೂರಿನ ಗಾಂಧಿ ಸಹಜ ಬೇಸಾಯ ಶಾಲೆಯ ತೆಂಗು
ಮತ್ತು ಅಡಿಕೆ-ವರ್ತಮಾನ ಮತ್ತು ಭವಿಷ್ಯ- ಸಂವಾದ, ಸಂತೆಶಿವರ
ಬಸವರಾಜು ಅವರಿಂದ ‘ಬಹು ಬೆಳೆ ಪದ್ಧತಿ ನನ್ನ ಪ್ರಯೋಗಗಳು’
ಬಗ್ಗೆ ಸಂವಾದ, ಬೆಂಗಳೂರು ಜಿಕೆವಿಕೆ ಕಾಲೇಜಿನ ಪ್ರಾಂಶುಪಾಲೆ
ಸುಕನ್ಯ ಅವರಿಂದ ‘ಸಿರಿಧಾನ್ಯಗಳ ಉತ್ಪಾದನೆ ಸಂಸ್ಕರಣೆ, ವಿತರಣೆ’
ಸಣ್ಣ ರೈತರ ಸಾಧ್ಯತೆಗಳು ಹಾಗೂ ಕೃಷಿ ನೀತಿಯ ಅದ್ವಾನಗಳ ಬಗ್ಗೆ
ಜಿ.ಎನ್.ನಾಗರಾಜು ಅವರಿಂದ ಸಂವಾದ ನಡೆದವು.
ಕ.ಸಾ.ಪ ಅಧ್ಯಕ್ಷ ಬಸವರಾಜಪ್ಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ
ಸುದರ್ಶನ್ ಎಚ್.ಎಂ, ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ
ಸುಧಾಕರ್ ಎಚ್.ಜಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
ಚಂದ್ರಶೇಖರ್, ರೈತ ಸಂಘದ ಮುಖಂಡ ಬಿ.ಯೋಗೀಶ್ವರ ಸ್ವಾಮಿ,ದೇವರಾಜು ತಿಮ್ಲಾಪುರ ಪ್ರಾಂಶುಪಾಲ
ಎಮ್.ಡಿ.ಶಿವಕುಮಾರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ
ಜಯನಂದಯ್ಯ, ಕೃಷಿಕ ಸಮಾಜದ ಪ್ರತಿನಿಧಿಗಳು ಪಾಲ್ಗೊಂಡಿದರು
ವರದಿ: ಮಂಜು ಗುರುಗದಹಳ್ಳಿ