ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿ, ಸೌಲಭ್ಯ ಸದುಪಯೋಗಕ್ಕೆ ಸಲಹೆ
ವಿಜಯಪುರ: ಪಟ್ಟಣದ ಗುರಪ್ಪನಮಠದ ಪಿ.ಎಂ.ಶ್ರೀ. ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ನಿಮ್ಮ ಮಕ್ಕಳನ್ನು ದಾಖಲು ಮಾಡಿಸಿ, ಸರಕಾರ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಶಾಲೆಯ ಮುಖ್ಯಶಿಕ್ಷಕಿ ಸುಜಾತಮ್ಮ ಮಾತನಾಡಿ, ನಮ್ಮದು ಕೇಂದ್ರ ಸರ್ಕಾರ ಪುರಸ್ಕೃತ ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಶೀರ್ಷಿಕೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಯಾಗಿದೆ. ಎಲ್.ಕೆ.ಜಿ ಯಿಂದ 8 ನೇ ತರಗತಿಯವರೆಗೆ ದ್ವಿಭಾಷಾ ಮಾಧ್ಯಮದಲ್ಲಿ ಭೋಧನೆ ಮಾಡಲಾಗುತ್ತದೆ. ಎಲ್.ಕೆ.ಜಿ ಯಿಂದ 8 ನೇ ತರಗತಿಯವರೆಗೆ ಉಚಿತ ಗುಣಾತ್ಮಕ ಶಿಕ್ಷಣ, ನುರಿತ ವಿಷಯವಾರು ಶಿಕ್ಷಕರಿಂದ ಪ್ರಾಯೋಗಿಕ ವಿಧಾನದಲ್ಲಿ ಬೋಧನೆ, ಇಂಟ್ರಾಕ್ಟೀವ್ ಬೋರ್ಡ್ ಬಳಕೆ ಮಾಡಿಕೊಂಡು, ಪಾಠ ಬೋಧನೆ. ಉತ್ತಮ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹೊಂದಿದೆ. ಟ್ಯಾಬ್ ಬಳಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆಗೆ ಉತ್ತೇಜನ.
ಉಚಿತ ಸಮವಸ್ತ್ರ, ಟೈ, ಬೆಲ್ಟ್. ಗುರುತಿನ ಚೀಟಿ, ಪಠ್ಯಪುಸ್ತಕ, ಶೂ-ಸಾಕ್ಸ್, ಮಧ್ಯಾಹ್ನ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ, ಮೊಟ್ಟೆ,ಬಾಳೆಹಣ್ಣು, ಬ್ಯಾಗ್, ನೋಟ್ ಬುಕ್ ಇತರ ಕಲಿಕಾ ಸಾಮಾಗ್ರಿಗಳು, ಉತ್ತಮವಾದ ಹಸಿರು ವಾತಾವರಣ, ಸುಂದರವಾದ ಹೂತೋಟ, ಕೈತೋಟ, ಒಳಾಂಗಣ & ಹೊರಾಂಗಣ ಆಟಗಳು, ದೇಸಿ ಕ್ರೀಡೆಗಳು, ಸೇವಾದಳ, ಸ್ಕೌಟ್ಸ್ & ಗೈಡ್. ತಂಡಗಳ ರಚನೆ. ಸಮಾಜ ವೃತ್ತ, ಕಲಾ ವೃತ್ತ, ಭಾಷಾ ವೃತ್ತ, ವಿಜ್ಞಾನ ವೃತ್ತ, ಗಣಿತ ವೃತ್ತ. ಪ್ರಯೋಗಾಲಯಗಳು. ಆಪ್ತ ಸಮಾಲೋಚನೆ, ಉಚಿತ ಕ್ಷೇತ್ರ ಭೇಟಿ ಮತ್ತು ಅನುಭವಾತ್ಮಕ ಭೇಟಿ. ಪ್ರತಿಭಾ ಕಾರಂಜಿ, ಕಲಿಕಾ ಹಬ್ಬ, ಕ್ರೀಡಾಕೂಟ, ಎನ್.ಎಂ.ಎಂ.ಎಸ್, ಇನ್ಸ್ಫೈರ್ ಆವಾರ್ಡ್ ನವೋದಯ ಸ್ಪರ್ಧೆಗಳಿಗೆ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
ಉಚಿತ ಕಂಪ್ಯೂಟರ್ ಶಿಕ್ಷಣ ಮತ್ತು ಸಂಪೂರ್ಣ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗುತ್ತದೆ. ಯೋಗ ಶಿಕ್ಷಣ, ಕರಾಟೆ ಶಿಕ್ಷಣ ಇತ್ಯಾದಿ ದೇಸಿ ಕಲೆಗಳ ತರಬೇತಿಗಳು, ತಜ್ಞರಿಂದ ಮಾಹಿತಿ ಕಾರ್ಯಾಗಾರ. ಉತ್ತಮ ಶ್ರೇಣಿಯ ಗ್ರಂಥಭಂಡಾರ. ಸ್ಮಾರ್ಟ್ ಕ್ಲಾಸ್, ವಿಶಾಲಾವಾದ ಸಭಾಂಗಣ, ಉತ್ತಮ ಶೌಚಾಲಯ, ಉತ್ತಮ ಬಯಲು ರಂಗ ಮಂದಿರ, ಶಿಶುಸ್ನೇಹಿ ಅಸನಗಳ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ ಎಂದರು. ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.