‘ಯುವ ಸಮುದಾಯಕ್ಕೆ ಗಾಂಧಿ – ಕಾರ್ಯಗಾರಕ್ಕೆ ಚಾಲನೆ ನೀಡಿದ ಐಜಿಪಿ ರವಿಕಾಂತೆ ಗೌಡ

ಹರಿಹರ: ಮಾನವ ಬಂಧುತ್ವ ಹಾಗೂ ಮೈತ್ರಿವನ ಸಹಯೋಗದಲ್ಲಿ ದಾವಣೆಗೆರೆಯ ಹರಿಹರದಲ್ಲಿರುವ ಪ್ರೊ. ಬಿ ಕೃಷ್ಣಪ್ಪ ಸ್ಮಾರಕ ಭವನದಲ್ಲಿ ಪ್ರಜ್ಞಾವಂತ ಭಾರತ ತಂಡದ ವತಿಯಿಂದ ನಡೆದ “ಯುವ ಸಮುದಾಯಕ್ಕೆ ಗಾಂಧಿ” ಶುಕ್ರವಾರರಂದು 3 ನೇ ಕಾರ್ಯಗಾರಕ್ಕೆ ದಾವಣಗೆರೆ ಪೂರ್ವ ವಲಯ ಐಜಿಪಿ ರವಿಕಾಂತೇ ಗೌಡ ರವರು ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಗಾಂಧಿ ತತ್ವಗಳ ಬಗ್ಗೆ ಸಂವಾದ ಮಾಡುತ್ತಾ ಗಾಂಧಿ ಮಾರ್ಗಗಳನ್ನು ಪ್ರಸ್ತುತ ಜನಾಂಗಕ್ಕೆ ಪಸರಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಯುವಜನಾಂಗಕ್ಕೆ ಕರೆ ನೀಡಿದರು. ಎಲ್ಲಿಯವರೆಗೆ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರನ್ನು ನಮಗೆ ಅರ್ಥ ಮಾಡಲು ಆಗುವುದಿಲ್ಲವೋ ಆ ಬದುಕು ಶೂನ್ಯವಾಗುವುದು , ಮಾತ್ರವಲ್ಲದೆ ಗಾಂಧೀಜಿಯನ್ನು ಅರ್ಥೈಸಿದರೆ ನಮ್ಮ ಬದುಕಿನಲ್ಲಿ ಏನೇನು ಬದಲಾವಣೆಗಳು ಆಗಬಹುದು ಎಂಬುವುದರ ಕುರಿತು ಮಹತ್ತರವಾದ ಕಾರ್ಯಕ್ರಮ ಇದೆ ಎಂದು ಬಣ್ಣಿಸಿದರು.
ಕಾರ್ಯಗಾರದ ನಿರ್ದೇಶಕರಾರ ವಿಜಯ್ ಹನಕೆರೆ, ಸಂಪನ್ಮೂಲ ವ್ಯಕ್ತಿಗಳಾಗಿ ಅನಂತ ಶ್ರಾಂದೇಯ, ಜಗದೀಶ್ ಉಪಸ್ಥಿತರಿದ್ದರು.